У нас вы можете посмотреть бесплатно ಕೃಷಿ, ನೀಲಿ ಆರ್ಥಿಕತೆ ಅಭಿವೃದ್ಧಿ ಕೇಂದ್ರದ ಆದ್ಯತೆ | 11 ಸಾವಿರ ಕೋಟಿ ರೂ. ಯೋಜನೆಗಳಿಗೆ ಪ್ರಧಾನಿ ಚಾಲನೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕೇರಳ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಎರ್ನಾಕುಲಂ ನಲ್ಲಿಂದು ರೋಡ್ ಷೋ ನಡೆಸಿದರು. ರಸ್ತೆಯ ಎರಡೂ ಬದಿಯಲ್ಲಿ ಸೇರಿದ್ದ ಜನತೆ ಹರ್ಷೋದ್ಗಾರದ ಮೂಲಕ ಸ್ವಾಗತ ಕೋರಿದರು. ಬಳಿಕ ಪ್ರಧಾನಿ, ಸುಮಾರು 11 ಸಾವಿರ ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಎರ್ನಾಕುಲಂ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಕೇರಳದ ಪಾರಂಪರಿಕ ಕಥಕ್ಕಳಿ ಪ್ರತಿಮೆಯನ್ನು ಪ್ರಧಾನಿಯವರಿಗೆ ನೀಡಿ ಗೌರವಿಸಲಾಯಿತು. ಕೇಂದ್ರ ಸಚಿವ ಸುರೇಶ್ ಗೋಪಿ, ಬಿಜೆಪಿ ಕೇರಳ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. (2.10) (HOLD) ಬಳಿಕ ಪ್ರಧಾನಿ, ಮತ್ಸ್ಯ ಕೃಷಿ ಹಾಗೂ ನೀಲಿ ಆರ್ಥಿಕತೆಗೆ, ಕೇಂದ್ರ ಹೆಚ್ಚಿನ ಆದ್ಯತೆ ನೀಡಿದ್ದು, ಕಳೆದ 11 ವರ್ಷಗಳಲ್ಲಿ ಭಾರತ , ಜಗತ್ತಿನ 2ನೇ ಅತಿದೊಡ್ಡ ಮತ್ಸ್ಯ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು. ಕೃಷಿ ಸೌಲಭ್ಯಗಳನ್ನು ಮೀನುಗಾರರಿಗೂ ವಿಸ್ತರಿಸಲಾಗಿದ್ದು, 4 ಲಕ್ಷಕ್ಕೂ ಹೆಚ್ಚು ಮತ್ಸ್ಯ ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗಿದ್ದು, ವಾರ್ಷಿಕ 5 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗಿದೆ. ವಿಕಸಿತ ಕೇರಳ ನಿರ್ಮಾಣಕ್ಕಾಗಿ ಸಕಲ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. (2.43) ಪ್ರಾಕೃತಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಕೇರಳದಲ್ಲಿ , ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದ್ದು, ವಿಶಾಲ ಸಾಗರ ಹಾಗೂ ಕರಾವಳಿಯಿಂದ ನೀಲಿ ಆರ್ಥಿಕತೆಗೆ ಅನುಕೂಲವಿದೆ. ರಾಜ್ಯದಲ್ಲಿ ಪ್ರತಿಭಾನ್ವಿತ ಯುವಜನರಿದ್ದು, ಪ್ರಾಚೀನ ಸಂಸ್ಕೃತಿ ಉಳಿಸಿಕೊಳ್ಳುವ ಜತೆಗೆ ಅತ್ಯಾಧುನಿಕ ತಂತ್ರಜ್ಞಾನದಿಂದ ಪ್ರಗತಿಯತ್ತ ಸಾಗುವ ಅವಕಾಶವಿದೆ ಎಂದರು. ಎಲ್ ಡಿಎಫ್ ಮತ್ತು ಯುಡಿಎಫ್ ಅವಧಿಯಲ್ಲಿ ಕೇರಳ ಪ್ರಗತಿಯಿಂದ ವಂಚಿತವಾಗಿದ್ದು, ಭ್ರಷ್ಟಾಚಾರ ಹಾಗೂ ಭೂ ಮಾಫಿಯಾ ಹೆಚ್ಚಾಗಿದೆ. ಕೇರಳದ ಅಭಿವೃದ್ಧಿಗೆ ಈ ಹಿಂದಿನ ಸರ್ಕಾರಗಳು ಅಡ್ಡಗಾಲಾಗಿದ್ದು, ರಾಜ್ಯದ ಯುವಶಕ್ತಿಯ ಸಮರ್ಪಕ ಬಳಕೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನತೆ ಬದಲಾವಣೆ ಬಯಸಿದ್ದು, ಬಿಜೆಪಿ ಮತ್ತು ಎನ್ ಡಿಎ ಪರ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಇರಾಕ್, ಯಮೆನ್, ಆಫ್ಘಾನಿಸ್ತಾನ ಸೇರಿದಂತೆ ವಿದೇಶಗಳಲ್ಲಿ ವಿವಿಧ ಸಂಕಷ್ಟ ಪರಿಸ್ಥಿತಿಗಳಲ್ಲಿ ಭಾರತೀಯ ನಾಗರಿಕರ ಸುರಕ್ಷತೆಗೆ , ಕೇಂದ್ರ ಸಕಲ ಕ್ರಮ ಕೈಗೊಂಡಿದೆ. ಪ್ರಸಕ್ತ ಪಶ್ಚಿಮ ಏಷ್ಯಾ ಪರಿಸ್ಥಿತಿಯಲ್ಲಿಯೂ , ಭಾರತೀಯರ ರಕ್ಷಣೆಗೆ ಸರ್ಕಾರ ಕಟಿಬದ್ಧವಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ಜಾಗತಿಕ ಸಂಕಷ್ಟ ವಿಚಾರದಲ್ಲೂ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು. ತೈಲದ ಮೇಲಿನ ಅವಲಂಬನೆ ಕಡಿಮೆ ಮಾಡಲು ಸರ್ಕಾರ ಹಲವು ಕ್ರಮ ಕೈಗೊಂಡಿದ್ದು, ಸೌರಶಕ್ತಿ ಯೋಜನೆಗೆ ಆದ್ಯತೆ ನೀಡಿದೆ. ಕೇರಳದಲ್ಲಿ ಕೂಡ ಸೌರವಿದ್ಯುತ್ ಯೋಜನೆ ಆರಂಭಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ ಗಳ ಸಂಚಾರ ಆರಂಭಿಸಲಾಗಿದ್ದು, ರೈಲ್ವೆಯಲ್ಲಿ ಶೇಕಡ 100ರಷ್ಟು ವಿದ್ಯುದೀಕರಣ ಮಾಡಲಾಗಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ , ಕೇರಳದ ಕೊಚ್ಚಿಯಲ್ಲಿ ಅಖಿಲ ಕೇರಳ ದೀವರ ಸಭೆಯ ಸ್ವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಳೆದ 50 ವರ್ಷಗಳಲ್ಲಿ ದೀವರ ಸಭಾ ಸಂಘಟನೆ , ಕೇರಳದ ಮೀನುಗಾರರ ಹಿತಾಸಕ್ತಿ ರಕ್ಷಣೆಗೆ ಮಹತ್ವದ ಕಾರ್ಯ ನಿರ್ವಹಿಸಿದೆ. ಮತ್ಸ್ಯ ಕೃಷಿ ಅಭಿವೃದ್ಧಿ ಹಾಗೂ ಮೀನುಗಾರರ ಜೀವನ ಸುಧಾರಣೆಗಾಗಿ ದೀವರ ಸಭಾ ಸಲ್ಲಿಸಿದ ಪ್ರಸ್ತಾವನೆಗಳಿಗೆ , ಕೇಂದ್ರ ಅನುಮೋದನೆ ನೀಡಿದೆ. ಮತ್ಸ್ಯ ಸಂಸ್ಕೃತಿ ಹಾಗೂ ಮೀನುಗಾರರ ಪರಂಪರೆ ರಕ್ಷಣೆಯಲ್ಲಿ , ದೀವರ ಸಭಾ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಕೇರಳದ ಕರಾವಳಿ ರಕ್ಷಣೆಯಲ್ಲಿ ಹಾಗೂ ರಾಮಜನ್ಮಭೂಮಿ ದೇವಾಲಯ ನಿರ್ಮಾಣದಲ್ಲಿ , ದೀವರ ಸಮುದಾಯದ ಕೊಡುಗೆ ಸದಾ ಸ್ಮರಣೀಯ ಎಂದ ಪ್ರಧಾನಿ, ಕೇರಳದ ಪರಂಪರೆಯಲ್ಲಿ ಕೊಚ್ಚಿ ಪ್ರಾಂತ್ಯ ಮಹತ್ವದ ಪಾತ್ರ ನಿಭಾಯಿಸಿದೆ ಎಂದರು. ಈ ಭಾಗದ ಮಾತಾ ಅಮೃತಾನಂದಮಯಿ ಅವರು , ನಿಸ್ವಾರ್ಥ ಸೇವೆ ಮೂಲಕ ಸಮಾಜದ ಏಳಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. #LiveDDChandanaNews #DDChandanaNews #DDChandana #DDKannada