У нас вы можете посмотреть бесплатно ಗೂಳಿಪುರ ಗ್ರಾಮದಲ್ಲಿ ಮುಳ್ಳಿನ ಪೊದೆಗೆ ಹಾರಿ ಸಂತೃಪ್ತರಾದ ದೇವತೆಗಳು ಚಾಮರಾಜನಗರ ತಾಲ್ಲೂಕಿನ ಗೂಳಿಪುರ ಗ್ರಾಮದಲ್ಲಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
gkarnataka power tv//03//03//2026//#@ ಗೂಳಿಪುರ ಗ್ರಾಮದಲ್ಲಿ ಮುಳ್ಳಿನ ಪೊದೆಗೆ ಹಾರಿ ಸಂತೃಪ್ತರಾದ ದೇವತೆಗಳು ಚಾಮರಾಜನಗರ ತಾಲ್ಲೂಕಿನ ಗೂಳಿಪುರ ಗ್ರಾಮದಲ್ಲಿ ಬಿಸಿಲು ಮಾರಮ್ಮ ಜಾತ್ರೋತ್ಸವ ಸೋಮವಾರ ಮಧ್ಯಾಹ್ನ ಸಂಭ್ರಮದಿಂದ ಜರುಗಿತು. ಜಾತ್ರೆಯಲ್ಲಿ ದೇವರ ಭಕ್ತರು ಮುಳ್ಳಿನ ಪೊದೆಗಳಿಗೆ ಹಾರಿ ದೇವರನ್ನು ಸಂತೃಪ್ತರನ್ನಾಗಿಸಿದರು. ಸಾವಿರಾರು ಭಕ್ತರು ಮಾರಿ ದೇವಿಗೆ ಬೇವು, ಹೂ ಹಾಗೂ ತಂಬಿಟ್ಟಿನ ಆರಿತಿ ಸಮರ್ಪಿಸಿ ಭಕ್ತಿ ಮೆರೆದರು. ಹಬ್ಬಕ್ಕೆ ಒಂದು ವಾರ ಸಿದ್ಧತೆ ನಡೆಸಲಾಗುತ್ತದೆ. ಊರ ಹಬ್ಬ ನಿರ್ವಿಘ್ನವಾಗಿ ಸಾಗಲಿ ಎಂದು ಭಾನುವಾರ ಸಂಜೆ ದೇವತೆಗೆ ಎಳನೀರು ಅಭಿಷೇಕ ಮಾಡಿ, ಪ್ರತಿ ಮನೆಗೂ ತೀರ್ಥ ಸಿಂಚನ ಮಾಡಲಾಯಿತು. ಸೋಮವಾರ ಮುಂಜಾನೆ ಶ್ರೀ ಬಿಸಿಲು ಮಾರಮ್ಮನಿಗೆ ವೈವಿಧ್ಯಮಯ ಪುಷ್ಪಗಳಿಂದ ಸಿಂಗರಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಊರಮಾರಿ ಭಕ್ತರು ಮಂಗಳವಾದ್ಯ ಮೊಳಗಿಸುತ್ತಿದ್ದಂತೆ ಮಧ್ಯಾಹ್ನ ಹತ್ತಾರು ಭಕ್ತರ ಮೇಲೆ ಮಾರಿಯರ ಗುಂಪು ಆವಾಹನೆಯಾಯಿತು. ಮಂಗಳವಾದ್ಯ, ತಮಟೆ ನಾದ ಹೆಚ್ಚಾಗುತ್ತಿದ್ದಂತೆ ಭಕ್ತರು ವೇಗವಾಗಿ ಓಡಿ ಮುಳ್ಳಿನ ಪೊದೆಗಳ ಮೇಲೆ ಹಾರಿದರು. ಈ ವೇಳೆ ಯುವಕರ ತಂಡ ಮುಳ್ಳಿನ ಪೊದೆಯಿಂದ ಮಾರಮ್ಮನ ಭಕ್ತರನ್ನು ಹೊರಗೆ ತರುವುದನ್ನು ನೋಡುಗರ ಮನ ಸೆಳೆಯಿತು. ನಂತರ ಹರಕೆ ಹಾಗೂ ಭಕ್ತಿ ಸಡಗರದಿಂದ ಹೂ, ಹೊಂಬಾಳೆ ನೀಡಿದರು. ಹೊಂಬಾಳೆ ಪಡೆದು ಸಂಪ್ರೀತರಾದ ಮಾರಿ ಭಕ್ತರು ದೇವಾಲಯಗಳತ್ತ ಸಾಗಿ, ಭಕ್ತರಿಂದ ಹಾರದ ಕಾಣಿಕೆ ಪಡೆದುಕೊಂಡರು. ನಂತರ ಸತ್ತಿಗೆ ಸುರಿಪಾನಿ ಹೊತ್ತವರ ಜೊತೆ ದೇಗುಲವನ್ನು ಮೂರು ಬಾರಿ ಪ್ರದಕ್ಷಿಣೆ ಮಾಡಿ, ಭಕ್ತರ ಪ್ರಶ್ನೆಗಳಿಗೆ ಉತ್ತರಿಸಿದರು. 'ಈ ವರ್ಷ ಎಲ್ಲಾರಿಗೂ ಒಳ್ಳೆದಾಗಲಿದೆ ಮಳೆ ಮತ್ತು ಬೆಳೆ ಸಮೃದ್ದ ಆಗಲಿದೆ' ಎಂದು ಆಶೀರ್ವಚನ ನೀಡಿದರು. ನಂತರ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು. ಹಣ್ಣುಕಾಯಿ, ಹೂ ಸಮರ್ಪಿಸಿದರು.ಗ್ರಾಮದ ನಾಯಕ ಜನಾಂಗದವರು ಅದ್ದೂರಿಯಾಗಿ ಆಚರಣೆ ಮಾಡುವ ಹಬ್ಬವಾಗಿದ್ದು, ಸಮಸ್ತ ಜೀವರಾಶಿಗಳಿಗೂ ತಾಯಿ ಒಳಿತು ಮಾಡಲಿ ದುಷ್ಟರನ್ನು ಸಂಹಾರಿಸಿ ಶಿಷ್ಟರನ್ನು ರಕ್ಷಣೆ ಮಾಡಲಿ ಹಾಗೂ ಮಳೆ ಬೆಳೆ ಸಮೃದ್ಧಿಯಾಗಲಿ ಎಂದು ಮುಖಂಡರು ಪ್ರಾರ್ಥನೆ ಸಲ್ಲಿಸಿದರು. ವರದಿ:ಗೂಳಿಪುರ ಮಣಿಕಂಠನಾಯಕ್ @gkarnatakapowertv