У нас вы можете посмотреть бесплатно ಅನಂತಪುರ ಶ್ರೀ ಅನಂತದ್ಮನಾಭಸ್ವಾಮಿ ದೇವಸ್ಥಾನ | Documentary | Kasaragod или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕುಂಬಳೆ ಸೀಮೆಗೆ ಒಳಪಟ್ಟಿರುವ, ಕಾಸರಗೋಡು ಜಿಲ್ಲೆಯ ಕುಂಬಳೆ ಪೇಟೆಯಿಂದ ಪೂರ್ವಕ್ಕೆ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಶ್ರೀ ಅನಂತಪುರ ಕ್ಷೇತ್ರವು ನಿರ್ಮಾಣ ವೈವಿಧ್ಯತೆಯಿಂದಲೂ ಪ್ರಕೃತಿ ವಿಶೇಷತೆಗಳಿಂದಲೂ ಆಸ್ತಿಕರನ್ನು ಆಕರ್ಷಿಸುತ್ತದೆ. ಪುರಾತನ ಕಾಲದಲ್ಲಿ ಇದು ವೈಭವದಿಂದ ಮೆರೆಯುತ್ತಿತ್ತು ಎಂಬುದಕ್ಕೆ ಪುರಾವೆಗಳು ಈಗಲೂ ನಮ್ಮ ಕಣ್ಣ ಮುಂದಿವೆ. ನಾಲ್ದೆಸೆಗಳಲ್ಲೂ ಹರಡಿ ನಿಂತಿರುವ ಚಿಕ್ಕಪುಟ್ಟ ಪರ್ವತಗಳು ತಮ್ಮ ಮಡಿಲಿನಲ್ಲಿ ಜೋಪಾನ ಮಾಡುತ್ತಿರುವಂತೆ ತೋರುತ್ತಿರುವ ಪ್ರದೇಶವಿದು. ನಿಸರ್ಗ ಸೌಂದರ್ಯದ ಜೊತೆಗೆ ಸರೋವರ ಮಧ್ಯದಲ್ಲಿ ಶೋಭಾಯಮಾನವಾಗಿ ಕಂಗೊಳಿಸುತ್ತಿರುವ ಈ ಕ್ಷೇತ್ರ ಸಂದರ್ಶಕರ ಕಣ್ಮನಗಳಿಗೆ ಮುದನೀಡುತ್ತದೆ. ಶ್ರೀ ಅನಂತಪದ್ಮನಾಭನ ದಿವ್ಯ ಸನ್ನಿಧಿಯನ್ನು ಕಾಣುವುದಕ್ಕೆ ಕಾತರರಾಗಿ ಆಗಮಿಸುವ ಭಗವದ್ಭಕ್ತರನ್ನು ನೂರಾರು ಸಂವತ್ಸರಗಳಿಂದ ಚಳಿಮಳೆಬಿಸಿಲುಗಳಿಗೆ ಎದೆಕೊಟ್ಟು ಭದ್ರವಾಗಿ ನಿಂತಿರುವ ಸರ್ಪಕಟ್ಟು ಶೈಲಿಯ ನೀಳವಾದ ಗೋಡೆಯು ಸ್ವಾಗತಿಸುತ್ತದೆ. ಅದೊಂದು ವಿಶಿಷ್ಟವಾದ ರಚನೆ. ಅಪೂರ್ವವೂ ಹೌದು. ಸರ್ಪಕ್ಕೆ ಕೂಡ ದಾಟಲು ಅಸಾಧ್ಯವಾದ ರೀತಿಯಲ್ಲಿ ನಿರ್ಮಿತವಾಗಿರುವುದರಿಂದ ಈ ರಚನೆಗೆ ಸರ್ಪಕಟ್ಟು ಎಂಬ ಹೆಸರು ಬಂದಿರುತ್ತದೆ. ಇಂತಹ ರಚನೆ ಇರುವ ಕ್ಷೇತ್ರಗಳು ಬಹು ವಿರಳ, ಒಂದಾನೊಂದು ಕಾಲದಲ್ಲಿ ಇದು ಒಂದು ಮಹಾಕ್ಷೇತ್ರವಾಗಿತ್ತೆಂಬುದನ್ನು ಈ ರಚನೆಯು ಸಾರುತ್ತದೆ ಎಂದು ಕ್ಷೇತ್ರದ ವಾಸ್ತುಶಿಲ್ಪಿಗಳಾದ ವೇಲಪ್ಪರಂಬಿಲ್ ಶ್ರೀ ಪರಮೇಶ್ವರನ್ ನಂಬೂದಿರಪ್ಪಾಡ್ ಹೇಳಿದ್ದಾರೆ. ಯತಿವರೇಣ್ಯರಾದ ಬಿಲ್ವಮಂಗಲ ಸ್ವಾಮಿಗಳಿಗೂ ಶ್ರೀ ಅನಂತಪದ್ಮನಾಭನ ದಿವ್ಯ ಸನ್ನಿಧಿಗೂ ನಿಕಟ ಸಂಬಂಧವಿದೆಯೆಂದು ಐತಿಹ್ಯ ತಿಳಿಸುತ್ತದೆ. ಶ್ರೀಹರಿಯ ಪರಮ ಭಕ್ತರಾಗಿದ್ದ ಬಿಲ್ವಮಂಗಲ ಸ್ವಾಮಿಗಳು ಶ್ರೀ ಕ್ಷೇತ್ರದಲ್ಲಿ ಪೂಜಾದಿ ಕರ್ಮಗಳನ್ನು ನಿಷ್ಠೆಯಿಂದ ಮಾಡುತ್ತಾ ಇಲ್ಲಿಯೇ ವಾಸವಾಗಿದ್ದರಂತೆ. ಎಂದಿನಂತೆ ತಮ್ಮ ನಿತ್ಯನೈಮಿತ್ತಿಕಗಳ ಜೊತೆ ಅರ್ಚನೆಯೇ ಮೊದಲಾದ ಕೆಲಸಗಳಲ್ಲಿ ಲೀನರಾದ ಅವರು ಫಕ್ಕನೆ ಬಾಲಕನೊಬ್ಬನು ತಮ್ಮ ಜೊತೆಗಿರುವುದನ್ನು ಗಮನಿಸಿದರು. ಅದನ್ನು ವಿಶೇಷವಾಗಿ ಪರಿಗಣಿಸದೆ ತಮ್ಮ ಕಾರ್ಯದಲ್ಲಿ ತಲ್ಲೀನರಾದ ಮುನಿಗಳು ಬಾಲಕನ ಚೇಷ್ಟೆ ಹೆಚ್ಚಾದಾಗ ಕುಪಿತಗೊಂಡು ತಮ್ಮ ಎಡ ಕೈಯಿಂದ ಅವನನ್ನು ದೂಡಿಬಿಟ್ಟರು. ತತ್ಕ್ಷಣವೇ ಆ ಬಾಲಕನು ಶ್ರೀಕ್ಷೇತ್ರವನ್ನು ಆವರಿಸಿರುವ ಸರೋವರದ ಈಶಾನ್ಯ ಭಾಗದ ದಡಕ್ಕೆ ಹೋಗಿ ಬಿದ್ದನೆಂದೂ ಅದೇ ಸ್ಥಳದಲ್ಲಿ ಒಂದು ಗುಹೆ ನಿರ್ಮಾಣವಾಯಿತಲ್ಲದೆ ಆ ಬಾಲಕನು ಮಾಯವಾಗಿ ಅಲ್ಲಿ ಕೇವಲ ಓಂಕಾರ ಸಹಿತವಾದ ಒಂದು ಜ್ಯೋತಿ ಕಾಣಿಸಿಕೊಂಡಿತೆಂಬುದು ಚರಿತ್ರೆ, ತಮ್ಮ ದಿವ್ಯಜ್ಞಾನದ ಮೂಲಕ ಬಿಲ್ವಮಂಗಲ ಸ್ವಾಮಿಗಳಿಗೆ ಆದ ಅನಾಹುತ ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ದೈವೀಕ ಶಕ್ತಿಯೇ ಬಾಲಕನ ರೂಪದಲ್ಲಿ ಕಾಣಿಸಿಕೊಂಡುದೆಂದು ತಿಳಿದುಕೊಂಡ ಯತಿಗಳು ತಡಮಾಡದೆ ಗುರುಮಾರ್ಗವಾಗಿ ತಾವೂ ಮುಂದುವರಿದು ಬಾಲಕನನ್ನು ಅರಸುತ್ತಾ ನಡೆದೇಬಿಟ್ಟರು. ಓಂಕಾರ ಮುಂದೆ ಸಾಗಿದಂತೆ ಸ್ವಾಮಿಗಳು ಅದನ್ನು ಹಿಂಬಾಲಿಸುತ್ತಾ ಸಾಗಿದರು. ಪಶ್ಚಿಮಾಭಿಮುಖವಾಗಿ ಮುಂದುವರಿದ ಪಯಣ ಕಡಲತಡಿಗೆ ತಲುಪಿತು. ಹೊರಪ್ರಪಂಚಕ್ಕೆ ಬಂದ ಸ್ವಾಮಿಗಳು ಆ ಪರಮ ಶಕ್ತಿಯ ದರ್ಶನವೆಂಬಂತೆ ಈಗಿನ ಮೊಗ್ರಾಲ್ನ ಸಮೀಪದ ಕಡಲಕಿನಾರೆಯಲ್ಲಿರುವ ನಾಂಗುಯಿ ಎಂಬಲ್ಲಿ ಮುರಕಲ್ಲಿನಿಂದ ನಿರ್ಮಿತವಾದ ಎರಡು ಪಾದಗಳನ್ನು ಕಂಡರು. ಅದಕ್ಕೆ ವಿಧಿವತ್ತಾಗಿ ಪೂಜೆಯನ್ನು ಸಲ್ಲಿಸಿದ ಸ್ವಾಮಿಗಳು ಅಲ್ಲಿಂದ ದಕ್ಷಿಣಾಭಿಮುಖವಾಗಿ ಪ್ರಯಾಣವನ್ನು ಮುಂದುವರಿಸಿದರು. ದಿನಗಳೆಷ್ಟೋ ಕಳೆದುಹೋದುವು. ಪ್ರಯಾಣ ನಿರಂತರ ಸಾಗಿ ಅನಂತನ್ಕಾಡ್ ಎಂಬಲ್ಲಿಗೆ ಯತಿಗಳು ತಲುಪಿದರು. ಅವರ ಅಚಲ ಭಕ್ತಿ ಮತ್ತು ಪರಮಾತ್ಮನ ದರ್ಶನ ಪಡೆಯುತ್ತೇನೆಂಬ ವಿಶ್ವಾಸ ಹಾಗೂ ಪ್ರಯತ್ನಗಳಿಗೆ ಒಲಿದ ಶ್ರೀದೇವರು ಅಲ್ಲಿ ಕಾಣಿಸಿಕೊಂಡರಂತೆ. (ಆ ಸ್ಥಳವು ಈಗ ತಿರುವನಂತಪುರ ಎನಿಸಿದೆ). “ನೀನು ನಿಜವಾಗಿಯೂ ನನ್ನ ಪರಮ ಭಕ್ತ. ಅನಂತಪುರದಲ್ಲಿ ನಡೆದುದು ಅಘಟಿತ ಘಟನೆಯೆಂದು ತಿಳಿ. ಅದು ಕಾಲದ ಮಹಿಮೆ. ನೀನು ಇನ್ನು ಇಲ್ಲಿಂದ ಮತ್ತೆ ಅನಂತಪುರಕ್ಕೆ ಹಿಂದಿರುಗಬೇಕು” ಎಂಬ ಶ್ರೀದೇವರ ವಚನವನ್ನು ಶಿರಸಾವಹಿಸಿದ ಸ್ವಾಮಿಗಳು ಅಲ್ಲೇ ಇದ್ದ ಮಾವಿನ ಮರದಿಂದ ಮಾವಿನ ಕಾಯಿಯನ್ನು ಕೊಯ್ದು ಗೆರಟೆಯಲ್ಲಿಟ್ಟು ತಮ್ಮ ಇಷ್ಟದೇವರಿಗೆ ನೈವೇದ್ಯ ಮಾಡಿದರಂತೆ. (ಈಗಲೂ ಪ್ರತಿದಿನ ತಿರುವನಂತಪುರ ಶ್ರೀ ಪದ್ಮನಾಭ ಸ್ವಾಮಿಗೆ ಮಾವಿನ ಕಾಯಿ ನೈವೇದ್ಯ ನಡೆಯುತ್ತದೆ.) ದೇವರ ಆಣತಿಯನ್ನು ಪಾಲಿಸುವುದಕ್ಕಾಗಿ ಬಿಲ್ವಮಂಗಲ ಸ್ವಾಮಿಗಳು ಮತ್ತೆ ಅನಂತಪುರಕ್ಕೆ ಆಗಮಿಸಿ ಪೂಜೆಪುನಸ್ಕಾರಗಳನ್ನು ಮಾಡುತ್ತಾ ಬಹುಕಾಲ ಬದುಕಿದ್ದರಂತೆ. ಶಿಲ್ಪಿಗಳು ಹೇಳುವಂತೆ ಬಿಂಬ ರಚನೆಗೆ ಸಂಬಂಧಿಸಿ ಪ್ರಧಾನವಾದ ಎಂಟು ಪದ್ಧತಿಗಳಲ್ಲೊಂದಾದ ಕಡುಶರ್ಕರ ವಿಭಾಗಕ್ಕೆ ಸೇರುವ ವಿಶಿಷ್ಟವಾದ ರೀತಿಯಲ್ಲಿ ಗರ್ಭಗುಡಿಯಲ್ಲಿಯೇ ರಚನೆ ಮಾಡುವ ವಿಧಾನವೇ ಇಲ್ಲಿನ ವಿಶೇಷ, ನಿರ್ಮಾಣದಲ್ಲಿ ಬಹಳ ಕ್ಲಿಷ್ಟಕರವಾದುದಾದರೂ ಕಾಠಿಣ್ಯದಿಂದ ಕೂಡಿದ್ದು, ಇದರ ಪ್ರಧಾನ ಕಚ್ಚಾ ವಸ್ತುಗಳೆಂದರೆ 64 ವಿಧದ ಆಯುರ್ವೇದ ಔಷಧಿಗಳು. ಆದರೆ ಕಡುಶರ್ಕರ ಪಾಕ ಸಿದ್ಧವಾಗಬೇಕಾದರೆ 108 ವಿಧದ ವಸ್ತುಗಳ ಅಗತ್ಯವಿದೆ. ಅವುಗಳನ್ನು ಸಸ್ಯಜನ್ಯ, ಪ್ರಾಣಿಜನ್ಯ ಮತ್ತು ಪ್ರಕೃತಿದತ್ತ ಎಂದು ವಿಭಾಗ ಮಾಡಬಹುದು. ಬಿಂಬ ರಚನೆಯಲ್ಲಿ ಪ್ರಧಾನವಾದ ಒಂದು ವಿಧಿ ಎಂದರೆ ಶೂಲ ಪ್ರತಿಷ್ಠೆ. ವಿಗ್ರಹ ರಚನೆಗಾಗಿ ಶ್ರೀ ದೇವರ ಸಾನ್ನಿಧ್ಯವಿರುವ ಸ್ಥಳದಲ್ಲಿ ಕದಿರ ಮರ ಎಂದು ಕರೆಯಲ್ಪಡುವ ಕಾಚಿ ಮರದಿಂದ ತಯಾರಿಸಿದ ಅಸ್ಥಿಪಂಜರವನ್ನು ಪೀಠದಲ್ಲಿ ಅಳವಡಿಸುವ ಕ್ರಿಯೆಗೆ ಶೂಲಪ್ರತಿಷ್ಠೆ ಎಂದು ಹೆಸರು. ಅನಂತರ ಬಿಂಬ ರಚನೆಯ ಕೆಲಸ ಆರಂಭವಾಗುತ್ತದೆ. ತಯಾರಿಸಿದ ಪಾಕವನ್ನು ಆ ಶೂಲಕ್ಕೆ ಹಚ್ಚುತ್ತಾ ವರ್ಷಗಟ್ಟಲೆ ಕಾರ್ಯವೆಸಗಿದ ಶಿಲ್ಪಿಗಳು ಆ ಕೆಲಸವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇಂತಹ ಅತ್ಯಪೂರ್ವವಾದ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುವಲ್ಲಿ ನೇತೃತ್ವ ವಹಿಸಿದ ಶಿಲ್ಪಿಗಳಾದ ಕೋಟ್ಟಯಂ ಸಮೀಪದ ಬ್ರಹ್ಮಮಂಗಲಂ ನಿವಾಸಿಗಳಾದ ಶಿಲ್ಪಿ ದಿ| ಶ್ರೀ ಸುಬ್ರಹ್ಮಣ್ಯ ಆಚಾರಿ ಮತ್ತು ಅವರ ಪುತ್ರ ಶ್ರೀ ಕೈಲಾಸ್ ನಿಜಕ್ಕೂ ಅಭಿನಂದನಾರ್ಹರು. ಸರೋವರ ಕ್ಷೇತ್ರವೆಂದೇ ಖ್ಯಾತಿವೆತ್ತ ಶ್ರೀ ಅನಂತಪುರ ದೇವಸ್ಥಾನವು ವಿಶಾಲವಾದ ಕೆರೆಯ ಮಧ್ಯದಲ್ಲಿ ನೆಲೆಗೊಂಡಿದೆ. ಶುಭ್ರವಾಗಿ ಕಂಗೊಳಿಸುವ ಈ ಸರೋವರದ ನೀರಿಗೆ ಔಷಧಗುಣ ಇರುವುದೆಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಸರೋವರದಲ್ಲಿ ವಾಸವಾಗಿರುವ ಮೊಸಳೆಯು ಇಲ್ಲಿಯ ಇನ್ನೊಂದು ವಿಶೇಷತೆ. ಬಬಿಯಾ ಎಂದು ಕರೆಯಲಾಗುತ್ತಿದ್ದ ಮೊಸಳೆ ಭಗವದ್ಭಕ್ತರಿಗೆ, ಕ್ಷೇತ್ರದ ಅರ್ಚಕರೇ ಮೊದಲಾದವರಿಗೆ ಆಗಾಗ ಕಾಣಿಸುತ್ತದೆ. ಹಿಂದೆ ಇದ್ದ ಮೊಸಳೆಯನ್ನು 1945ರಲ್ಲಿ ಬ್ರಿಟಿಷ್ ಸೈನಿಕನೊಬ್ಬನು ಗುಂಡಿಕ್ಕಿ ಕೊಂದನೆಂದೂ ಕೆಲವೇ ದಿನ ಕಳೆದಾಗ ಈಗ ಇರುವ ಮೊಸಳೆ ಕಾಣಿಸಿಕೊಂಡಿತೆಂದೂ ಸಮೀಪವಾಸಿಗಳಾದ ಎಂಬತ್ತು ವರ್ಷ ಪ್ರಾಯದ ಹಿರಿಯರೊಬ್ಬರ ಅಂಬೋಣ. ಸುಮಾರು ಎಂಟು ಅಡಿ ಉದ್ದವಿರುವ ಬಬಿಯಾ ಹೆಣ್ಣೂ ಗಂಡೋ ಎಂಬುದನ್ನು ಕೂಡ ತಿಳಿದವರಿಲ್ಲ. ಅದಂತೂ ನಿರುಪದ್ರವಿ. Thanks Ananthapura Shree Ananthapadmanabhaswamy Temple Committee, Devotees and Management Temple location https://goo.gl/maps/hGHVca7pTgJ6zqDEA Music Antar Mann Zen Mode www.hoopr.ai/discover Narrated By Mahalingeshwara Bhat Created By Mahesh Thejaswi Please share and subscribe my channel if you like the content. Thank You #sushira #temple #documentary