У нас вы можете посмотреть бесплатно LALITHA CHALISA BY RASHMI ADISH ದುರಿತಗಳೆಲ್ಲ ನಿವಾರಣೆ ಮಾಡುವ ದೇವಿಯ ಅನುಗ್ರಹ ಪಡೆಯುವ KANNADA WITH LYRICS или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಲಲಿತಾ ಚಾಲೀಸಾ ಸಾಹಿತ್ಯ ರಾಗ ಸಂಯೋಜನೆ ಗಾಯನ ವಿದುಷಿ ಶ್ರೀಮತಿ ಡಾ|| ರಶ್ಮಿ ಆದೀಶ್ ಮೈಸೂರು ಜಯ ಜಯ ಜಯಶ್ರೀ ಲಲಿತಾಂಬೆ ಜಯ ಜಗದೀಶ್ವರಿ ಜಗದಂಬೆ ದುರಿತ ನಿವಾರಣೆ ದುರ್ಗಾಂಬೆ ಶ್ರೀ ಚಕ್ರನಿಲಯೇ ಶ್ರೀ ಅಂಬೆ 1.ಲಲಿತಾ ಮಾತಾ ಶಿವನ ಸತಿ ಅಖಿಲ ಜಗತ್ತಿಗೆ ನೀ ಒಡತಿ ಆದಿಪರಾಶಕ್ತಿ ಅವತಾರ ಈ ಸೃಷ್ಟಿಗೆ ನೀ ಆಧಾರ 2.ವಿಘ್ನರಾಜನ ಮಾತೆಯು ನೀ ಷಣ್ಮುಖ ದೇವನ ಜನನಿಯ ನೀ ರುದ್ರದೇವನ ರಾಣಿಯು ನೀ ಜಗತ್ತಿಗೆ ನೀ ಮಹಾಮಾಯಿ 3. ಶುಂಭನಿ ಶುಂಭರ ಹತ ಮಾಡಿ ಚಾಮುಂಡೇಶ್ವರಿ ನೀನಾದೆ ದುಷ್ಟ ದೈತ್ಯರ ಸಂಹರಿಸಿ ದುರ್ಗಾ ದೇವಿಯು ನೀನಾದೆ 4.ಶೃಂಗೇರಿಯ ಶ್ರೀ ಶಾರದಾಂಬೆ ಕೊಲ್ಲೂರಿನ ಶ್ರೀ ಮೂಕಾಂಬೆ ಕಟೀಲು ಕ್ಷೇತ್ರದ ಶ್ರೀ ದುರ್ಗಾಂಬೆ ಭವ ಭಯನಾಶಿನಿ ನೀ ಅಂಬೇ ಜಯ ಜಯ ಜಯಶ್ರೀ ಲಲಿತಾಂಬೆ ಜಯ ಜಗದೀಶ್ವರಿ ಜಗದಂಬೆ ದುರಿತ ನಿವಾರಣೆ ದುರ್ಗಾಂಬೆ ಶ್ರೀಚಕ್ರ ನಿಲಯ ಶ್ರೀ ಅಂಬೆ 5.ಪದ್ಮ ರೇಖೆಯ ಕಾಂತಿಯಲ್ಲಿ ಬಾಲ ತ್ರಿಪುರಾ ರೂಪದಲ್ಲಿ ಹಂಸ ವಾಹನ ರೂ ಢಿಣಿ ನೀ ಗಾಯತ್ರಿ ರೂಪದಿ ಕರುಣಿಸು ನೀ 6.ಶ್ವೇತ ವಸ್ತ್ರವ ಧರಿಸಿರುವೆ ಕೈಯಲ್ಲಿ ಪುಸ್ತಕ ಪಡಿದಿರುವೆ ಜ್ಞಾನ ಜ್ಯೋತಿಯ ಬೆಳಗಲು ನೀ ಸರಸ್ವತಿ ರೂಪದಿ ಬಾರಮ್ಮ 7.ವಾರಣಾಸಿಯಲ್ಲಿ ನೆಲೆಸಿರುವಿ ಅನ್ನಪೂರ್ಣೇಶ್ವರಿ ನೀನಾಗಿ ವಾಮದೇವನಾ ಸತಿಯಾಗಿ ಭಕ್ತರ ಹಸಿವನ್ನು ನೀಗಿಸುವಿ 8.ಕಂಚಿ ಕಾಮಾಕ್ಷಿ ಆಗಿರುವೆ ಕಾಮಿತಾರ್ಥಗಳ ನೀ ಕೊಡುವೆ ಕದಂಬವನ ಸಂಚಾರಿಣಿಯೇ ಎಲ್ಲಾ ಕಾರ್ಯವ ಸಿದ್ಧಿಸಿದೆ ಜಯ ಜಯ ಜಯಶ್ರೀ ಲಲಿತಾಂಬೆ ಜಯ ಜಗದೀಶ್ವರಿ ಜಗದಂಬೇ ದುರಿತ ನಿವಾರಣೆ ದುರ್ಗಾಂಬೆ ಶ್ರೀಚಕ್ರ ನಿಲಯ ಶ್ರೀ ಅಂಬೆ 9.ಕೊಲ್ಹಾಪುರದಲಿ ನೆಲೆಸಿರುವೆ ಶ್ರೀ ಮಹಾಲಕ್ಷ್ಮಿಯು ನೀನಾದೆ ಸಿರಿ ಸಂಪದಗಳ ಮಳೆ ಸುರಿಸಿ ಸರ್ವ ಜನರನು ಕಾಪಾಡಿದೆ 10 ಮಣಿ ದ್ವೀಪದಲಿ ನೆಲೆಸಿರುವ ಶ್ರೀಮಾತೆ ಲಲಿತಾ ರೂಪಿಣಿಯೇ ಸುವರ್ಣ ಮಂದಿರದಲ್ಲಿ ಕುಳಿತು ಸುಖ ಶಾಂತಿಗಳ ನೀ ಕೊಡುವೆ 11.ಅಭಿರಾಮಿ ರೂಪ ದಿ ನೀ ಬಂದು ತಿಂಗಳ ಬೆಳಕ ಮೂಡಿಸಿದೆ ತಿರುಕಡಿಯೂರ್ ಕ್ಷೇತ್ರದಲ್ಲಿ ಬಂದು ಸಕಲ ಸೌಭಾಗ್ಯವ ನೀ ನೀಡಿದೆ 12.ರಣಚಂಡಿ ಯ ಅವತಾರದಲ್ಲಿ ರಕ್ತ ವಸ್ತ್ರ ಧಾರಿಣಿಯಾಗಿ ರಕ್ತ ಬೀಜನ ಸಂಹರಿಸಲು ನೀ ರಣರಂಗವನು ಪ್ರವೇಶಿಸಿದೆ ಜಯ ಜಯ ಜಯಶ್ರೀ ಲಲಿತಾಂಬೆ ಜಯ ಜಗದೀಶ್ವರಿ ಜಗದಂಬೆ ದುರಿತ ನಿವಾರಣೆ ದುರ್ಗಾಂಬೆ ಶ್ರೀಚಕ್ರ ನಿಲಯ ಶ್ರೀ ಅಂಬೆ 13.ಶೂಲ, ಖಡ್ಗವಾ ಪಿಡಿದಿರುವೆ ರುಂಡ ಮಾಲೆಯಾ ಧರಿಸಿರುವೆ ರುದ್ರದೇವನ ಸತಿಯಾಗಿ ರುದ್ರಾಣಿ ರೂಪದಿ ಬಾರಮ್ಮ 14.ಇಂದ್ರ ಕೀಲಾದ್ರಿ ಶಿಖರದಲ್ಲಿ ಕರುಣಾಮೃತವ ನೀಡಿರುವೆ ಕಲಿಯುಗ ಜನರನ್ನು ಕಾಪಾಡಲು ಕನಕ ದುರ್ಗೆಯಾಗಿ ನೆಲೆಸಿರುವೆ 15 ಆದಿ ಭಿಕ್ಷುವಿನ ಸತಿಯಾಗಿ ಅನ್ನಪೂರ್ಣೆಯಾಗಿ ಧರೆಗಿಳಿದೆ ಅನ್ನಭಾಗ್ಯವನು ಕರುಣಿಸು ನೀ ಮಳೆ ಬೆಳೆ ಸಿರಿಧಾನ್ಯ ನೀಡಮ್ಮ 16 ದುಷ್ಟ ದೈತ್ಯರ ಹತ ಮಾಡಿ ದುರ್ಗಿಯಾಗಿ ಕಂಗೊಳಿಸಿರುವೆ ದುರಿತವನೆಲ್ಲ ನೀ ತೊರೆದು ದುರುಳತನವ ಹತ ಮಾಡು ನೀ ಜಯ ಜಯ ಜಯಶ್ರೀ ಲಲಿತಾಂಬೆ ಜಯ ಜಗದೀಶ್ವರಿ ಜಗದಂಬೆ ದುರಿತ ನಿವಾರಣೆ ದುರ್ಗಾಂಬೆ ಶ್ರೀಚಕ್ರ ನಿಲಯ ಶ್ರೀ ಅಂಬೆ 17 ರಾಜ ಶ್ಯಾಮಲೆಯ ಸೃಷ್ಟಿಸಿ ನೀ ಮಂತ್ರಿಣಿಯಾಗಿ ನೇಮಿಸಿದೆ ಅನ್ಯಾಯವನ್ನು ಖಂಡಿಸಿ ನೀ ನ್ಯಾಯಮಾರ್ಗವ ತೋರಿಸಿದೆ 18 ಮಾಯಾ ಸ್ವರೂಪಿಣಿ ನೀನಾಗಿ ಮನದ ಮಾಯೆಯ ತೊಲಗಿಸಿದೆ ಮಹಾ ಮಂತ್ರಾದಿ ದೇವತೆಯು ಮಂತ್ರ ಪುಷ್ಪವ ಸ್ವೀಕರಿಸು 19 ಅಖಿಲಾಂಡೇಶ್ವರಿ ರೂಪೀ ಣಿಯು ಅದ್ವೈತಮೃತ ನೀ ಕೊಡುವೆ ಆದಿಶಂಕರರು ಪೂಜಿಸಿದ ಆರ್ತಪರಾಯಣಿ ನೀನಾದೆ 20 ಆದಿ ಪ್ರಕೃತಿಯ ಮಡಿಲಾಗಿ ಅರ್ಧನಾಾರೀಶ್ವರಿ ರೂಪದಲ್ಲಿ ಆದಿದೇವನ ಅರ್ಥಂಗಿ ಆದಿಪರಾಶಕ್ತಿ ಆಗಿರುವೆ ಜಯ ಜಯ ಜಯಶ್ರೀ ಲಲಿತಾಂಬೆ ಜಯ ಜಗದೀಶ್ವರಿ ಜಗದಂಬೆ ದುರಿತ ನಿವಾರಣೆ ದುರ್ಗಾಂಬೆ ಶ್ರೀ ಚಕ್ರ ನಿಲಯ ಶ್ರೀ ಅಂಬೆ 21 • ದಕ್ಷನ ಕುವರಿ ದಾಕ್ಷಾಯಿಣಿ ಸತಿಯವತಾರದಿ ಜನ್ಮಿಸಿದೆ ಅಷ್ಟಾದಶಪೀಠೇಶ್ವರಿಯಾಗಿ, ಧರೆಯಲಿ ಉಳಿದೆ ಜಗದಂಬೆ 22 ಪಂಚಾ ಯುದಗಳ ಪಿಡಿದಿರುವೆ ಪಂಚಾಕ್ಷರ ಸತಿ ನೀನಾದೆ ಪಂಚಾಯತನಾ ಪರಿವಾರದೊಳು ಪರಮೇಶಿ ಪರಿಪಾಲಿಸುವೇ 23.ದಶ ಮಹಾವಿದ್ಯಾವತಾರದಲಿ ಶ್ರೀ ವಿದ್ಯಾ ದೀಕ್ಷೆಯ ನೀ ಕೊಡುವೆ ದಶಲಕ್ಷ ಯೋಗವ ನೀ ನೀಡಿದೆ ದಯಾಸಾಗರಿ ನೀನಾದೆ 24.ಶ್ಯಾಮಲೆಯನು ಮಂತ್ರಿಣಿಯಾಗಿ ವಾರಾಹಿಯನ್ನು ದಂಡಿನಿಯಾಗಿ ಅರವತ್ತು ನಾಲ್ಕು ಯೋಗಿನಿಯರನ್ನು ಸೃಷ್ಟಿಸಿ ಜಗ ಸಂರಕ್ಷಿಸಿದೆ ಜಯ ಜಯ ಜಯಶ್ರೀ ಲಲಿತಾಂಬೆ ಜಯ ಜಗದೀಶ್ವರಿ ಜಗದಂಬೆ ದುರಿತ ನಿವಾರಿನಿ ದುರ್ಗಾಂಬೆ ಶ್ರೀಚಕ್ರ ನಿಲಯೇ ಶ್ರೀ ಅಂಬೆ 25 ನವದುರ್ಗೇಶ್ವರಿ ರೂಪದಲ್ಲಿ ನವರಾತ್ರಿಯಲ್ಲಿ ನೀ ಬರುವಿ ನವಾ ವರಣದಲು ಪಸ್ಥಿತಳಾಗಿ ನವವಿಧ ಪೂಜೆಯ ಸ್ವೀಕರಿಸು 26. ಸಪ್ತ ಚಕ್ರಕ್ಕೆ ಅಧಿಪತಿಯು ಸಪ್ತ ಮಾತೃ ಕಾ ರೂಪಿಣಿಯು ಸಪ್ತಾಶ್ವರೂಢನ ಕಾಂತಿಯ ಬೆಳಕು ಹೊಳಪನು ತಂದೆ ಬಾಳಿನಲ್ಲಿ 27 ದುಷ್ಟತನವನು ಹತ ಮಾಡಿ ಸತ್ಯಮಾರ್ಗ ಜನರಿಗೆ ತೋರಿ ಮನದ ದುಗುಡವ ನೀಗಿಸಿದೆ ಜನಯಿತ್ರಿ ನೀ ಜಗದಂಬೆ 28 ಮೇರು ಶ್ರೀಚಕ್ರದಿ ಉಪಸ್ಥಿತಳೆ ಮಂದಾರ ಗಂಧಿ ಸಂಯುಕ್ತಳೆ ನೀ ಮುನಿಶ್ರೇಷ್ಠರು ನಿನ್ನ ಹೊಗಳಿದೊಡೆ ಮೋಕ್ಷದ ಮಾರ್ಗವ ನೀ ತೋರಿದೆ ಜಯ ಜಯ ಜಯ ಶ್ರೀ ಲಲಿತಾಂಬೆ ಜಯ ಜಗದೀಶ್ವರಿ ಜಗದಂಬೆ ದುರಿತ ನಿವಾರಣೆ ದುರ್ಗಾಂಬೆ ಶ್ರೀಚಕ್ರ ನಿಲಯೇಶ್ರೀ ಅಂಬೆ 29 ಚಿದಂಬರೇಶ್ವರನ ಚಿತ್ತದಲಿ ಚಿದ್ವಿಲಾಸಿಯಾಗಿ ನೀ ಮೆರೆದೆ ಚಿಂತೆಯ ನೀಗಿಸೊ ಚಿಂತಾಮಣಿ ಚಿರಶಾಂತಿಯನ್ನು ನೀ ಕೊಡುವೆ 30 ಅಂಬಾ ಶಾಂಭವಿ ಜಗದಂಬೆ ಶ್ರೀಚಕ್ರವಾಸಿನಿ ಲಲಿತಾಂಬೆ ಮಹಿಷಾಪುರದ ಚಾಮುಂಡಾಂಬೆ ಭಕ್ತರ ಪಾಲಿಸೆ ಶ್ರೀ ಅಂಬೆ 31 ಸೌಂದರ್ಯ ಲಹರಿಯ ಪುಣ್ಯವನು ಶಿವಾನಂದ ಲಹರಿಯ ಶಕ್ತಿಯನ್ನು ಆನಂದ ಲ ಹರಿಯಾನಂದವನು ನೀ ಪಠನೆ ಮಾತ್ರ ದಿ ಫಲ ಕೊಡುವೆ 32 ವೇದ ಸ್ವರೂಪಿಣಿ ಗಾಯತ್ರಿಯೇ ಸರ್ವ ಮಂಗಳೇ ಸಾವಿತ್ರಿಯೇ ಸರ್ವಕಾಲದಲಿ ಸಲಮ್ಮ ಸೌಭಾಗ್ಯವನ್ನು ನೀಡಮ್ಮ ಜಯ ಜಯ ಜಯಶ್ರೀ ಲಲಿತಾಂಬೆ ಜಯ ಜಗದೀಶ್ವರಿ ಜಗದಂಬೆ ದುರಿತ ನಿವಾರಣೆ ದುರ್ಗಾಂಬೆ ಶ್ರೀಚಕ್ರ ನಿಲಯ ಶ್ರೀಅಂಬೆ 33 ಅರಿಶಿಣ ರಾಶಿ ಸಮರ್ಪಣೆಯು ಕುಂಕುಮರ್ಚನೆ ಮಾಡುವೆನು ವಿಧವಿಧ ಪುಷ್ಪ ಮಾಲೆಗಳ ಸ್ವೀಕರಿಸು ನೀ ಲಲಿತಾಂಬೆ 34 ಪರ್ವತ ಕುವರಿ ಪಾರ್ವತಿಯೇ ಜಯವನ್ನು ನೀಡುವ ಜಯದುರ್ಗೆ ಮಾತೃ ಸ್ವರೂಪಿಣಿ ನೀ ನಮ್ಮ ಎಲ್ಲರ ಸಲಹಲು ಬಾರಮ್ಮ 35 ಅಷ್ಟ ಮಹಾ ಯೋಗಿನಿ ಯು ನೀ ಅಷ್ಟ ಶಕ್ತಿಗಳ ಪ್ರಸಾದಿಸಿ ಅಷ್ಟೈಶ್ವರ್ಯವ ನೀ ಡಮ್ಮ ಇಷ್ಟಕಾರ್ಯಗಳ ನಡೆಸಮ್ಮ 36 ಜೈ ಶ್ರೀ ಮಾತೆಯ ಪ್ರತಿರೂಪ ನಿತ್ಯವು ನಿನ್ನ ನಾಮ ಜಪ ಓಂ ಹ್ರೀಂ ಪರಾಶಕ್ತಿ ರೂಪಿಣಿಯೇ ವೃದ್ಧಿ ಸಮೃದ್ಧಿಯ ನೀ ಕೊಡುವೆ ಜಯ ಜಯ ಜಯಶ್ರೀ ಲಲಿತಾಂಬೆ ಜಯ ಜಗದೀಶ್ವರಿ ಜಗದಂಬೆ ದುರಿತ ನಿವಾರಣೆ ದುರ್ಗಾಂಬೆ ಶ್ರೀಚಕ್ರ ನಿಲಯ ಶ್ರೀ ಅಂಬೆ 37 ತ್ರಿಶಕ್ತಿರೂಪಿಣಿ ತ್ರಿಪುರಾಂಬೆ ತ್ರಯಾರ್ತಿಯನು ನೀ ಸ್ವೀಕರಿಸು ಪಂಚದ ಸಾಕ್ಷರಿ ಲಲಿತಾಂಬೆ ಪಂಚಾರತಿಯ ಸ್ವೀಕರಿಸು 38 ಸೃಷ್ಟಿಯಲಿರುವ ಖಾದ್ಯಗಳು ಎಲ್ಲವು ನಿನ್ನ ನೈವೇದ್ಯವು ನಿನ್ನ ಪ್ರಸಾದವು ಅಮೃತವು ಸ್ವೀಕೃತರಿಗೆ ಜನ್ಮ ಸಾರ್ಥಕವು 39 ತ್ರಿಕಾಲದಲ್ಲಿ ಈ ಚಾಲೀಸ ವನು ಜಪಿಸಿದರೆಷ್ಟೋ ಫಲ ಸಿಗುವಾ ಆತ್ಮಜ್ಞಾನವಾ ನೀ ಕೊಟ್ಟು ಕೈವಲ್ಯ ಪದವಿಯ ಕರುಣಿಸಿದೆ. 40 ನವಾವರಣದ ಮಧ್ಯದಲಿ ರಾಜಮಾತೆಯಾಗಿ ಕುಳಿತಿರುವೆ ರತ್ನಮಾಲೆಯ ಧರಿಸಿ ನೀ ವಿಶ್ವ ಜನರನು ರಕ್ಷಿಸಿದೆ ಜಯ ಜಯ ಜಯಶ್ರೀ ಲಲಿತಾಂಬೆ ಜಯ ಜಗದೀಶ್ವರಿ ಜಗದಂಬೆ ದುರಿತ ನಿವಾರಣೆ ದುರ್ಗಾಂಬೆ ಶ್ರೀಚಕ್ರ ನಿಲಯ ಶ್ರೀ ಅಂಬೆ ಓಂ ಶ್ರೀ ಲಲಿತಾಂಬಿಕಾಯೈ ನಮಃ ಸರ್ವಂ ಶ್ರೀ ಲಲಿತಾರ್ಪಣಮಸ್ತು ಸರ್ವಂ ಶ್ರೀ ಜಗದಂಬಾರ್ಪಣ ಮಸ್ತು ಸರ್ವಂ ಶ್ರೀ ದುರ್ಗಾದೇವಿ ಅರ್ಪಣಮಸ್ತು