У нас вы можете посмотреть бесплатно ಹೆಣ್ಣಲ್ಲವೇ ನಮ್ಮ ಹಡೆದ ತಾಯಿ -ಸಂಚಿ ಹೊನ್ನಮ್ಮ (ಹದಿಬದೆಯ ಧರ್ಮ) ಕಲಾ ಸೌರಭ-೩ಕನ್ನಡ ಬೇಸಿಕ್ ಪಠ್ಯಬಿ.ಎ. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹೆಣ್ಣಲ್ಲವೇ ನಮ್ಮ ಹಡೆದ ಕಾಯ -ಸಂಚಿ ಹೊನ್ನಮ್ಮ (ಹದಿಬದೆಯ ಧರ್ಮ) ಆಮರ್ದುಗಡೆವ ಸಮಯದೊಳಲ್ಲಿ ನೆರೆದಿ ರ್ದಮರರರಂತಚ್ಚರಿವಡೆಯೆ ಕಮಲೆಗೆದೆಯನಿಂಬುಗೊಳಿಸಿದ ಪುರುಷೋ ತಮನಡಿಗಾನೆರಗುವೆನು ಕಡೆವುದನುಳಿದು ಕಾದಿಹ ಬಿಡುಗಣ್ಣರ ಗಡಣಂಗಳ ಕಡೆಗಣಿಸಿ ಒಡನೆ ನಾರಾಯಣನುರವ ಸೇರಿದ ಸಿರಿ ಮಡದಿಯಡಿಗೆ ವಂದಿಪೆನು ತಂದೆ ತಾಯಿಗಳೊಡವುಟ್ಟಿದರತ್ತೆ ಮಾ ವಂದಿರು ಸಕಲ ಬಾಂಧವರು ಕುಂದದೆ ನಲ್ವೆಂಡಿರ ಕೂರ್ತುಪಚರಿ ಪಂದದನನುವದಿಸುವೆನು ಪೆಣ್ಣ ಪೆತ್ತವರ ಬಳಗ ಬಳೆವುದು ಬೇಗ ಪಣ್ಣ ಪೆತ್ತವರು ಪೆರ್ಚುವರು ಪಣ್ಣ ಪೆತ್ತುದರಿಂದ ಪೆಸರೆನಿಸಿತು ಮಿಗೆ ಬಣ್ಣವೇರಿತು ಪಾಲ್ಗಡಲು ಪೆಣ್ಣಿಂದ ಪೆರ್ಮೆಗೊಂಡನು ಹಿಮವಂತನು ಪೆಣ್ಣಿಂದ ಧೃಗು ಪೆರ್ಚಿದನು ಪಣ್ಣಿಂದ ಜನಕರಾಯನು ಜಸವಡೆದನು ಪೆಣ್ಣ ನಿಂದಿಸಲೇಕೆ ಪೆರರು ಸಿರಿರಾಣಿಯ ಸೀತೆಯ ರುಕ್ಕಿಣಿಯ ಶ್ರೀ ಹರಿಯೊಡನೊಂದೆ ಹಂತಿಯೊಳು ಇರಿಸಿ ಪೂಜೆಯನೊಡರಿಸುವರು ಪಿರಿಯರು ಪರಿಕಿಪೊಡವರು ಪೆಣ್ಣೆಸೆ ಪೆಣ್ಣಲ್ಲವೆ ನಮ್ಮನೆಲ್ಲ ಪಡೆದ ತಾಯಿ ಪೆಣ್ಣಲ್ಲವೆ ಪೊರೆದವಳು ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು ಕುವರನಾದೊಡೆ ಬಂದ ಗುಣವೇನದರಿಂದ ಕುವರಿಯಾದೊಡೆ ಕುಂದೇನು ಇವರಿರ್ವರೊಳೇಲ್ಲೆವಡೆದವರಿಂದ ಸವನಿಪುದಿಹಪರಸೌಖ್ಯ ಕುಲಪುತ್ರನೋದಿ ತಿಳಿದು ನಡೆದಲ್ಲದೆ ಕುಲವನುದ್ಧರಿಸಲರಿಯನು ಕುಲಪುತ್ರಿಯೊಳ್ಳುವರನಿಗಿತ್ತ ಮಾತ್ರಕೆ ಕುಲಕೋಟಿಯನುದ್ಧರಿಗಳು ಬಸುರೊಳೊಗೆದು ಬಳೆದೇಕ ರೀತಿಯೊಳೆಲ್ಲ ಸಿಸುಗಳಿರ್ದೊಡಮೇನು ಬಳಿಕ ಒಸೆದಿತ್ತುದನೊಡಬಡುವಳು ಪೆಣ್ ಗಂಡು ಪಸುಗೆಗೊಂಬನು ಬಲೆಯೊಳು ಪುಟ್ಟಿದ ಮನೆಯೊಳು ಪೋರಿ ಪುರುಳುಗೊಂಬ ದಿಟ್ಟ ಗಂಡುಗಳಂತಿರಲಿ ಕೊಟ್ಟುದರಿಂದ ತಣಿವ ಕುವರಿಗೆ ಮನ ಮುಟ್ಟಿ ಕೊಡುವುದು ಕೋವಿದರು ಎನ್ನ ಪೆತ್ತವರಿವರೀ ಮನೆಯೊಡವೆಗ ಳೆನ್ನವೆಂದೆರವಿಲ್ಲದಿರ್ಪ ಕನ್ನೆಯನನ್ನರಿಗೀವನ್ನೆವರಮುರೆ ಮನ್ನಿಸುವುದು ಮಮತೆಯೊಳು ಅರಿತು ನಿಟ್ಟಿಸೆ ಗಂಡುಮಕ್ಕಳಿಂದತಿಶಯ ದೆರಕದೊಳೆಸೆವ ಪೆಣ್ಣಳನು ಪೊರನೋಟದಿಂದ ನೋಡದೆ ಪೋಲೆನಿಸದೆ ಮರುಕವೆರಸಿ ಮನ್ನಿಪುದು ಪದಮಳಗೊಳಿಸಿ ಪಲಬಗೆ ಪಸದನಗಳ ಪುದುಗಿಸಿ ಪೊಂದೊಡಿಗೆಗಳ ಮದುವೆಗೆ ನೆರೆದ ಪೆಣ್ಮಕ್ಕಳ ನಿಟ್ಟಿಪ ರೆದೆಗೊಳಿಪಂತೆಸಗುವುದು ಸುಗುಣನಾವನು ಸುಚರಿತ್ರನಾವನು ಕಣ್ಣೆ ಸೊಗಸುವ ಸೊಬಗನಾರೆಂದು ಬಗೆದು ಭಾವಿಸಿ ಪೆಣ್ಣನೀವುದು ವಂಶದೊ ಳೊಗೆದೊಳ್ಳುವರನಿಗೊಲಿದು ಅಲೆಗೆಯ್ಯದವನುತಿಯೆಸಗದ ವೈರವ ಬಲಿಸದೆ ಬರಿದೆ ಪಳಿಯದ ಕೊಲೆ ಬೈಗಳಿಂದ ಕೋಟಲೆಗೊಳಿಸದ ಸ ತುಲಕೀವುದು ಕುವರಿಯನು ಪಣದಾಸೆ ನಂಟುತನದ ಪತ್ತಿಗೆ ನೇಹ ದೆಣಿಕೆಗಳಿಂದೆದೆಗರಗಿ ವೆಣಕೀಯಲಾಗದು ಪೆಣ್ಣ ಗುಣ ಜವ್ವನ ಕುಲ ರೂಪುಗುಂದಿದ ನಡೆ ಜಡನಿಗೆ ಜಾತಿಹೀನನಿಗೆ ಚಂಚಲನಿಗೆ ಕಡುಮೂರ್ಖನಿಗೆ ಗಾಂಪನಿಗೆ ಬಡತನದೊಳು ಬಲು ಬವಣೆಗೊಂಬವನಿಗೆ ಕೊಡಲಾಗದು ಕುವರಿಯನು ಬಾಳಿ ಬದುಕಿ ತಣಿವಿಲ್ಲದ ತಮ್ಮಂತೆ ಬಾಳಲೆಳಸುವ ಬಾಲಕಿಯ ಬೀಳುಗುವರನಿಗೆ ಬೆಲೆಗೈದರೆಂಬುದ ಕೇಳಿ ಕಿವಿಯ ಮುಚ್ಚುವುದು ತನ್ನ ಮನೆಯೊಳುಂಡು ತವರುಮನೆಯ ಸಂ ಪನ್ನವಕೆಂಬ ಪೆಣ್ಣಳಿಗೆ ಪೊನ್ನ ತೊಡಿಗೆ ಪೊಸದುಗುಲಂಗಳನಿತ್ತು ಮನ್ನಿಸುವುದು ಮನವರಿತು ಕವಯತ್ರಿಯ ಪರಿಚಯ ಸಂಚಿ ಹೊನ್ನಮ್ಮ ಎಳಂದೂರಿನವಳು. ಈಕೆಯ ಕಾಲ ಕ್ರಿ.ಶ. ೧೬೭೨ ರಿಂದ ೧೭೦೪. ಮೈಸೂರು ಮಹಾರಾಜರಾದ ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಅವರ ಪಟ್ಟದ ಅರಸಿ ಯಳಂದೂರ ದೇವರಾಜಮ್ಮಣ್ಣಿಯವರಲ್ಲಿ 'ಸಂಚಿ'ಯ ಊಳಿಗೆ ಮಾಡಿಕೊಂಡಿದ್ದ ಹೊನ್ನಮ್ಮ 'ಹದಿಬದೆಯ ಧರ್ಮ' ಎಂಬ ಕೃತಿಯ ರಚನೆ ಮಾಡಿದಳು. ರಾಜದಂಪತಿಗಳು ಅವಳಿಗೆ ಓದಿನ ಅವಕಾಶ ಮಾಡಿಕೊಟ್ಟರು, ಆಗ ಕವಿ ಅಳಸಿಂಗರಾಯರು ಇವಳಿಗೆ ವಿದ್ಯಾಗುರು ಆದರು. ಅವರಿಂದ ಈಕೆ ಕನ್ನಡ ಹಾಗೂ ಸಂಸ್ಕೃತ ಅಭ್ಯಾಸ ಮಾಡಿದಳು ಹಾಗೂ ಅವರ ಮಾರ್ಗದರ್ಶನದಲ್ಲಿ 'ಹದಿಬದೆಯ ಧರ್ಮ' ಎಂಬ ಕೃತಿಯನ್ನು ರಚಿಸಿದಳು. ಅವಳ ವಿಶಿಷ್ಟಾದ್ವತ ನಿಷ್ಠೆಯನ್ನು ಹದಿಬದೆಯ ಧರ್ಮದ ಕೆಲವು ಸಂಧಿಗಳಲ್ಲಿ ಕಂಡುಬರುತ್ತದೆ. 'ಹದಿಬದೆಯ ಧರ್ಮ'ವು ಒಂದು ಸಾಂಗತ್ಯ ಕೃತಿಯಾಗಿದೆ. ಇದಕ್ಕೆ ರಾಮಾಯಣ. ಮಹಾಭಾರತ, ಭಾಗವತ, ಭಗವದ್ಗೀತೆ ಮತ್ತು ವಿಷ್ಣುಪುರಾಣಗಳನ್ನು ಆಕರವಾಗಿ ಬಳಸಿದ್ದಾಳೆ. ಸುಸಂಸ್ಕೃತ ಪರಿಸರದಿಂದ ಒಳ್ಳೆಯ ಸಂಸ್ಕಾರ ಪಡೆದ ಇವಳು, ಹದಿಬದೆಯ ಧರ್ಮ ಕೃತಿಯಲ್ಲಿ ನಿರ್ಮಲ ಧರ್ಮವನ್ನು ಹೇಳಿದ್ದಾಳೆ. ಈಕೆಯ ದೃಷ್ಟಿಯಲ್ಲಿ ದಾಂಪತ್ಯದ ಬದುಕನ್ನು ಅವಳ ಈ ಗ್ರಂಥವು ಎತ್ತಿ ಹಿಡಿದಿದೆ. ಗೃಹಿಣಿಯಾದವಳು ಗೃಹಧರ್ಮದ ಪಾಲನೆಯ ಜೊತೆಗೆ ಪತಿಯಾದವನು ಪತಿಧರ್ಮದ ಪಾಲನೆಯನ್ನೂ ಮಾಡಬೇಕು. ಪತಿವ್ರತಾಧರ್ಮವು ಮುನಿಗಳ ತಪದಂತೆ ಕಠಿಣವಾಗಿದೆ. ಹೆಣ್ಣಿಗೆ ಇರುವಷ್ಟು ಸ್ಥಾನವನ್ನು ಪುರುಷನಿಗೂ ಕೊಟ್ಟು "ಪೆಣ್ಣಲ್ಲವೆ ನಮ್ಮನೆಲ್ಲ ಪಡೆದವಳು' ಎನ್ನುತ್ತಾ, 'ಹೆಣ್ಣುಮಗು ಹುಟ್ಟಿದರೆ ಕುಂದೇನೂ ಇಲ್ಲ' ಎಂದು ಸ್ಪಷ್ಟವಾಗಿ ಹೇಳುತ್ತಾಳೆ. ಕಲಾ ಸೌರಭ-೩ ಕನ್ನಡ ಬೇಸಿಕ್ ಪಠ್ಯ ಬಿ.ಎ./ ಬಿ.ಎಸ್.ಡಬ್ಲ್ಯೂ. ನಾಲ್ಕನೇ ಸೆಮಿಸ್ಟರ್ (ರಾಜ್ಯ ಶಿಕ್ಷಣ ನೀತಿಯ ಅಡಿಯಲ್ಲಿ ಸಿದ್ದಪಡಿಸಿದ ಭಾಷಾ ಪಠ್ಯ)