У нас вы можете посмотреть бесплатно Rashtrotsava: ’ನಾದೋಪಾಸನ“Naadopasana” 2024-25 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Article for Annual day celebration in Rashtrottana Vidya Kendra. 2024-25 Excitement, tension and the willingness to take part in the cultural activities of the school was prominent with the 5th class students of Rashtrottana Vidya Kendra. Practice, practice and the grit and determination of the students to show that they were the best in all the activities of the school was prevailant. Finally the day 8th February, 2025 arrived . The children despite having fever with smiles proved that they were the best in the cukltural program featuring dances, music and thus captivating the audience. The theme was musical instruments and the display of the music by these instrument evoked a sense of appreciation from the spectators and proved that music is divine. The Annual day celebration not only fostered a sense of community, but also encouraged students to excel in their endeavors. ನಾದೋಪಾಸನ ದಿನಾಂಕ 8.2.2025 ರಂದು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಧಣಿಸಂದ್ರದಲ್ಲಿ ನಾದೋಪಾಸನ ಎಂಬ ಶೀರ್ಷಿಕೆಯ ಅಡಿಯಲ್ಲಿ ರಾಷ್ಟ್ರೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಆಗಮಿಸಿದ ರಂಗಭೂಮಿ ಮತ್ತು ದೃಷ್ಟಿ ಕಥೆಗಾರರಾದ ಶ್ರೀಮತಿ ಸಂಗೀತ ಸುದರ್ಶನ್ ರವರು ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ "ಕೇರಳದಲ್ಲಿ ಓಣಂ ಆಚರಿಸುವ ದಿನದಂದು ಮಹಾ ಬಲಿಚಕ್ರವರ್ತಿ ಭೂಮಿಗಿಳಿದು ಬರುತ್ತಾರೆ ಎಂದು ಹೇಳಲಾಗುತ್ತದೆ. ಅಲ್ಲಿನ ಜನರು ಹೊಸದಾಗಿ ಕೃಷಿ ಮಾಡಿರುವಂತ ಬೆಳೆಯನ್ನು ಪೂಜೆ ಮಾಡುತ್ತಾರೆ. ಮೂಲ ವಿಚಾರ ಏನು ಎಂದರೆ ಇದೇ ದಿನ ವಾಮನ ಅವತಾರವಾಗಿದ್ದು ಎಂಬುದು ಎಷ್ಟೋ ಜನರಿಗೆ ತಿಳಿದಿಲ್ಲ. ಈ ಶಾಲೆಯಲ್ಲಿ ಸಂಸ್ಕಾರ, ಆಚಾರ- ವಿಚಾರದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಸಂಸ್ಕಾರದ ಮೂಲ ಪುರಂದರದಾಸರ ನಾದೋಪಾಸನ ಶೀರ್ಷಿಕೆ ಇಟ್ಟಿರುವುದು ನನಗೆ ತುಂಬಾ ಸಂತೋಷ ತಂದಿದೆ. ನಾರದ ಮಹರ್ಷಿಗಳಾಗಿ ವಿಷ್ಣುವಿನ ಆಜ್ಞೆ ಮೇರೆಗೆ ಮತ್ತೆ ಭೂಮಿಯಲ್ಲಿಪುರಂದರದಾಸರಾಗಿ ಹುಟ್ಟಿ ತಮ್ಮ ವಿಚಾರಗಳನ್ನ ಪ್ರಸಾರ ಮಾಡಬೇಕು. ಜಗತ್ತಿನಲ್ಲೇಡಿ ಸಂಸ್ಕಾರದ ವಿಷಯವಾಗಿ ಜಾಗೃತಿ ಮೂಡಿಸಬೇಕು. ದೈವಿ ವಿಚಾರಗಳ ಬೀಜ ಬಿತ್ತುವುದರ ಮೂಲಕ ಸಂಸ್ಕಾರದ ಪ್ರಚಾರ ಮಾಡಬೇಕು ಎಂಬುದಾಗಿತ್ತು. ಹೀಗೆ ಸಾಕ್ಷಾತ್ಕಾರ ಎನ್ನುವುದು ಕೆಲವು ಘಟನೆಗಳಿಂದ,ಕೆಲವು ಸ್ಥಳಗಳಿಂದ ಆಗುತ್ತೆಯೋ ಹಾಗೆ ನಮ್ಮ ರಾಷ್ಟ್ರೋತ್ಥಾನದ ಶಾಲೆಯಲ್ಲಿ ಕೂಡ ಮಕ್ಕಳಿಗೆ ಭಕ್ತಿಯನ್ನು ಬೇರೆ ಬೇರೆ ವಿಷಯ ಕಲಿಯುವುದರ ಮೂಲಕ ಆ ಭಕ್ತಿ ಅನ್ನೋದನ್ನ ತುಂಬುತ್ತಿದ್ದಾರೆ. ಉದಾಹರಣೆಗೆ ಶಾಲೆಯಲ್ಲಿ ನಡೆದ ಸಾಕೇತಾಭಿಗಮನ ರಾಷ್ಟ್ರೋತ್ಸವದಲ್ಲಿ ನಿರೂಪಣೆ ಮಾಡಿದ ಮಕ್ಕಳು ಸುಮಾರು ಸಾವಿರ ಬಾರಿ ರಾಮನಾಮ ಜಪವನ್ನು ಮಾಡಿದ್ದರು. ಅಜ್ಞಾನದಲ್ಲಿ ಇದ್ದಂತ ಅಂತಹ ವಾಲ್ಮೀಕಿ ಮಹರ್ಷಿಗಳೇ ರಾಮನಾಮ ಜಪದೊಂದಿಗೆ ಭಗವಂತನ ಸಾಕ್ಷಾತ್ಕಾರ ಪಡೆದರು, ಈ ಶಾಲೆಯ ಮಕ್ಕಳು ಸಾವಿರಾರು ಬಾರಿ ರಾಮನ ಸ್ಮರಣೆ ಮಾಡಿದ್ದಾರೆ ಸಾಕ್ಷಾತ್ಕಾರ ಆಗದೇ ಇರುವುದೇ, ಇಲ್ಲಿನ ಸಂಸ್ಕಾರದ ಪ್ರತಿಫಲ ಎಲ್ಲರೂ ಅನುಭವಿಸುತ್ತಾರೆ . ಈ ಶಾಲೆ ಇನ್ನೂ ಹೆಚ್ಚೆಚ್ಚು ಪ್ರಬಲವಾಗಲಿ.” ಎಂದು ತಿಳಿಸಿದರು. ನಂತರ ನಾದೋಪಾಸನ ಎಂಬ ಶೀರ್ಷಿಕೆ ಅಡಿಯಲ್ಲಿ ಸಂಗೀತ ವಾದ್ಯಗಳಾದ ಸಿತಾರಾ, ತಬಲ, ವೀಣೆ, ಘಟಂ, ಕೊಳಲು, ಡಮರು, ನಾದಸ್ವರ, ಸಂತೂರ್, ಡೋಲಾಕ್, ಏಕ ತಾರ, ತಮಟೆ, ಚಂಡೆ, ಜಲತರಂಗ ಈ ಸಂಗೀತ ಸಾಧನಗಳನ್ನು ಪ್ರಸ್ತುತ ಪಡಿಸುವಂತಹ ಸರಣಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ನಾದಲೋಕಕ್ಕೆ ಕೊಂಡೊಯ್ದಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಸಂಯೋಜಕರು, ಶಿಕ್ಷಕರು ಹಾಗೂ ಶಿಕ್ಷಕೇತರ ವರ್ಗದವರು ಪೋಷಕರು ಉಪಸ್ಥಿತರಿದ್ದು, ಕಾರ್ಯಕ್ರಮದ ನಿರೂಪಣೆ, ಸ್ವಾಗತ, ಉದ್ದೇಶ ಹಾಗೂ ವಂದನಾರ್ಪಣೆ ಕ್ರಮವಾಗಿ ನಮ್ಮ ಶಾಲೆಯ 5ನೆಯ ತರಗತಿಯ ವಿದ್ಯಾರ್ಥಿಗಳಾದ ಶ್ರೀಪ್ರದ, ಹರಿಣಿ, ಸ್ಕಂದ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಕೀರ್ತನ ಮತ್ತು ಅಥರ್ವ ನಡೆಸಿಕೊಟ್ಟರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.