У нас вы можете посмотреть бесплатно "ಕೃಷ್ಣಂ ವಂದೇ ಜಗದ್ಗುರುಂ" ಜಗತ್ತಿಗೇ ಗುರುವಾದ ಶ್ರೀಕೃಷ್ಣನ ಕುರಿತಾದ ವಿಶಿಷ್ಟವಾದ ವಿನೂತನವಾದ ದೃಶ್ಯ ರೂಪಕ. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶ್ರೀ ವೇದವ್ಯಾಸ ವಿದ್ಯಾಲಯದ ವಿದ್ಯಾರ್ಥಿಗಳಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ "ಕೃಷ್ಣಂ ವಂದೇ ಜಗದ್ಗುರುಂ" ಜಗತ್ತಿಗೇ ಗುರುವಾದ ಶ್ರೀಕೃಷ್ಣನ ಕುರಿತಾದ ವಿಶಿಷ್ಟವಾದ ವಿನೂತನವಾದ ದೃಶ್ಯ ರೂಪಕ. ಸಂಯೋಜನೆ : ಶಿಕ್ಷಕರಾದ ಮಹಾಬಲೇಶ್ವರ ಕಾರ್ತಿಕ್ ನೃತ್ಯ ತರಬೇತಿ : ವೇದವ್ಯಾಸ ವಿದ್ಯಾಲಯದ ಎಲ್ಲ ಶಿಕ್ಷಕರು ಸಂಪೂರ್ಣ ಸಹಕಾರ : ಅಧ್ಯಕ್ಷರು/ಕಾರ್ಯದರ್ಶಿಗಳು/ಸರ್ವಸದಸ್ಯರು ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಯರು ಶ್ರೀ ವೇದವ್ಯಾಸ ವಿದ್ಯಾಲಯ ಎಲ್ಲರೊಳಗೊಂದಾಗು ಮಂಕುತಿಮ್ಮ ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ । ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ॥ ಶ್ರೀಕೃಷ್ಣನ ಜಗದ್ಗುರುತ್ವವನ್ನು ಸಾರುವ ಮೇಲಿನ ಸಾಲುಗಳು ಆದಿ ಶಂಕರಾಚಾರ್ಯರು ರಚಿಸಿದರೆನ್ನಲಾದ ಕೃಷ್ಣಾಷ್ಟಕದ ಮೊದಲನೇ ಶ್ಲೋಕಕ್ಕೆ ಸೇರಿವೆ. ಇಲ್ಲಿ ವಸುದೇವಸುತಂ (ವಸುದೇವನ ಸುತ) ಎನ್ನುವಾಗ ಸೃಷ್ಟಿಯನ್ನು ಉಲ್ಲೇಖಿಸಿ, ಕಂಸ ಚಾಣೂರ ಮರ್ದನಂ ಎನ್ನುವಾಗ ಲಯವನ್ನು ಸೂಚಿಸಿ ಮತ್ತು ದೇವಕೀ ಪರಮಾನಂದಂ ಎಂದು ಹೇಳುವಾಗ ಮಾತೃವಾತ್ಸಲ್ಯದ ಪರಮಾನಂದದ ಸ್ಥಿತಿಯನ್ನು ಉದ್ದೇಶಿಸಿ ಹೇಳಲಾಗಿದೆ. ಸೃಷ್ಟಿ–ಸ್ಥಿತಿ–ಲಯಗಳ ಸಮನ್ವಯವೇ ಜಗದ್ಗುರುತ್ವ. ಜಗತ್ತಿನ ಗುರು ಜಗದ್ಗುರು. ಜಗತ್ತಿಗೆ ಅಂತರ್ಜಗತ್ತು ಮತ್ತು ಬಾಹ್ಯಜಗತ್ತು ಎಂಬ ಎರಡು ಮುಖಗಳಿವೆ. ಯಾರೊಬ್ಬನು ಅಂತರ್ಜಗತ್ತಿನ ಗುರುವಾಗುತ್ತಾನೋ ಆತನು ಸಹಜವಾಗಿಯೇ ಬಾಹ್ಯಜಗತ್ತಿನ ಗುರುವಾಗುತ್ತಾನೆ ಎಂದು ಯೋಗಶಾಸ್ತ್ರ ಹೇಳುತ್ತದೆ. ಅಂತರ್ಜಗತ್ತು ಮಹತ್ (ಬುದ್ಧಿ), ಅಹಂಕಾರ, ಮನಸ್ಸುಗಳನ್ನು ಒಳಗೊಂಡದ್ದು. ಇವುಗಳನ್ನು ಹಿಡಿತದಲ್ಲಿ ಇಟ್ಟುಕೊಂಡವನು ಅಂತರ್ಜಗತ್ತಿನ ಗುರು. ಬಾಹ್ಯ ಜಗತ್ತು ಇಂದ್ರಿಯಗಳ ಮೂಲಕ ಗ್ರಹಿಕೆಗೆ ದೊರೆಯುವಂತಹುದು. ಈ ಗ್ರಹಿಕೆಯ ಲಗಾಮು ಮಹತ್, ಅಹಂಕಾರ ಮತ್ತು ಮನಸ್ಸು. ಈ ಮೂರೂ ಗ್ರಹಿಕೆಯನ್ನು ರೂಪಿಸುತ್ತವೆ, ನಿರ್ದೇಶಿಸುತ್ತವೆ ಮತ್ತು ರೂಪಾಂತರಿಸುತ್ತವೆ. ಇವುಗಳಿಗೆ ಕಡಿವಾಣ ಹಾಕುವ ಅಂತರ್ಜಗತ್ತಿನ ಗುರು ಸಹಜವಾಗಿ ಬಾಹ್ಯ ಜಗತ್ತಿನ ಗುರುವೂ ಆಗುತ್ತಾನೆ. ಒಟ್ಟಾರೆ ಈ ಗುರುತ್ವ ಎನ್ನುವುದು ಬುದ್ಧಿ–ಅಹಂಕಾರ–ಮನಸ್ಸುಗಳನ್ನು ಮಾತೃಸ್ವರೂಪಿಯಾದ ಆನಂದದೆಡೆಗೆ ಕರೆದೊಯ್ಯುವಂಥದ್ದು. ಬುದ್ಧಿ ತರ್ಕ ಪ್ರಧಾನವಾದದ್ದು. ತರ್ಕ ಪಾಸಿಟೀವ್ ಚಿಂತನೆಯೂ ಆಗಬಹುದು, ನೆಗಟಿವ್ ಚಿಂತನೆಯೂ ಆಗಬಹುದು. ಉದಾಹರಣೆಗೆ ನಿನಗೆ ವಿದ್ಯಾರೇಖೆ ಇಲ್ಲ ಎಂದರೆ ವಿದ್ಯಾರೇಖೆ ಇರುವೆಡೆಯಲ್ಲಿ ಹರಿತ ಆಯುಧದಿಂದ ಗೆರೆ ಕೊರೆದು ‘ನೋಡಿ ವಿದ್ಯಾರೇಖೆ ಇದೆ ಎಂದೂ ತರ್ಕ ಸಾಧಿಸಬಹುದು. ವಿದ್ಯಾರೇಖೆ ಇಲ್ಲ ಎಂದಾದಮೇಲೆ ಅದಕ್ಕಾಗಿ ಪ್ರಯತ್ನಿಸುವುದೇ ಬೇಡ, ಕೈಕಟ್ಟಿ ಕುಳಿತುಕೊಳ್ಳುವುದೇ ಒಳ್ಳೆಯದು ಎಂದೂ ತರ್ಕ ಸಾಧಿಸಬಹುದು. ಇಂಥ ತರ್ಕಪ್ರಧಾನ ಬುದ್ಧಿಯನ್ನು ತರ್ಕಾತೀತವಾಗಿಸುವುದು ಅಂತರ್ಜಗತ್ತಿನ ಗುರುತ್ವದ ಒಂದು ಭಾವ. ತರ್ಕಾತೀತವಾಗಿಸುವುದು ಎಂದರೆ ಎಲ್ಲವನ್ನು ಸಹಜವಾಗಿ ಸ್ವೀಕರಿಸುವುದು. ಪ್ರತಿಯೊಬ್ಬರಿಗೂ ಬದುಕುವ ಅವಕಾಶ ಇದೆ ಎನ್ನುವುದೇನೋ ನಿಜ . ಆದರೆ, ಈ ಅವಕಾಶವನ್ನು ಬಳಸಿಕೊಳ್ಳುವಾಗ ಇದನ್ನು ತಮ್ಮ ಮೂಗಿನ ನೇರಕ್ಕೆ ಗಮನಿಸುವುದರ ಬದಲು ಆ ಅವಕಾಶದ ಸಾಧ್ಯತೆಗಳ ಇತಿಮಿತಿಗಳನ್ನು ಗುರುತಿಸಿ, ಅದರಂತೆ ನಡೆಯನ್ನು ರೂಪಿಸಿಕೊಳ್ಳುವುದು ಬುದ್ಧಿಯ ಮೇಲಿನ ಗುರುತ್ವ. ಅಹಂಕಾರ ನಾನು ಎಲ್ಲಕ್ಕೂ ಮಿಗಿಲು ಎನ್ನುವ ಭಾವ ಮತ್ತು ಅದನ್ನು ಆಧರಿಸಿದ ನಡೆ. ಇದು ತಪ್ಪು ಸರಿಗಳ ವಿವೇಚನೆಯನ್ನು ಮಾಡಗೊಡದು. ಹಿತ ಅಹಿತಗಳನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ನಡೆಯನ್ನು ರೂಪಿಸಲು ರೂಢಿಸಿಕೊಳ್ಳಲು ಸಾಧ್ಯವಾದರೆ ಅದುವೇ ಅಹಂಕಾರದ ಮೇಲಿನ ಗುರುತ್ವ. ಮನಸ್ಸು ಭಾವಪ್ರಧಾನವಾದದ್ದು. ಅದು ನೋವು, ದುಃಖ, ಕೊರತೆಗಳನ್ನೂ ವೈಭವೀಕರಿಸುತ್ತದೆ. ಅವುಗಳ ನಿವಾರಣೆಯನ್ನು ಪ್ರತಿಬಂಧಿಸುತ್ತದೆ. ಹೀಗಾಗದಂತೆ ನೋಡಿಕೊಳ್ಳುವುದೇ ಮನಸ್ಸಿನಮೇಲೆ ಪಡೆದ ಗುರುತ್ವ. ಜಗತ್ತು ಗತಿಶೀಲವಾದದ್ದು. ಅದರ ಸ್ವರೂಪ ಸೃಷ್ಟ್ಯಾತ್ಮಕತೆ. ಸೃಷ್ಟಿಯು ನಿರಂತರವಾಗಿ ಸ್ಥಿತಿ, ಲಯಗಳಿಗೆ ಒಳಪಡುವ ಸೃಜನಶೀಲತೆ. ಅಂತಹ ಸೃಜನಶೀಲ ಸಹಜವಾಗಿ ಜಗದ್ಗುರು. ತನ್ನನ್ನು ತಾನೇ ಸದಾ ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು, ಪಾಸಿಟೀವ್ ಚಿಂತನೆಗೆ ತೆರೆದುಕೊಳ್ಳುವುದು, ಭಾವಾವೇಗಕ್ಕೆ ಒಳಪಡದೆ ಇರುವುದು ಗುರುತ್ವ. ಇದು ವ್ಯಕ್ತಿಗೂ ಮಾರ್ಗದರ್ಶಕ, ಸಮುದಾಯ, ಸಮಾಜಕ್ಕೂ ಮಾರ್ಗದರ್ಶಕ. ಬಾಹ್ಯ ಜಗತ್ತು ಮತ್ತು ಅಂತರ್ಜಗತ್ತುಗಳನ್ನು ಸ್ಥಿತಪ್ರಜ್ಞೆ, ನಿಷ್ಕಾಮ ಕರ್ಮದ ಮೂಲಕ ತನ್ನ ಹಿಡಿತದಲ್ಲಿಟ್ಟುಕೊಂಡ ಕೃಷ್ಣ ಸಹಜವಾಗಿ ಜಗದ್ಗುರು. ಸನಾತನಧರ್ಮದ ದೇವ–ದೇವತೆಗಳಲ್ಲಿ ಭಕ್ತರಿಗೆ ಅತ್ಯಂತ ಆಪ್ತದೈವ ಶ್ರೀ ಕೃಷ್ಣನೇ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಉತ್ತರದ ಬಂಗಾಳದಲ್ಲಿ ರಾಧಾ ಕೃಷ್ಣನಾಗಿ, ಪೂರ್ವದ ಒರಿಸ್ಸಾದಲ್ಲಿ ಜಗನ್ನಾಥನಾಗಿ, ಪಶ್ಚಿಮದ ಗುಜರಾತಿನಲ್ಲಿ ರಾಠೋಡನಾಗಿ, ರಾಜಸ್ಥಾನದಲ್ಲಿ ಶ್ರೀನಾಥಜೀ ಎಂದು ಕರೆಸಿಕೊಂಡು, ಮಹಾರಾಷ್ಟ್ರದಲ್ಲಿ ವಿಠೋಬಾ ಎನ್ನಿಸಿಕೊಂಡು, ದಕ್ಷಿಣ ಭಾರತದ ಕರ್ನಾಟಕದಲ್ಲಿ ಮುರಳೀಕೃಷ್ಣನಾಗಿಯೂ ಮತ್ತು ಕೇರಳದಲ್ಲಿ ಗುರುವಾಯೂರಪ್ಪನಾಗಿಯೂ ಇವನು ಭಾರತದಾದ್ಯಂತದ ಕೃಷ್ಣಭಕ್ತರನ್ನು ಒಗ್ಗೂಡಿಸುವ ಆರಾಧ್ಯದೈವ. ಕನಕದಾಸರ ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಕೃಷ್ಣಾ’ ಎನ್ನುವ ದೇವರನಾಮದ ಕೊನೆಯಲ್ಲಿ ‘ನಾ ನಿನ್ನೊಳಗೋ ನೀನು ನನ್ನೊಳಗೋ ಕೃಷ್ಣಾ ಎಂದು ಕನಕದಾಸರು ಉದ್ಗರಿಸುತ್ತಾರೆ. ಮಧುರೆಯ ಸೆರೆಮನೆಯಲ್ಲಿ, ಯಮುನಾ ನದಿಯ ದಂಡೆಯಲ್ಲಿ, ಗೊಲ್ಲವಾಡಿಯ ಬನದಲ್ಲಿ, ಸಮುದ್ರದ ಅಲೆಗಳ ತೆಕ್ಕೆಯಲ್ಲಿದ್ದ ದ್ವಾರಕೆಯಲ್ಲಿ ಮಾತ್ರವಲ್ಲದೆ ಭಾರತದ ಮೂಲೆ ಮೂಲೆಗಳಲ್ಲಿ ಭಕ್ತರ ಆರ್ದ್ರವಾದ ಭಕ್ತಿರಸದಲ್ಲಿ, ರಸಸೂಕ್ತಿಯಲ್ಲಿ ಶ್ರೀಕೃಷ್ಣ ನೆಲೆಸಿದ್ದಾನೆ . ನಮಗೆ ಇಬ್ಬರು ಅಧಿದೈವಗಳು – ಹರಿ, ಹರ. ಹರಿ ಯಾರು? ಈ ಪ್ರಶ್ನೆಗೆ ಒಂದು ಉತ್ತರ ಅವನು ಅನುಪಮ, ಅಪ್ರಮೇಯ, ಪ್ರಣವ ಸ್ವರೂಪಿ, ತತ್(ಅದು) ಸತ್(ಇರುವಿಕೆ/ ಬೀಯಿಂಗ್) ಎನ್ನುವ ವ್ಯಾಖ್ಯೆಗೆ ಮಾತ್ರ ನಿಲುಕುವವನು. ಇನ್ನೂ ಒಂದು ಉತ್ತರ ಇದೆ: ಸೃಷ್ಟಿಕರ್ತ ಆಗಿರುವ ಬ್ರಹ್ಮ ಸ್ಥಿತಿಕರ್ತನಾಗಿರುವ ಹರಿಯ ನಾಭಿಕಮಲದಿಂದ ಮೂಡಿಬಂದ ಮಗನಾಗಿರುವುದರಿಂದ ಹರಿ ಸೃಷ್ಟಿಯ ಮೂಲಾಧಾರನೂ ಹೌದು, ಹಾಗೆಯೇ ಯುಗ ಯುಗಗಳಲ್ಲೂ ಸಂಭವಿಸುವವನೂ ಹೌದು. “ಕೃಷ್ಣ” ಕಾಲ ದೇಶದ ಒಳಗಿನ ಹರಿಯ ಒಂದು ಅವತಾರ, ಹುಟ್ಟಿಬಂದವನು, ಸೃಷ್ಟಿಯ ಒಂದು ವಿಶಿಷ್ಟವಾದ ರೂಪ. ನಮ್ಮ ಜೀವನಕ್ಕೆ ಸಂತೃಪ್ತಿ ದೊರೆಯುವುದು ಸೌಂದರ್ಯದ ರಸಾನುಭವ ಆದಾಗಲೇ. ವಾಸ್ತವವಾಗಿ ನಮ್ಮ ಸುತ್ತಲಿನ ಸೃಷ್ಟಿಯೇ ಸೌಂದರ್ಯರಸಾನುಭವದ ಆಕರ. ಕೃಷ್ಣ ಸಹಜವಾಗಿ ಚೆಲುವ, ಸಮ್ಮೋಹಕ, ಎಲ್ಲ ಸಿರಿ ಸೊಬಗುಗಳ ಕಳೆಗಳ ಗಣಿ, ಚಿಗುರು ತುಟಿಯ ಮಂದಹಾಸ ಉಳ್ಳವನು, ಕೌಸ್ತುಭ ಮಣಿಯಿಂದ ಬೆಳಗುತ್ತಿರುವವನು, ಕಾಮನಬಿಲ್ಲಿನಂತಹ ವರ್ಣರಂಜಿತ ದುಕೂಲ ಉಟ್ಟ ಚೆಲುವರಾಯ. ನಮಗೆ ಸೃಷ್ಟಿಯೇ ಮುಖ್ಯವಾದದ್ದು, ಏಕೆಂದರೆ ಅದು ಆಕರ್ಷಕವಾದದ್ದು ಮತ್ತೆ ಆನಂದವನ್ನು ಕೊಡುವಂತಹುದು. ಜಗತ್ತು “ಅಮೃತಾನಂದ ಭೋಗವನ್ನು ಅನುಭವಿಸಲು ಮೂಲ ಆಕರ . ಅದು ಸೌಂದರ್ಯದಲ್ಲಿ, ಪೌರುಷದಲ್ಲಿ, ತೇಜಸ್ಸಿನಲ್ಲಿ, ಜ್ಞಾನ–ಕುತೂಹಲದಲ್ಲಿ, ವಾಸ್ತವಿಕತೆಯ ಅರಿವಿನಲ್ಲಿ “ಪರಮ ಮನುಷ್ಯತ್ವವನ್ನು ಮೆರೆಯಲು ಅವಕಾಶ ಕೊಡುವ ಮಧ್ಯವರ್ತಿ. ಸಹೃದಯತೆ, ಹೃದಯವೈಶಾಲ್ಯ, ನಿಷ್ಕಲ್ಮಶ ಪ್ರೀತಿಗಳೆಲ್ಲಾ ಆಪ್ತವಾದದ್ದೇ. ಇದಕ್ಕೆಲ್ಲ ಒಂದು ಮೂರ್ತರೂಪವಾಗಿ ಶ್ರೀಕೃಷ್ಣ ಜಗದ್ಗುರು.