У нас вы можете посмотреть бесплатно | ಕಾಪು ರಾಜಕಾರಣ ದೈವ, ದೇವರ ಅಂಗಳಕ್ಕೆ | Kaup politics | или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕಾಂಗ್ರೆಸ್ ಅಪಪ್ರಚಾರಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ (Mass prayer led by Kaup MLA Gurme Suresh Shetty against Congress's propaganda) ಕಾಂಗ್ರೆಸ್ ಅಪಪ್ರಚಾರಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಕಾಪು ಹೊಸ ಮಾರಿಗುಡಿ, ಕಟಪಾಡಿ ಪೇಟೆಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಪ್ರಾರ್ಥನೆ (Kaup) ಕಾಪು : ಕಾಪು ಕಾಂಗ್ರೆಸ್ ನ ರಾಜಕೀಯ ಸುಳ್ಳು ಆರೋಪಗಳ ಬಗ್ಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹಿತ ಬಿಜೆಪಿ ಪಕ್ಷದ ಪ್ರಮುಖರು ಹೊಸ ಮಾರಿಗುಡಿ ಹಾಗೂ ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ದೈವಸ್ದಾನದಲ್ಲಿ ಶನಿವಾರ ಸಂಜೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಮಗೆ ರಾಜಕೀಯ ವಿಚಾರವಾಗಿ ದೈವ ದೇವರ ಮೊರೆ ಹೋಗುವುದು ಅನಿವಾರ್ಯ ಸ್ಥಿತಿ ಬಂದಿದೆ. ಕಂಬಳವನ್ನು ನೆಪವಾಗಿಟ್ಟುಕೊಂಡು ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಅವರ ಬೆಂಬಲಿಗರು ಬೇರೆ ಬೇರೆ ಸಂದರ್ಭ ವೈಯಕ್ತಿಕವಾಗಿ ನನ್ನ ಕುಟುಂಬದ ಮೇಲೆ ಆಪಾದನೆ ಮಾಡುವ ಕಾರ್ಯವಾಗುತ್ತಿದೆ. ಶಾಸಕನಾಗಿ 2 ಮುಕ್ಕಾಲು ವರ್ಷವಾಗಿದೆ. ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಮತ್ತು ಅದರ ಅವಶ್ಯಕತೆಯೂ ನನಗಿಲ್ಲ. ರಾಜಕೀಯ ನನಗೆ ಗಂಜಿ ಕೇಂದ್ರವಲ್ಲ. ನನಗೆ ರಾಜಕೀಯ ಬದುಕುವ ದಾರಿಯಲ್ಲ. ಮುಂಬೈ, ಬಳ್ಳಾರಿ, ಬೆಂಗಳೂರಿನಲ್ಲಿ ವ್ಯವಹಾರವಿದೆ. ನಂದಿಕೂರಿನ ಎಂ 11 ಕಂಪನಿ ಪ್ರಾರಂಭವಾಗುವ ಸಂದರ್ಭವೂ ನನ್ನ ಮಗ ಹಾಗೂ ನನ್ನ ಮೇಲೆ ಆರೋಪ ಹೊರಿಸಿದ್ದರು. ಉಡುಪಿ ಕಂಬಳದ ಶಂಕು ಸ್ಥಾಪನೆಯ ಪೂರ್ವ ತಯಾರಿ ಮಾಡಲಾಗಿದ್ದರೂ, ಪೋಲಿಸರ ಮೂಲಕ ಸೆಕ್ಷನ್ ಹಾಕಲಾಗುತ್ತದೆ. ಪರಂಪರಾಗತ ಕಂಬಳವನ್ನು ಜೂಜುಕೋರರ ಕೂಟ ಎಂದು ಸೊರಕೆ ಹೇಳುತ್ತಾರೆ. ಅಪಪ್ರಚಾರ ಸುಲಭದ ಕೆಲಸ. ಕಾಪುವಿನ ವಿವಿದೆಡೆಯ ಅಭಿವೃದ್ಧಿ ಸುಸೂತ್ರವಾಗಿ ನಡೆಯದಂತೆ ಅಡ್ಡಗಾಲು ಹಾಕುವ ಕಾರ್ಯ ಕಾಂಗ್ರೆಸ್ ನಿಂದ ಆಗುತ್ತಿದೆ. ಇದರ ಜೊತೆಗೆ ಜಾತಿ ಧರ್ಮ ಒಡೆಯುವ ಕಾರ್ಯ ಆಗುತ್ತಿದೆ. ಹಾಗಾಗಿ ಜನರಿಗೆ ಸತ್ಯ ತಿಳಿಸಲು ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು ಎಂದರು. ಈ ಸಂದರ್ಭ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಕಾರ್ಯದರ್ಶಿ ಗೋಪಾಲ ಕೃಷ್ಣ ರಾವ್, ಶ್ರೀಕಾಂತ್ ನಾಯಕ್, ಶರಣ್ ಮಟ್ಟು, ಅರುಣ್ ಶೆಟ್ಟಿ ಪಾದೂರು, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ನೀತಾ ಗುರುರಾಜ್, ಸಂದೀಪ್, ಕೇಸರಿ ಯುವರಾಜ್ ಮತ್ತಿತರರು ಉಪಸ್ಥಿತರಿದ್ದರು.