У нас вы можете посмотреть бесплатно Yakshagana - Shree Devi Mahatme - ದೇವಿಪ್ರಸಾದ್ ಆಳ್ವರಿಂದ - ಆದಿ ತಾಳದಲ್ಲಿ ಏಣಾಂಕ ನಿಭವಕ್ತ್ರೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಪುಂಜಾಲಕಟ್ಟೆಯಲ್ಲಿ ನಡೆದ ಕಟೀಲು ಮೇಳ (3) ದ ಯಕ್ಷಗಾನ ಶ್ರೀದೇವೀ ಮಹಾತ್ಮೆ’ ಮೇಳದ ಪ್ರಧಾನ ಭಾಗವತರಾದ ದೇವಿಪ್ರಸಾದ್ ಆಳ್ವರ ಪದ - ಭಕ್ತಿ ಪ್ರಧಾನವಾದ ಪದ್ಯ ಏಣಾಂಕ ನಿಭಾವಕ್ತ್ರೆ ಯನ್ನು ಆದಿ ತಾಳದಲ್ಲಿ ಹಾಡಿದ ರೀತಿ ಹಿತಮಿತವಾದ ಆಲಾಪನೆಯಲ್ಲಿ ಪ್ರೇಕ್ಷಕರ ಮನಸೂರೆಗೊಳ್ಳುವ ಭಾಗವತರು. ಹಿರಿಯ ಹಿಮ್ಮೇಳ ವಾದಕರಾದ ದಯಾನಂದ ಶೆಟ್ಟಿಗಾರ್ ಮತ್ತು ಯುವ ಪ್ರತಿಭೆ ಸೂರಜ್ ಆಚಾರ್ಯ ಅವರ ಝೇಂಕಾರದೊಂದಿಗೆ ಆಳ್ವರ ಪದ್ಯ ಜೊತೆ ಸೇರಿದಾಗ ಆಟದ ಸೊಬಗು ಮತ್ತಷ್ಟು ಮೇಳೈಸುತ್ತದೆ. ಅನುಭವೀ ಕಲಾವಿದರಾದ ಶ್ರೀ ಅಮ್ಮುಂಜೆ ಮೋಹನ ರ ವೇಷವನ್ನು ಮೂರನೇ ಮೇಳದಲ್ಲಿ ಕುರಿಯ ಭಾಗವತರು ಇದ್ದಾಗಿನಿಂದ ನೋಡಿಕೊಂಡು ಬಂದವ ನಾನು. ರಕ್ತಬೀಜನ ಅರ್ಥಗಾರಿಕೆ ಮತ್ತು ನಾಟ್ಯ ಎರಡನ್ನೂ ಸಮದೂಗಿಸಿಕೊಂಡು ತೆಗೆದುಕೊಂಡು ಹೋಗುವ ಕಲೆ ಅವರಲ್ಲಿದೆ. ಶುಂಭನಿಗೆ ನೀತಿ ಹೇಳುವ ರೀತಿಯಲ್ಲೊಂದು ವೈಶಿಷ್ಟ್ಯತೆ ಇದೆ. ಅಜ್ಞಾನವನ್ನು ಬಿಟ್ಟು ಸುಜ್ಞಾನದಿಂದ ದೇವಿಯನ್ನು ಕಾಣುವ ಬಗೆ ಹೇಗೆ ಎಂದು ವಿವರಿಸುವ ಮಾತುಗಳಲ್ಲಿ ಪ್ರಬುದ್ಧತೆ ಎದ್ದು ಕಾಣುತ್ತದೆ. ಮಾತಿನಲ್ಲಿ ಸ್ಪಷ್ಟತೆ, ಶೃತಿಬದ್ಧವಾದ ಮಾತುಗಾರಿಕೆ ಮತ್ತು ಕೇಳುಗನಿಗೆ ಕಾಲಮಿತಿಯಲ್ಲಿ ಎಷ್ಟು ಒದಗಿಸಬೇಕು ಎನ್ನುವ ಅರಿವು ಅವರಿಗಿದೆ. ಹಾಗಾಗಿ ಕಾಲಮಿತಿಯಲ್ಲಿಯೂ ಪಾತ್ರ ಪ್ರಸ್ತುತಿಯಲ್ಲಿ ಲೋಪ ಬಾರದಂತೆ ಬಹಳ ಚಂದವಾಗಿ ನಿರ್ವಹಿಸುತ್ತಾರೆ. ಈಶ್ವರ ಶರ್ಮ ಪಕಳಕುಂಜ 09/01/26