У нас вы можете посмотреть бесплатно ಪ್ರಪ್ರಥಮ ಬಾರಿಗೆ AI ವಿಡಿಯೋ ಮೂಲಕ ಇತಿಹಾಸ ಪ್ರಸಿದ್ಧ "ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಕಥಾಮೃತ ಭಾಗ:- 3 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಪ್ರಪ್ರಥಮ ಬಾರಿಗೆ AI ಎಡಿಟಿಂಗ್ ಮೂಲಕ ಇತಿಹಾಸ ಪ್ರಸಿದ್ಧ "ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಕಥಾಮೃತ ಭಾಗ:- 3 ವಿಡಿಯೋ ಕೃಪೆ:RNP VISUALS ಧ್ವನಿ:- ಕೀರ್ತನಾ ಸನಿಲ್ #MUNDKUR #STORY ಮುಂಡಾಕಾಸುರನ ವದೆಯ ನಂತರ ಭೂಲೋಕದಲ್ಲಿ ಶಾಂತಿ ಪುನಃ ಸ್ಥಾಪಿತವಾಯಿತು. ಜನರು ಭಯವಿಲ್ಲದೆ ಜೀವನ ನಡೆಸಲಾರಂಭಿಸಿದರು. ಒಂದು ದಿನ ಮಹಾತಪಸ್ವಿಗಳಾದ ಭಾರ್ಗವ ಮುನಿಗಳು ಕಾಡಿನಲ್ಲಿ ಸಂಚರಿಸುತ್ತಿರುವಾಗ ದಿವ್ಯ ಪ್ರಕಾಶವೊಂದನ್ನು ಕಂಡರು. ಧ್ಯಾನಸ್ಥರಾದಾಗ ಮುಂಡಾಕಾಸುರನ ವಧೆಯ ದಿವ್ಯ ದೃಶ್ಯವು ಅವರಿಗೆ ಗೋಚರಿಸಿತು. ಆ ಸ್ಥಳವೇ ಮುಂಡಾಕಾಸುರನ ವದೆ ಮಾಡಿದ ದೇವಿಯ ಶಕ್ತಿಪೀಠವೆಂದು ಅರಿತ ಮುನಿಗಳು ತಕ್ಷಣ ಈ ವಿಷಯವನ್ನು ಸುರತ ಮಹಾರಾಜರಿಗೆ ತಿಳಿಸಿದರು. ಮುನಿಗಳ ಸಲಹೆಯಂತೆ ರಾಜರು ಅಲ್ಲಿ ದೇವಾಲಯವನ್ನು ನಿರ್ಮಿಸಿ ಶ್ರೀ ದುರ್ಗಾಪರಮೇಶ್ವರಿಯ ಮೂರ್ತಿಯನ್ನು ಭವ್ಯವಾಗಿ ಪ್ರತಿಷ್ಠಾಪಿಸಿದರು. ಆ ದಿನದಿಂದ ಈ ಕ್ಷೇತ್ರವು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ಕಾಲಕ್ರಮೇಣ ಶಾಂಭವಿನದಿಯ ಇನ್ನೊಂದು ದಡದಲ್ಲಿರುವ ಬಳ್ಕುಂಜೆಯ ಕೊಲ್ಲೂರಿನಲ್ಲಿ ಬಿಲ್ಲವ ಸಮಾಜದ ಕುಟುಂಬದಲ್ಲಿ ವೀರರಾದ ಕಾಂತ ಬಾರೆ ಬೂದಬಾರೆಯರೆಂಬ ವೀರ ಮಕ್ಕಳು ಜನಿಸಿದರು. ಅವರ ತಾಯಿ ಆಚು ಬಾರೆದಿ ಆಲದ ಮರಕ್ಕೆ ತೊಟ್ಟಿಲನ್ನು ಕಟ್ಟಿಕೊಂಡು ಅವಳಿ ಮಕ್ಕಳನ್ನು ತೂಗುತ್ತಿದ್ದಳು. ಬೆಳೆದ ಬಾರೆಯರು ಗರಡಿ ವಿದ್ಯಾಭ್ಯಾಸ ಪಡೆದು ದೈಹಿಕ ಶಕ್ತಿ, ಧೈರ್ಯ ಮತ್ತು ಶೌರ್ಯದಲ್ಲಿ ಪ್ರಸಿದ್ಧರಾದರು. ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರ ಮಹಾತ್ಮೆಯನ್ನು ಅರಿತ ಅವರು ಪ್ರತಿದಿನ ದೋಣಿಯ ಮೂಲಕ ಶಾಂಭವಿ ನದಿಯನ್ನು ದಾಟಿ ದೇವಿಯ ದರ್ಶನ ಪಡೆಯುತ್ತಿದ್ದರು. ಒಂದು ಬಾರಿ ಭೀಕರ ಮಳೆಗಾಲದಲ್ಲಿ ಶಾಂಭವಿ ನದಿ ತುಂಬಿ ಹರಿದಾಗ ವೀರವರ್ಮನು ಯಾರನ್ನೂ ನದಿ ದಾಟಿಸಬಾರದೆಂದು ದೋಣಿಯವನಿಗೆ ಕಟ್ಟಪ್ಪನೆ ಮಾಡಿದನು.ಎಂದಿನಂತೆ ನದಿ ತೀರಕ್ಕೆ ಬಂದಾಗ ದೋಣಿಗಳನ್ನು ಕಾಣದೆ ನಿರಾಸರಾಗಿ ನದಿ ತೀರದಲ್ಲಿ ನಿಂತು ಬಾರೆಯರು ಅಲ್ಲಿಯೇ ಭಕ್ತಿಯಿಂದ ಮುಂಡ್ಕೂರು ತಾಯಿಗೆ ವಂದಿಸಿ ಪ್ರಾರ್ಥಿಸಿದರು. ಅವರ ಅಚಲ ಭಕ್ತಿಗೆ ಕರಗಿದ ಶ್ರೀ ದೇವಿಯು ನದಿಯನ್ನು ಎರಡು ಭಾಗವಾಗಿ ವಿಭಜಿಸಿ ದೇವಸ್ಥಾನಕ್ಕೆ ಬರಲು ದಾರಿ ಮಾಡಿಕೊಟ್ಟಳು. ಇದನ್ನು ತಿಳಿದ ಕುತಂತ್ರಿ ವೀರವರ್ಮನು ದೇವಿಯ ಶಕ್ತಿಯನ್ನು ಕುಗ್ಗಿಸಲು ಸ್ಥಳೀಯ ಅರ್ಚಕರು, ತಾಂತ್ರಿಗಳು ಒಪ್ಪದಿದ್ದಾಗ ಕೇರಳದ ಮಂತ್ರಿಕರನ್ನು ಕರೆಸಿ ಶ್ರೀ ದೇವಿಯ ಸನ್ನಿದಾನವನ್ನು ಕುಗ್ಗಿಸಿ ಶ್ರೀ ಕ್ಷೇತ್ರ ರಕ್ಷಕರನ್ನು ಸ್ಥoಬನಗೊಳಿಸಿ ಪಶ್ಚಿಮಾಬಿಮುಖವಾಗಿದ್ದ ದೇವಿಯ ಮೂಲಬಿಂಬವನ್ನು ಪೂರ್ವಭಿಮುಖವಾಗಿ ತಿರುಗಿಸಿ ಬಿಂಬದ ಅಡಿಯಲ್ಲಿದ್ದ ಮುತ್ತು, ರತ್ನಾದಿ ಅಮೂಲ್ಯ ಆಭರಣಗಳನ್ನು ದೋಚಿದನಂತೆ..ನಂತರ ಬಾರೆಯರ ಶಕ್ತಿಯನ್ನು ತಿಳಿದ ವೀರವರ್ಮನು ಮೋಸದಿಂದ ಕಬ್ಬಿನ ಕಟ್ಟಿನೊಳಗೆ ಕಬ್ಬಿಣದ ಸರಳುಗಳನ್ನು ಅಡಗಿಸಿ "ನೀವು ಇದನ್ನು ಒಂದೇ ಏಟಿಗೆ ತುಂಡರಿಸಿದರೆ ಫಲಭರಿತ ಒಬ್ಬನ್ ತೋಟವನ್ನು ನೀಡುತ್ತೇನೆ” ಎಂದು ಪಂಥಾಹ್ವಾನವಿಟ್ಟನು.ಬಾರೆಯರಿಗೆ ವೀರವರ್ಮನ ಕುಕೃತ್ಯ ಅರಿವಾಗಿ ದೇವಿಯನ್ನು ಪ್ರಾರ್ಥಿಸಿದಾಗ ಕಲ್ಲಕಂಡ ಎಂಬ ಸ್ಥಳದಲ್ಲಿ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಿಯು ಬಾರೆಯರಿಗೆ ಹರಿತವಾದ ಖಡ್ಗವನ್ನು ಪ್ರಸಾಡಿಸಿದಳು.ಆ ಖಡ್ಗದಿಂದ ಒಂದೇ ಏಟಿಗೆ ಕಬ್ಬಿನ ಕಟ್ಟಿನೊಳಗಿದ್ದ ಕಬ್ಬಿಣದ ಸರಳುಗಳೂ ಸಹ ತುಂಡಾಗಿ ಬಿದ್ದವು. ಪಣದಂತೆ ತೋಟವನ್ನು ಕೊಡಲೊಪ್ಪದ ವೀರವರ್ಮ ಹಾಗೂ ಆತನ ಸಹಚರರನ್ನು ಬಾರೆಯರು ಶ್ರೀ ದೇವಿಯು ನೀಡಿದ ಖಡ್ಗದಲ್ಲೇ ವೀರವರ್ಮ ಹಾಗೂ ದುಷ್ಟರ ಸಂಹಾರವನ್ನು ಮಾಡುತ್ತಾರೆ. ಹೀಗೆ ಶ್ರೀ ದೇವಿಯ ಕೃಪೆಯಿಂದ ದುಷ್ಟಶಕ್ತಿಗಳ ಕುತಂತ್ರ ನಶಿಸಿ ಧರ್ಮಕ್ಕೆ ಜಯ ದೊರೆಯಿತು. ಪಣದಲ್ಲಿ ಗೆದ್ದ ಒಬ್ಬನ್ ತೋಟದಲ್ಲಿ ಬಾರೆಯರು ತಮ್ಮ ಕೈಗಳಿಂದಲೇ ಬಾವಿ ತೋಡಿ ನೀರು ಪಡೆದು ತೆಂಗಿನ ತೋಟದಿಂದ ದೊರೆಯುವ ಎಣ್ಣೆಯನ್ನು ದೇವಿಯ ನಂದಾದೀಪಕ್ಕೆ ಅರ್ಪಿಸಿದರು. ನಂತರ ಚೌಟ ಅರಸರನ್ನು ಆಹ್ವಾನಿಸಿ ದೇವಸ್ಥಾನದ ನಿತ್ಯ ಸೇವೆ ಹಾಗೂ ಇನ್ನಾ, ಮುಂಡ್ಕೂರು ಮತ್ತು ಮುಲ್ಲಡ್ಕ ಗ್ರಾಮಗಳ ಮೇಲ್ವಿಚಾರಣೆಯ ಹೊಣೆಯನ್ನು ಅವರಿಗೆ ವಹಿಸಲಾಯಿತು. ಹೀಗೆ ಧರ್ಮ, ಭಕ್ತಿ ಮತ್ತು ನ್ಯಾಯ ಆ ಪ್ರದೇಶದಲ್ಲಿ ಸ್ಥಾಪಿತವಾಯಿತು. ಒಮ್ಮೆ ಚೌಟ ಅರಸನ ರಾಣಿ ದೇವಸ್ಥಾನಕ್ಕೆ ಬಂದ ಸಂದರ್ಭದಲ್ಲಿ ಅವಳ ಕಿವಿಯಲ್ಲಿ ಇದ್ದ ವಜ್ರದ ಓಲೆ ಕೆಳಗೆ ಬಿದ್ದಿತು. ಅರಿಯದೇ ಅದನ್ನು ಮರಳಿ ಧರಿಸಿಕೊಂಡು ಅರಮನೆಗೆ ಹಿಂತಿರುಗಿದಳು. ಆ ರಾತ್ರಿ ಶ್ರೀ ದೇವಿಯು ರಾಣಿಯ ಕನಸಿನಲ್ಲಿ ಪ್ರತ್ಯಕ್ಷವಾಗಿ “ನೀನು ಧರಿಸಿರುವ ಆ ಓಲೆ ನನ್ನದು” ಎಂದು ತಿಳಿಸಿದಳು. ಮುಂದಿನ ದಿನ ರಾಣಿ ಭಕ್ತಿಯಿಂದ ಆ ವಜ್ರದ ಓಲೆಯನ್ನು ದೇವಿಗೆ ಸಮರ್ಪಿಸಿದಳು. ಹೀಗೆ ವರುಷಗಳು ಕಳೆದವು. ಒಮ್ಮೆ ಊರಿನ ಮನೆಯಲ್ಲಿ ಮದುವೆ ಸಂಭ್ರಮದ ಸಂದರ್ಭ ಮದುವೆ ಹಾಲ್ಗೆ ಹೊರಟ ವಾಹನ ಮುಂದಕ್ಕೆ ಚಲಿಸದೆ ದೇವಸ್ಥಾನದ ಎದುರೇ ಕೆಟ್ಟು ನಿಂತಿತು. ಎಷ್ಟೇ ಪ್ರಯತ್ನಿಸಿದರೂ ವಾಹನ ಸರಿಯಾಗದಿದ್ದಾಗ ಊರಿನ ಹಿರಿಯರು ಮುಂಡ್ಕೂರು ದುರ್ಗಾಪರಮೇಶ್ವರಿ ಅಮ್ಮನವರಿಗೆ ಮಲ್ಲಿಗೆ ಹೂ ಅರ್ಪಣೆ ಮಾಡದಿರುವುದೇ ಇದಕ್ಕೆಲ್ಲ ಕಾರಣವೆಂದು ನೆನಪಿಸಿದರು. ಕೂಡಲೇ ಕುಟುಂಬದವರು ಶ್ರೀ ಕ್ಷೇತ್ರಕ್ಕೆ ಬಂದು ಮಲ್ಲಿಗೆ ಹೂ ಅರ್ಪಿಸಿದ ನಂತರ ವಾಹನ ಸರಿಯಾಯಿತು. ಇದರಿಂದ ದೇವಿ ಮಲ್ಲಿಗೆ ಪ್ರೀಯಲು ಎಂಬುದಾಗಿ ತಿಳಿದು ಅಂದಿನಿಂದ ಊರಿನಲ್ಲಿ ಯಾವುದೇ ಸಂಭ್ರಮ ನಡೆಯುವಾಗಲೂ ಪ್ರಥಮವಾಗಿ ಶ್ರೀ ದೇವಿಗೆ ಮಲ್ಲಿಗೆ ಹೂ ಅರ್ಪಿಸುವ ಪದ್ಧತಿ ರೂಢಿಯಾಯಿತು. ಮುಂಡ್ಕೂರಿನ ಶ್ರೀ ದುರ್ಗಾಪರಮೇಶ್ವರಿ ದೇವಿಯ ಕೃಪೆಯಿಂದ ಭಕ್ತಿಗೆ ಗೌರವ, ಧರ್ಮಕ್ಕೆ ಜಯ ಮತ್ತು ಅಹಂಕಾರಕ್ಕೆ ಪತನ ಎಂಬ ಸತ್ಯ ಸದಾಕಾಲ ಉಳಿಯಿತು. ಸಪ್ತ ದುರ್ಗೆಯರಲ್ಲಿ ಒಬ್ಬಳಾದ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ತಾಯಿ ಪರಮ ಪವಿತ್ರ ಶಂಭಾವಿ ನದಿಯ ತಟದಲ್ಲಿ ನೆಲೆಯೂರಿ ಇನ್ನಾ, ಮುಂಡ್ಕುರು, ಮುಲ್ಲಡ್ಕ ಈ ಮೂರು ಗ್ರಾಮದ ಆದಿ ದೇವಿಯಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ಜಗದ ಮಹಾ ತಾಯಿಯಾಗಿ ಭಕ್ತರನ್ನು ರಕ್ಷಿಸುತ್ತಿದ್ದಾಳೆ. ಪ್ರತಿ ವರ್ಷ ಫೆಬ್ರವರಿ 18ರಂದು ಶ್ರೀ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವವು ಭಕ್ತಿ ಭಾವದಿಂದ ಜರಗುತ್ತದೆ.