У нас вы можете посмотреть бесплатно ಮಳವಳ್ಳಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ಸಾಕ್ಷರತಾ ಸಪ್ತಾಹ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಮಹೇ0ದ್ರ ಚಾಲನೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮಳವಳ್ಳಿ:ಪ್ರತಿಯೊಬ್ಬರು ದೇಶದ ಕಾನೂನನ್ನು ಗೌರವಿಸುವುದರೊಂದಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು-ನ್ಯಾಯಾಧೀಶರಾದ ಎಂ.ಮಹೇAದ್ರ ಕರೆ • ಭಾರತೀಯ ಹಣಕಾಸು ಸಾಕ್ಷರತಾ ಸಪ್ತಾಹ ಅಂಗವಾಗಿ ಶಾಂತಿ ಕಾಲೇಜಿನಲ್ಲಿ ಅರ್ಥಿಕ ಸಾಕ್ಷರತೆ-ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ಮಳವಳ್ಳಿ:ಪ್ರತಿಯೊಬ್ಬರು ದೇಶದ ಕಾನೂನನ್ನು ಗೌರವಿಸುವುದರೊಂದಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅರ್ಥಿಕವಾಗಿ ಅಭಿವೃದ್ದಿ ಹೊಂದುವುದರೊAದಿಗೆ ಸಾರ್ಥಕತೆಯ ಜೀವನ ನಡೆಸುವಂತೆ ಪಟ್ಟಣದ ಜೆ.ಎಂ.ಎಪ್ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾದೀಶರಾದ ಎಂ.ಮಹೇAದ್ರ ಕರೆ ನೀಡಿದರು. ಪಟ್ಟಣದ ಶಾಂತಿ ಕಾಲೇಜಿನ ಸಬಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ,ಮಾಮರ ಚಾರಿಟಬಲ್ ಟ್ರಸ್ಟ್,ಶಾಂತಿ ಶಿಕ್ಷಣ ಸಂಸ್ಥೆ, ಶಾಂತಿ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು,ಬ್ಯಾಂಕ್ ಅಪ್ ಬರೋಢ ಮಳವಳ್ಳಿ ಶಾಖೆ,ಮಾಮರ ಸೌಹರ್ಧ ಸಹಕಾರಿ ಸಂಘ,ಮೌಲ್ಯ ಸ್ವನಿಧಿ ಸಹಕಾರಿ ಸಂಘದ ಸಹಯೋಗದಲ್ಲಿ ಭಾರತೀಯ ರಿಸರ್ವ ಬಾಂಕಿನ ಹಣಕಾಸು ಸಾಕ್ಷರತಾ ಸಪ್ತಾಹ-೨೦೨೬ರ ಅಂಗವಾಗಿ ಶುಕ್ರವಾರ ಅಯೋಜಿಸಿದ್ದ “ ಅರ್ಥಿಕ ಸಾಕ್ಷರತೆ ಮತ್ತು ಕಾನೂನು ಅರಿವು “ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರ ಜನನ ಪ್ರಮಾಣ ಪತ್ರದೊಂದಿಗೆ ( ಹುಟ್ಟಿನಿಂದಲೇ) ಅರಂಭವಾಗಲಿರುವ ಕಾನೂನು ಸಾಯುವವರೆಗೂ ಮರಣ ಪ್ರಮಾಣ ಪತ್ರ ಪಡೆಯುವವರೆಗೂ ಕಾನೂನು ಪಾಲನೆ ಮಾಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಈ ದಿಶೆಯಲ್ಲಿ ಹುಟ್ಟಿನಿಂದಲೇ ಒಳ್ಳೆಯ ಸಂಸ್ಕಾರ ಕಲಿಯಬೇಕು,ಕಾನೂನು ಪಾಲನೆ ಮಾಡಬೇಕು,ಶೈಕ್ಷಣಿಕ ಹಂತದಲ್ಲಿ ಕಾನೂನು ಉಲ್ಲಂಘನೆಯAತಹ ಪ್ರಕರಣಗಳಿಗೆ ಬಾಗಿಯಾಗದೆಂತೆ ಜಾಗೃತರಾಗಿರಬೇಕು,ಸಮಾಜ ಮುಖಿಯಾಗಿ ಸೇವೆ ನೀಡುವ ಮೂಲಕ ಮಾದರಿ ಜೀವನ ನಡೆಸುವಂತೆ ಅವರು ಸಲಹೆ ನೀಡಿದರು. ಅರ್ಥಿಕ ಸಾಕ್ಷರತೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖವಾಗಿದೆ,ಮಾಮರ ಸಂಸ್ಥೆಯವರು ಇಂತಹ ಕಾರ್ಯಕ್ರಮ ಅಯೋಜನೆ ಮಕ್ಕಳ ಜೀವನಕ್ಕೆ ಸಾಧನೆಗೆ ಸ್ಪೂರ್ತಿಯಗಿದೆ,ಪ್ರತಿ ಕುಟುಂಬದ ಅರ್ಥಿಕ ಪ್ರಗತಿಗೆ ಇಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯವಶ್ಯಕವಾಗಿವೆ,,ಅರ್ಥಿಕ ಸಾಕ್ಷರತೆಯ ಜ್ಞಾನ ಅರಿವು ಇದ್ದವರು ಜೀವನದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳಾಗುತ್ತಾರೆ.ದೊಡ್ಡ ಉನ್ನತ ಸ್ಥಾನಕ್ಕೆ ಹೋಗುತ್ತಾರೆಂದ ಅವರು ಈ ಸಂದರ್ಭದಲ್ಲಿ ಸಂಚಾರಿ ನಿಯಮಗಳು,ಸೈಬರ್ ವಂಚನೆ ಪ್ರಕರಣಗಳು,ದಿನನಿತ್ಯದ ಜೀವನದಲ್ಲಿ ಬರುವಂತಹ ಕಾನೂನುಗಳು ಅದರ ಪಾಲನೆ ಎಂಬುದರ ಬಗ್ಗೆ ಅವರು ಮಾಹಿತಿ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ತಹಸೀಲ್ದಾರ್ ಡಾ.ಎಸ್.ವಿ.ಲೋಕೇಶ್ ಮಾತನಾಡಿ ವಿದ್ಯಾರ್ಥಿಗಳ ಜ್ಞಾನಾರ್ಜನಗೆ ಮತ್ತು ಬದಲಾವಣೆಯೊಂದಿಗೆ ಉನ್ನತ ಸಾಧನೆಯತ್ತ ಸಾಗಲು ಅರ್ಥಿಕ ಸಾಕ್ಷರತೆಯ ಅರಿವು ಪ್ರಮುಖವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಮೊಬೈಲ್ ದುಶ್ಚಟಗಳಿಂದ ಮಕ್ಕಳು ಹೊರಬರಬೇಕು,ಅವಶ್ಯಕತೆಗನುಗುಣವಾಗಿ ಬಳಕೆ ಮಾಡಬೇಕು,ಶೈಕ್ಷಣಿಕ ಹಂತದಲ್ಲಿ ಮಕ್ಕಳ ಜೀವನ ಶೈಲಿ ಹೇಗಿರಬೇಕು,ಸಾಧನೆಗೆ ಏನು ಮಾಡಬೇಕು ಎಂಬುದರ ಬ್ಗಗೆ ಅವರು ಈ ಸಂದರ್ಭದಲ್ಲಿ ಉತ್ಸಾಹದಾಯಕ ನುಡಿಗಳಾನ್ನಾಡಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್ ಅಪ್ ಬರೋಢ ಸೇವೆಗಳ ಕುರಿತು ವ್ಯವಸ್ಥಾಪಕ ಉದಯ್ ಕುಮಾರ್ ಹೊಸಮನಿ,ಅರ್ಥಿಕ ಸಾಕ್ಷರತೆ ಕುರಿತು ಸಂಯೋಜಕ ವಿನೋಧ್ ವಿ.ಜೋಶಿ ಮ್ಕಕಳೊಂದಿಗೆ ಸಂವಾದ ನಡೆಸಿ ಉಪನ್ಯಾಸ ನೀಡಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ಸಿ.ಎಂ.ನಾಗರಾಜು,ಎA.ಸಿ.ಶಿವಪ್ಪ,ಮಾಮರ ಚಾರಿಟಬಲ್ ಟ್ರಸ್ಟ್ ಮತ್ತು ಮಾಮರ ಸೌಹರ್ಧ ಸಹಕಾರ ಸಂಘದ ಅಧ್ಯಕ್ಷರಾದ ಎಂ.ಶಿವಕುಮಾರ್ ಕಾರ್ಯಕ್ರಮ ಕುರಿತು ಪ್ರಸ್ತಾವಿಕವಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಹೆಚ್ ಕೆಂಪಯ್ಯ ಮಾತನಾಡಿ ವಿದ್ಯಾರ್ಥಿಗಳ ಜೀವನ ಚಿನ್ನದ ಜೀವನ ಅದನ್ನು ಸರ್ದಭಳಖೆ ಮಾಡಿಕೊಂಡು ಶೈಕ್ಷಣಿಕ ಹಂತದಲ್ಲಿ ಉನ್ನತ ಸಾಧನೆಯತ್ತ ಮುನ್ನೆಡೆಯಿರಿ ಎಂದರು. ಈ ಸಂದರ್ಭದಲ್ಲಿ ಅಗಮಿಸಿದ ಎಲ್ಲ ಗಣ್ಯರಿಗೂ ಮಾಮರ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಭಿನಂಧಿಸಿ ಗ್ವರವಿಸಲಾಯಿತು.ಮುಖ್ಯ ಅತಿಥಿಗಳಾಗಿ ಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಪುಟ್ಟರಾಜು,ಅಪರ ಸರ್ಕಾರಿ ವಕೀಲರಾದ ಎಂ.ಎಸ್.ಶ್ರೀಕAಠಸ್ವಾಮಿ,ಮೌಲ್ಯ ಸ್ವನಿದಿ ಸೌಹರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಬಬ್ರುವಾಹನ,ಮಾಮರ ಸೌಹರ್ದ ಸಹಕಾರಿ ಸಂಘದ ನಿರ್ದೇಶಕರಾದ ಮಂಟೆಸ್ವಾಮಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮ್ಯ ಎ.ಎಸ್,ಸಿಬ್ಬಂದಿಗಳಾದ ಸುಭ್ರಮಣ್ಯ,ರಾಜಶೇಖರ್,ಕಾಲೇಜಿನ ಉಪನ್ಯಾಸಕರು,ಸಿಬ್ಬಂದಿಗಳು,ವಿದ್ಯಾರ್ಥಿನಿಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಚಿತ್ರ-೧೩-೧ ಪಟ್ಟಣದ ಶಾಂತಿ ಕಾಲೇಜಿನಲ್ಲಿ ನಡೆದ ಅರ್ಥಿಕ ಸಾಕ್ಷರತೆ ಮತ್ತು ಕಾನೂನು ಅರಿವು “ ಕಾರ್ಯಕ್ರಮದಲ್ಲಿ ನ್ಯಾಯಾದೀಶರಾದ ಎಂ.ಮಹೇAದ್ರರವರನ್ನು ಅಭಿನಂಧಿಸಿ ಗ್ವರವಿಸಲಾಯಿತು. ಚಿತ್ರ-೧೩-೦೧ ಕಾರ್ಯಕ್ರಮದಲಲಿ ಬಾಗವಹಿಸಿದ್ದ ಮಕ್ಕಳ ಚಿತ್ರ