У нас вы можете посмотреть бесплатно ಫೆ.28, ಮಾ.1ರಂದು ಸುಳ್ಯದಲ್ಲಿ ಮೊಗೇರ ದುಡಿ ಆಯನ ರಾಜ್ಯ ಸಮ್ಮೇಳನ | ABHAYA KANNADA NEWS или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ದಕ್ಷಿಣ ಕನ್ನಡ ಜಿಲ್ಲಾ ಮೊಗೇರ ಸಂಘಕೆ 50 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮೊಗೇರ ಸಂಘದ ನೇತೃತ್ವದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 1 ರಂದು ಎರಡು ದಿವಸಗಳ ಕಾಲ ಕರ್ನಾಟಕ ರಾಜ್ಯದ ಸಮಸ್ತ ಮೊಗೇರ ಸಮುದಾಯವು ಸುಳ್ಯದಲ್ಲಿ ಒಟ್ಟು ಸೇರಿ ಮೊಗೇರ ದುಡಿ ಆಯನ-2026 ರಾಜ್ಯ ಸಮ್ಮೇಳನವನ್ನು ಆಚರಿಸಲು ತೀರ್ಮಾನಿಸಿದೆ ಎಂದು ಮೊಗೇರ ಸಂಘದ ರಾಜ್ಯಾಧ್ಯಕ್ಷ ನಂದರಾಜ್ ಸಂಕೇಶ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ದ.ಕ ಜಿಲ್ಲಾ ಮೊಗೇರ ಸಂಘವು 50 ವರ್ಷಗಳನ್ನು ಪೂರೈಸುತ್ತಿದೆ. ಸುವರ್ಣ ಸಂಭ್ರಮದ ಆಚರಣೆಯ ಹೊಸ್ತಿಲಲ್ಲಿರುವ ಸಂಘದ ಸಂಭ್ರಮಾಚರಣೆಯನ್ನು ವೈವಿಧ್ಯಮಯವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಕರ್ನಾಟಕ ರಾಜ್ಯ ಮೊಗೇರ ಸಂಘವು ನಿರ್ಧರಿಸಿದೆ. ಅಸ್ಪಶ್ಯತೆ, ಜಾತೀಯತೆ, ಅಸಮಾನತೆ. ಮೇಲು ಕೀಳು, ಶ್ರೇಷ್ಠ ಕನಿಷ್ಠ ಅನ್ನುವ ವಿಷಯ ಸಮಾಜದ ಮಧ್ಯೆ ತನ್ನದೇ ಆದ ಸ್ಥಾನಮಾನ. ಶ್ರೇಷ್ಠತೆಯನ್ನು ಹೊಂದಿ ಆತ್ಮ ಗೌರವ, ಸ್ವಾಭಿಮಾನದ ಬದುಕು ಕಟ್ಟಿಕೊಂಡು ತುಳುವ ನಾಡಿನ ಸಾಂಸ್ಕೃತಿಕ ಪರಂಪರೆಗೆ ಗಣನೀಯವಾದ ಕೊಡುಗೆಯನ್ನು ಮೊಗೇರ ಸಮಾಜವು ನೀಡುತ್ತಾ ಬಂದಿರುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಸಂವಿಧಾನದ ಆಶಯದಂತೆ ಡಾ| ಬಿ.ಆರ್ ಅಂಬೇಡ್ಕರ್ ನೀಡಿರುವ ಮೀಸಲಾತಿಯ ಹಕ್ಕನ್ನು ಉತ್ತರ ಕನ್ನಡ ಜಿಲ್ಲೆಯ ಪ್ರವರ್ಗ-1 ರಲ್ಲಿರುವ ಮೀನುಗಾರ ಮೊಗೇರರು ಹುನ್ನಾರ ನಡೆಸುತ್ತಿದ್ದಾರೆ. ನಮ್ಮ ಅನ್ನದ ಬಟ್ಟಲಿಗೆ ಕೈ ಹಾಕುವ ಪ್ರಯತ್ನಗಳ ವಿರುದ್ಧ ಮೊಗೇರ ಸಂಘವು ಸಂವಿಧಾನಿಕ ಹೋರಾಟವನ್ನು ನಡೆಸುತ್ತಾ ಬರುತ್ತಿದೆ. ಒಳ ಮೀಸಲಾತಿಯ ಹಂಚಿಕೆಯಲ್ಲಿ ತಾರತಮ್ಯ ನಡೆದಾಗ ಮೊಗೇರ ಸಮಾಜವು ಹೋರಾಟವನ್ನು ಮಾಡಿ ಶೇ. 6% ಮೀಸಲಾತಿಯನ್ನು ಪಡೆಯುವಲ್ಲ ಯಶಸ್ವಿಯಾಗಿದೆ. ಮೊಗೇರ ಸಮಾಜಕ್ಕೆ ಪಾರಂಪರಿಕವಾಗಿ ಬಂದಿರುವ ಹೋರಾಟದ ಪರಂಪರೆ. ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ. ಇವೇ ಮೊದಲಾದ ವಿಷಯಗಳಲ್ಲಿ ಸಮಾಜವನ್ನು ಕಟ್ಟಿ ಬೆಳೆಸುವುದು. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಸರಿಸಿ ಹೋಗಿರುವ ಮೊಗೇರ ಸಮಾಜವನ್ನು ತಳಮಟ್ಟದಿಂದ ವಿಶಾಲ ತಳಹದಿಯಲ್ಲಿ ವಿಸ್ತರಣೆಗೊಳಿಸುವುದು, ಹೀಗೆ ನಾನಾ ವಿಚಾರಗಳನ್ನು ಮುಂದಿಟ್ಟುಕೊಂಡು ಸುಳ್ಯದ ಕೊಡಿಯಲ್ಬೈಲ್ನಲ್ಲಿರುವ ಗೌಡ ಸಮುದಾಯ ಭವನದಲ್ಲಿ ಐತಿಹಾಸಿಕ ಮೊಗೇರ ದುಡಿ ಆಯನ- 2026 ಬೃಹತ್ ಸಮ್ಮೇಳನವು ನಡೆಯಲಿದೆ. ಫೆಬ್ರವರಿ 28 ರಂದು ಶನಿವಾರ ಬೆಳಿಗ್ಗೆ 9.30 ಗಂಟೆಗೆ ಸರಿಯಾಗಿ ಜಿಲ್ಲಾ ಮೊಗೇರ ಸಂಘದ ಸ್ಥಾಪಕರಲ್ಲಿ ಓರ್ವರಾದ ಗಣಪ ಕೆ. ಮೂಡುಶೆಡ್ಡೆ. ಇವರು ಧ್ವಜಾರೋಹಣಗೈಯ್ಯುವರು. ಸಂಘದ ಸ್ಥಾಪಕರಲ್ಲಿ ಇನ್ನೋರ್ವ ಪ್ರಮುಖರಾದ ಶುಭೋದಯ ಕೂಡ್ಲು ಇವರು ದುಡಿ ಆಯನ- 2026 ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಲಿರುವ ಪ್ರತಿನಿಧಿಗಳು ಸಮ್ಮೇಳನದ ವಿವಿಧ ಕಲಾಪಗಳಲ್ಲಿ ಭಾಗವಹಿಸಲಿರುವರು. ಕಾರ್ಯಕ್ರಮದಲ್ಲಿ ಮೊಗೇರ ಸಮಾಜದ ಸಾಂಸ್ಕೃತಿಕ ಪರಂಪರೆಯಾದ ದುಡಿ ಕುಣಿತ, ವಿವಿಧ ಸಾಂಸ್ಕೃತಿಕ ನೃತ್ಯ, ಜನಪದ ಕ್ರೀಡೆ, ವಿವಿಧ ಆಟೋಟಗಳ ಪ್ರಕಾರಗಳು, ಸಾಧಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಮಾರ್ಚ್ 1 ರಂದು ಬೆಳಿಗ್ಗೆ 10.00 ಗಂಟೆಗೆ ಸರಿಯಾಗಿ ಸುಳ್ಯದ ಜ್ಯೋತಿ ವೃತ್ತದಿಂದ ಚೆನ್ನಕೇಶವ ದೇವಸ್ಥಾನದವರೆಗೆ ಸ್ಥಬ್ಧಚಿತ್ರ, ತಾಲೀಮ್ ಪ್ರದರ್ಶನ, ಹುಲಿವೇಶ, ಗೊಂಬೆ ನೃತ್ಯಗಳು, ವಾದ್ಯಗೋಷ್ಠಿ ಇತ್ಯಾದಿಗಳನ್ನೊಳಗೊಂಡಂತೆ ಮೊಗೇರರ ವರ್ಣರಂಜಿತ ಮೆರವಣಿಗೆಯು ನಡೆಯಲಿದೆ. ಅಂದು ಗೌಡ ಸಮುದಾಯ ಭವನದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ವಿಧಾನ ಸಭೆಯ ಸ್ಪೀಕರ್ ಸನ್ಮಾನ್ಯ ಯು.ಟಿ ಖಾದರ್ ಫರೀದ್, ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಸನ್ಮಾನ್ಯ ಡಾ| ಹೆಚ್. ಸಿ ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ದಿನೇಶ್ ಗುಂಡೂರಾವ್, ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಯಧುವೀರ್ ಒಡೆಯರ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ, ದ.ಕ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳ ಸದಸ್ಯರು, ವಿವಿಧ ಕ್ಷೇತ್ರದ ಗಣ್ಯ ವ್ಯಕ್ತಿಗಳು ಸೇರಿದಂತೆ ಮೊಗೇರ ಸಮಾಜದ ಗೌರವಾನ್ವಿತ ವ್ಯಕ್ತಿಗಳು ಪಾಲ್ಗೊಳ್ಳಲಿರುವರು. ಎರಡು ದಿವಸಗಳವರೆಗೆ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮದಲಿ ಸಮಸ್ತ ಮೊಗೇರ ಸಮಾಜದ ಬಂಧುಗಳು ಸ್ವಯಂ ಸ್ಪೂರ್ತಿಯಿಂದ ಭಾಗವಹಿಸುವ ಮೂಲಕ ಸಂಪೂರ್ಣ ಸಹಕಾರ ನೀಡಬೇಕೆಂದು ಕರ್ನಾಟಕ ರಾಜ್ಯ ಮೊಗೇರ ಸಂಘದ ಅಧ್ಯಕ್ಷರು ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ನಂದರಾಜ ಸಂಕೇಶ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ. ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಕಾರ್ಯಧ್ಯಕ್ಷ ಹಾಗೂ ಸುಳ್ಯ ತಾಲೂಕು ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಲ್ಲತಡ್ಡ, ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ಬಾಳಪ್ಪ ಮಣಿ ಮಜಲು, ಅಚ್ಯುತ ಮಲ್ಲಾಜೆ, ಕೇಶವ ಮಾಸ್ಟರ್, ಸವಿತಾ ಮುಂಡಾಜೆ, ವಿಜಯಲಕ್ಷ್ಮಿ ಪುತ್ತೂರು, ಶಂಕರ್ ಪೆರಾಜೆ, ಬಾಬು ಕನಕಮಜಲು ಉಪಸ್ಥಿತರಿದ್ದರು.