У нас вы можете посмотреть бесплатно ಧನತ್ರಯೋದಶಿ ದಿನ ಧನ್ವಂತರಿ ಪೂಜೆ ವಿಧಾನ | Dhanvantari Pooja for Long & Healthy Life или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса ClipSaver.ru
#GeethanjalisCooking #DhanvantariPoojaVidhana #AshwayujamasaTrayodashi ಗೋಪಾಲದಾಸರ ಕೃತಿ : ================== ಆವ ರೋಗವೋ ಎನಗೆ ದೇವ ಧನ್ವಂತ್ರಿ | ಪ | ಸಾವಧಾನದಿ ಕೈಯ ಪಿಡಿದು ನೀ ನೋಡಯ್ಯ | ಅ.ಪ | ಹರಿ ಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆ ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ ಹರಿ ಮಂತ್ರಸ್ತೋತ್ರ ಬಾರದು ಎನ್ನ ನಾಲಿಗೆ ಹರಿ ಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ | ೧ | ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವು ಗುರುಹಿರಿಯರಂಘ್ರಿಗೆ ಶಿರ ಬಾಗದು ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ | ೨ | ಅನಾಥ ಬಂಧು ಗೋಪಾಲವಿಠಲರೇಯ ಎನ್ನ ಬಾಗದ ವೈದ್ಯ ನೀನೆಯಾದೆ ಅನಾದಿ ಕಾಲದ ಭವರೋಗ ಕಳೆಯಯ್ಯಾ ನಾನೆಂದಿಗು ಮರೆಯೇ ನೀ ಮಾಡಿದುಪಕಾರ | ೩ | ವಿಜಯದಾಸರ ಕೃತ ಧನ್ವಂತರಿ ಸುಳಾದಿ ============================== ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವದು ಕಾಯಾ ನಿರ್ಮಲಿನಾ ಕಾರಣವಾಹುದೊ ಮಾಯಾ ಹಿಂದಾಗುವದು ನಾನಾ ರೋಗದ ಬೀಜ ಬೇಯಿಸಿ ಕಳೆವದು ವೇಗದಿಂದ ನಾಯಿ ಮೊದಲಾದ ಕುತ್ಸಿತ ದೇಹ ನಿ ಕಾಯವಾ ತೆತ್ತು ದುಷ್ಕರ್ಮದಿಂದ ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ ಹೇಯ ಸಾಗರದೊಳು ಬಿದ್ದು ಬಳಲೀ ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ ಬಾಯಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ ರಾಯಾ ರಾಜೌಷಧಿ ನಿಯಾಮಕ ಕರ್ತ ಶ್ರೀಯರಸನೆಂದು ತುತಿಸಲಾಗಿ ತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆ ನೋಯಗೊಡದೆ ನಮ್ಮನ್ನು ಪಾಲಿಪಾ ಧ್ಯೇಯಾ ದೇವಾದಿಗಳಿಗೆ ಧರ್ಮಜ್ಞ ಗುಣಸಾಂದ್ರ ಶ್ರೇಯಸ್ಸು ಕೊಡುವನು ಭಜಕರಿಗೆ ಮಾಯಾ ಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ ವಾಯುವಂದಿತ ನಿತ್ಯ ವಿಜಯ ವಿಟ್ಠಲರೇಯಾ ಪ್ರಿಯನೋ ಕಾಣೋ ನಮಗೆ ಅನಾದಿ ರೋಗ ಕಳೆವಾ || ೧ || ತಾಳ – ಮಟ್ಟ ಧನ್ವಂತ್ರಿ ಶ್ರೀಧನ್ವಂತ್ರಿ ಎಂದು ಸನ್ನುತಿಸಿ ಸತತ ಭಿನ್ನ ಜ್ಞಾನದಿಂದ ನಿನ್ನವ ನಿನ್ನವನೋ ಘನ್ನತಿಯಲಿ ನೆನೆವ ಮನ್ನುಜ ಭುವನದೊಳು ಧನ್ಯನು ಧನ್ಯನೆನ್ನಿ ಚೆನ್ನಮೂರುತಿ ಸುಪ್ರಸನ್ನ ವಿಜಯ ವಿಠ್ಠಲನ್ನ ಸತ್ಯವೆಂದು ಬಣ್ಣಿಸು ಬಹು ವಿಧದಿ || ೨ || ತಾಳ – ತ್ರಿವಿಡಿ ಶಶಿಕುಲೋದ್ಭವ ದೀರ್ಘತಮ ನಂದನದೇವಾ ಶಶಿವರ್ಣ ಪ್ರಕಾಶ ಪ್ರಭುವೆ ವಿಭುವೆ ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ ಬಿಸಜಲೋಚನ ಅಶ್ವಿನೇಯ ವಂದ್ಯಾ ಶಶಿಗರ್ಭ ಭೂರುಹ ಲತೆ ಪೂದೆ ತಾಪ ಓ ಡಿಸುವೌಷಧಿ ತುಲಸಿ ಜನಕ ಅಸುರ ನಿರ್ಜರ ತತಿನೆರೆದು ಗಿರಿಯ ತಂದು ಮಿಸುಕದಲೆ ಮಹೋದಧಿ ಮರ್ದಿಸಲಾಗಿ ನಸುನಗುತ ಪುಟ್ಟಿದೆ ಪೀಯೂಷ ಘಟ ಧರಿಸಿ ಅಸಮ ದೈವನೆ ನಿನ್ನ ಮಹಿಮೆಗೆ ನಮೋ ನಮೋ ಬಿಸಜಸಂಭವ ರುದ್ರ ಮೊದಲಾದ ದೇವತಾ ಋಷಿನಿಕರ ನಿನ್ನ ಕೊಂಡಾಡುವರೊ ದಶದಿಶದೊಳು ಮೆರೆವ ವಿಜಯ ವಿಠ್ಠಲಭಿಷ್ಕಾ ಅಸು ಇಂದ್ರಿಯಂಗಳ ರೋಗ ನಿವಾರಣ || ೩ || ತಾಳ – ಆಟ ಶರಣು ಶರಣು ಧನ್ವಂತ್ರಿ ತಮೋಗುಣನಾಶಾ ಶರಣು ಆರ್ತಜನ ಪರಿಪಾಲಕ ದೇವಾ ತರುವೆ ಭವ ತಾಪಹರಣ ದಿತಿಸುತ ಹರಣ ಮೋಹಕ ಲೀಲಾ ಪರಮಪೂರ್ಣ ಬ್ರಹ್ಮ ಬ್ರಹ್ಮ ಉದ್ಧಾರಕ ಉರುಪರಾಕ್ರಮ ಉರುಪರಾಕ್ರಮ ಉರಗಶಾಯಿ ವರಕಿರೀಟ ಮಹಾಮಣಿ ಕುಂಡಲಕರ್ಣ ಮಿರುಗುವ ಹಸ್ತ ಕಂಕಣ ಹಾರಪದಕ ತಾಂ ಬರ ಕಾಂಚಿ ಪೀತಾಂಬರ ಚರಣಭೂಷಾ ಸಿರಿವತ್ಸಲಾಂಚ್ಛನ ವಿಜಯ ವಿಟ್ಠಲರೇಯಾ ತರುಣಗಾತರ ಜ್ಞಾನ ಮುದ್ರಾಂಕಿತ ಹಸ್ತಾ || ೪ || ತಾಳ – ಆದಿ ಏಳುವಾಗಲಿ ಮತ್ತೆ ತಿರುಗಿ ತಿರುಗುತಲಿ ಬೀಳುವಾಗಲಿ ನಿಂತು ಕುಳಿತಿರುವಾಗಲಿ ಕುಳ್ಳಿರುವಾಗಲಿ ಹೇಳುವಾಗಲಿ ಮಾತು ಕೇಳುವಾಗಲಿ ಕರೆದು ಪೇಳುವಾಗಲಿ ಪೋಗಿ ಸತ್ಕರ್ಮ ಮಾಡುವಾಗ ಬಾಳುವಾಗಲಿ ಭೋಜನ ನಾನಾ ಷಡ್ರಸ ಸಂ ಮ್ಮೇಳವಾಗಲಿ ಮೇಲು ಪುತ್ರಾದಿ ಒಡೆಯೊಡನೆ ಖೇಳವಾಗಿ ಮನುಜಮರ್ಯಾದೆ ನಿನ್ನಯ ನಾಲಿಗೆ ಕೊನೆಯಲ್ಲಿ ಧನ್ವಂತರಿ ಎಂದು ಒಮ್ಮೆ ಕಾಲ ಅಕಾಲದಲ್ಲಿ ಸ್ಮರಿಸಿದರೆ ಅವಗೆ ವೇಳ್ಯ ವೇಳ್ಯಗೆ ಬಾಹ ಭವಬೀಜ ಪರಿಹಾರ ನೀಲಮೇಘಶ್ಯಾಮ ವಿಜಯ ವಿಠ್ಠಲರೇಯಾ ವಾಲಗ ಕೊಡುವನು ಮುಕ್ತರ ಸಂಗದಲೀ || ೫ || ಜತೆ ಧಂ ಧನ್ವಂತರಿ ಎಂದು ಪ್ರಣವಪೂರ್ವಕದಿಂದ ವಂದಿಸಿ ನೆನೆಯಲು ವಿಜಯವಿಠ್ಠಲ ವೊಲಿವಾ || ೬ || ಧನ್ವಂತರಿ ಸ್ತೋತ್ರ ============= ನಮೋ ಭಾಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಯೇ ಅಮೃತ ಕಲಶ ಹಸ್ತಾಯ ಸರ್ವಭಯ ವಿನಾಶಾಯ ಸರ್ವರೋಗ ನಿವಾರಣಾಯ ತ್ರೈಲೋಕ್ಯ ಪತಯೇ ತ್ರೈಲೋಕ್ಯ ನಿಧಯೇ ಶ್ರೀ ಮಹಾವಿಷ್ಣು ಸ್ವರೂಪ ಶ್ರೀ ಧನ್ವಂತರಿ ಸ್ವರೂಪ ಶ್ರೀ ಶ್ರೀ ಶ್ರೀ ಔಷದಚಕ್ರ ನಾರಾಯಣಾಯ ನಮಃ