У нас вы можете посмотреть бесплатно ಲೋಕಸಭೆ; ಅಗಲಿದ ಗಣ್ಯರಿಗೆ ಸಂತಾಪ ; T-20 ಗೆಲುವು; ಭಾರತ ತಂಡಕ್ಕೆ ಅಭಿನಂದನೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತವಾದ ಇಂದು, ಲೋಕಸಭೆಯಲ್ಲಿ ಬೆಳಿಗ್ಗೆ ಸಂತಾಪ ಸೂಚನೆ ನಿರ್ಣಯ ಕೈಗೊಳ್ಳಲಾಯಿತು. ಇತ್ತೀಚೆಗೆ ನಿಧನರಾದ ಶಿಲ್ಲಾಂಗ್ನ ಹಾಲಿ ಸಂಸದ, ವಾಯ್ಸ್ ಆಫ್ ದಿ ಪೀಪಲ್ ಪಾರ್ಟಿಯ ನಾಯಕ ಡಾ. ರಿಕಿ ಆಂಡ್ರ್ಯೂ ಜೆ. ಸಿಂಗ್ಕಾನ್ ಅವರಿಗೆ ಸದನ ಶ್ರದ್ಧಾಂಜಲಿ ಸಲ್ಲಿಸಿತು. ಅಲ್ಲದೆ, ಕುಮಾರಿ ಸುಶೀಲಾ ತ್ರಿರಿಯಾ, ದೇವಿ ಬಕ್ಸ್ ಸಿಂಗ್, ಪೂರ್ಣಮಸಿ ರಾಮ್ ಮತ್ತು ಕೆ.ಪಿ. ಉನ್ನಿಕೃಷ್ಣನ್ ಸೇರಿದಂತೆ ನಾಲ್ವರು ಮಾಜಿ ಸದಸ್ಯರಿಗೂ ಸದನ ಸಂತಾಪ ಸಲ್ಲಿಸಿತು. ಅಗಲಿದ ಗಣ್ಯರಿಗೆ ಗೌರವ ಸೂಚಕವಾಗಿ ಮೌನ ಆಚರಿಸಲಾಯಿತು. ಬಳಿಕ, ಸ್ಪೀಕರ್ ಪೀಠದಲ್ಲಿ ಆಸೀನರಾಗಿದ್ದ ಜಗದಾಂಬಿಕ ಪಾಲ್ ಅವರು, ನ್ಯೂಜಿಲೆಂಡ್ ವಿರುದ್ಧ T -20 ವಿಶ್ವಕಪ್ ಕ್ರಿಕೆಟ್ನಲ್ಲಿ ಗೆಲುವು ಸಾಧಿಸಿದ ಭಾರತ ಕ್ರಿಕೆಟ್ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಈ ವಿಜಯದೊಂದಿಗೆ, ಭಾರತದ ಆಟಗಾರರು ದೇಶಾದ್ಯಂತ ಲಕ್ಷಾಂತರ ಯುವಕರು ದೊಡ್ಡ ಕನಸು ಕಾಣಲು ಮತ್ತು ಕ್ರೀಡೆಯಲ್ಲಿ ಶ್ರೇಷ್ಠತೆಗಾಗಿ ಶ್ರಮಿಸಲು ಸ್ಫೂರ್ತಿ ನೀಡಿದ್ದಾರೆ ಎಂದರು. ಬಳಿಕ ಪ್ರಶ್ನೋತ್ತರ ಕಲಾಪ ನಡೆಯುತ್ತಿದ್ದಂತೆಯೇ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸುವಂತೆ ವಿರೋಧ ಪಕ್ಷಗಳು ಮತ್ತೆ ಗದ್ದಲ ಸೃಷ್ಟಿಸಿದವು. ಇದರಿಂದ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷಗಳ ಗದ್ದಲ ಮುಂದುವರೆಯಿತು. ಅವಿಶ್ವಾಸ ಗೊತ್ತುವಳಿಗೆ ಸಂಬಂಧಿಸಿದಂತೆ ನಿರ್ಣಯ ಮಂಡಿಸಲು ಎಲ್ಲರಿಗೂ ಅವಕಾಶ ಕಲ್ಪಿಸಲಾಗುವುದು. ಯಾರೂ ಗದ್ದಲ ಸೃಷ್ಟಿಸದಂತೆ ಜಗದಾಂಬಿಕ ಪಾಲ್ ಪದೆ ಪದೇ ಮನವಿ ಮಾಡಿಕೊಂಡಿದರೂ ಗದ್ದಲ ಮುಂದುವರೆಯಿತು. ಈ ವೇಳೆ ಜಗದಾಂಬಿಕ ಪಾಲ್, ಸದಸ್ಯರು ಸದನ ನಿಯಮಗಳಿಗೆ ಬದ್ಧರಾಗಿ ಕೆಲಸ ಮಾಡಬೇಕು. ಇಡೀ ದೇಶ ನಿಮ್ಮನ್ನು ಗಮನಿಸುತ್ತಿದೆ. ಈ ರೀತಿ ವರ್ತಿಸುವುದು ಸರಿಯಲ್ಲ. ಎಲ್ಲರಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು. ಆದರೂ, ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಯಿತು (3.00) #LiveDDChandanaNews #DDChandanaNews #DDChandana #DDKannada