У нас вы можете посмотреть бесплатно ಯಕ್ಷಗಾನ । ವಸಂತಗಾನ । ಚಿಟ್ಟಾಣಿ । ಉಮೇಶ್ ಮರಾಠೆ । ಕಡತೋಕ । ಕಾಡೂರು или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಯಾರಲ್ಲಿ ಯಾವ ಪ್ರತಿಭೆ ಅಡಗಿದೆಯೆಂದು ಒರೆ ಹಚ್ಚಿ ನೋಡಿದಾಗಲೆ ತಿಳಿಯುವುದು. ಉಮೇಶ್ ಮರಾಠೆ ಕಳೆದ ಬಾರಿ ಪೆರ್ಡೂರು ಮೇಳದಲ್ಲಿ ಸಂಗೀತಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ವರ್ಷಕ್ಕೆ ಸಿಗಂಧೂರು ಮೇಳದಲ್ಲಿ ಒತ್ತು ಭಾಗವತರಾಗಿ ಸೇರ್ಪಡೆಗೊಂಡರೂ ಎರಡನೆ ಭಾಗಕ್ಕೆ ಭಾಗವತರಾಗಿ ಬರುವ ಅವಕಾಶ ಅವರ ಪಾಲಿಗೊದಗಿ ಬಂದಿತ್ತು. ಪವನ್ ಕಿರಣಕೆರೆಯವರ 'ವಸಂತಗಾನ' ಪ್ರಸಂಗ. ಪವನಣ್ಣನ ಪ್ರಸಂಗದಲ್ಲಿನ ಸಾಹಿತ್ಯ ಅತ್ಯದ್ಬುತವಾಗಿರುತ್ತದೆಂಬುದನ್ನು ಮತ್ತೆ ಹೇಳಬೇಕಿಲ್ಲ. ಸಿಕ್ಕ ಅವಕಾಶವನ್ನು ಉಮೇಶ್ ಮರಾಠೆಯವರು ಬಹಳ ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಹಿಮ್ಮೇಳದಲ್ಲಿ ಪ್ರಸಿದ್ದರಾದ ಸುನೀಲ್ ಭಂಡಾರಿ ಹಾಗೂ ಕಾಡೂರು ರವಿ ಇವರೊಂದಿಗೆ ಸಿಕ್ಕಿದ್ದು ಇನ್ನೊಂದು ಧನಾತ್ಮಕ ಅಂಶ. ಒಟ್ಟಾರೆಯಾಗಿ ಸಿಗಂಧೂರು ಮೇಳದ ಹಿಮ್ಮೇಳ ಬಹಳ ಗಟ್ಟಿಯಾಗಿದೆ. ಇನ್ನು ಮುಮ್ಮೇಳದಲ್ಲಿ ಶ್ರೀ ನರಸಿಂಹ ಚಿಟ್ಟಾಣಿ ಇವರೊಬ್ಬ ಹುಟ್ಟು ಪ್ರತಿಭೆ. ಅವರ ಮುಖಭಾವ ಅಭಿನಯ ಖಳಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ವಸಂತಗಾನ ಪ್ರಸಂಗದಲ್ಲಿ ಬಹಳಷ್ಟು ಉತ್ತಮ ಪ್ರದರ್ಶನ ನೀಡಿದ್ದಾರೆ. ಆ ಪ್ರಸಂಗದ ಒಂದು ಪದ್ಯ ಒಮ್ಮೆ ನೋಡಿ. ಇಂತಹ ಇನ್ನಷ್ಟು ಚಿತ್ರಣಗಳಿಗೆ ಈ ಚಾನಲನ್ನು ಸಬ್ಸ್ಕ್ರೈಬ್ ಮಾಡಲು ಮರೆಯದಿರಿ.