У нас вы можете посмотреть бесплатно ವಚನಾಂತರಂಗ ಮಾಲಿಕೆ 92: ಗುರುಬಸವಣ್ಣನವರ 426-430 ವಚನ ಚಿಂತನ, ಭಕ್ತಸ್ಥಲ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ವಚನಾಂತರಂಗ ಮಾಲಿಕೆ 92: ಗುರುಬಸವಣ್ಣನವರ 426-430 ವಚನ ಚಿಂತನ, ಭಕ್ತಸ್ಥಲ ಅರಸನ ಕಂಡು ತನ್ನ ಪುರುಷನ ಮರೆದರೆ ಮರನೇರಿ ಕೈಬಿಟ್ಟಂತಾಯಿತ್ತಯ್ಯಾ! ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ, ನಮ್ಮ ಕೂಡಲಸಂಗಮದೇವ ಜಂಗಮ ಮುಖಲಿಂಗವಾದ ಕಾರಣ. ಜಂಗಮವಿಲ್ಲದ ಮಾಟ, ಕಂಗಳಿಲ್ಲದ ನೋಟ! ಹಿಂಗಿತ್ತು ಶಿವಲೋಕ, ಇನ್ನೆಲ್ಲಿಯದಯ್ಯಾ? ಲಿಂಗಕ್ಕೆ ಮಾಡಿದ ಬೋನವ ಸಿಂಬಕ ತಿಂಬಂತೆ, ಸಮಯೋಚಿತವನರಿಯದೆ ಉದರವ ಹೊರೆವವರ ನರಕದಲ್ಲಿಕ್ಕದೆ ಮಾಣ್ಬನೆ ಕೂಡಲಸಂಗಮದೇವ? ಲಿಂಗದಲ್ಲಿ ದಿಟವನರಸುವರೆ ಜಂಗಮವ ನೆರೆ ನಂಬುವುದು: ನಡೆಲಿಂಗ, ನುಡಿಲಿಂಗ, ಮುಖಲಿಂಗವೆಂದೇ ನಂಬೋ! `ಯತ್ರ ಮಹೇಶ್ವರತತ್ರಸನ್ನಿಹಿತʼನಾಗಿ ಅಧರ ತಾಗಿದ ರುಚಿಯ ಉದರ ತಾಗಿದ ಸುಖವ ಉಣ್ಬ, ಉಡುವ ಕೂಡಲಸಂಗಮದೇವ, ಜಂಗಮಮುಖದಲ್ಲಿ. ಜಂಗಮದ ಮನ-ಭಾವದಲ್ಲಿ ಭಕ್ತ(ನೆ) ಭೃತ್ಯನೆಂದು, ಭಕ್ತನ ಮನ-ಭಾವದಲ್ಲಿ ಜಂಗಮ(ವೆ) ಕರ್ತನೆಂದು ಇದ್ದ ಬಳಿಕ, ʼಬಂದುದು, ಬಾರದು, ಇದ್ದುದು, ಹೋಯಿತ್ತೆಂಬʼ ಸಂದೇಹವಿಲ್ಲದಿರಬೇಕು. ಹೋಯಿತ್ತೆಂಬ ಗುಣವುಳ್ಳನ್ನಕ್ಕ ನಿಮಗೆ ದೂರ, ನಿಮ್ಮವರಿಗೆ ಮುನ್ನವೆ ದೂರ! ಶಿವಾಚಾರಕ್ಕಲ್ಲಿಂದತ್ತ ದೂರ!! ಜಂಗಮದ ಗಳಗರ್ಜನೆ, ಜಂಗಮದ ಕೋಳಾಟಕೆ ಸೈರಿಸದಿದ್ದರೆ ನೀನಂದೇ ಮೂಗ ಕೊಯಿ, ಕೂಡಲಸಂಗಮದೇವಾ. ನಯನದಾಹಾರವ ಜಂಗಮವ ನೋಡಿಸುವೆ, ಶ್ರೋತ್ರದಾಹಾರವ ಜಂಗಮವ ಕೇಳಿಸುವೆ, ಘ್ರಾಣದಾಹಾರವ ಜಂಗಮವ ವಾಸಿಸುವೆ, ಜಿಹ್ವೆಯಾಹಾರವ ಜಂಗಮವನೂಡಿಸುವೆ, (ತ್ವ)ಚದಾಹಾರವ ಜಂಗಮಕ್ಕೆ ಹೊದ್ದಿಸುವೆ; ಅಧಿಕ ಪ್ರೇಮ ಪ್ರಣಾಮವ ಮಾಡುವೆ- ಸಕಲ ಪದಾರ್ಥಂಗಳ ನೀಡುವೆನು, ಕೂಡಲಸಂಗಾ ನಿಮ್ಮ ಶರಣರಿಗೆ.