У нас вы можете посмотреть бесплатно 3.ಆಂಡಯ್ಯ ಕವಿಯ ಕಬ್ಬಿಗರಕಾವದ ಆಯ್ದ 10 ಪದ್ಯಗಳು или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕಾವನ ಗೆಲ್ಲ ಅಥವಾ ಕಬ್ಬಿಗರ ಕಾವ ಎಂಬ ಕೃತಿಯನ್ನು ಬರೆದು ಪ್ರಸಿದ್ಧನಾದವನು ಅಚ್ಚಗನ್ನಡದ ಅಭಿಮಾನವನ್ನು ಇಟ್ಟುಕೊಂಡ ಆಂಡಯ್ಯ ಕವಿ. ೧೨೧೭ ಈತನ ಕಾಲ ಎಂದು ಅಭಿಪ್ರಾಯಪಡಸಲಾಗಿದೆ. ಈತನಿಗೆ ಲೆಕ್ಕಿಗರ ಅರಸ ಎಂಬ ಬಿರುದಿತ್ತು. ಬನವಾಸಿ ಈತನ ಪ್ರಾಂತ್ಯ. ಕಬ್ಬಿಗರ ಕಾವ ಒಂದು ಖಂಡ ಕಾವ್ಯ. ಚಂದ್ರನನ್ನು ಸೆರೆಹಿಡಿದುಕೊಂಡು ಹೋಗಿದ್ದ ಶಿವನ ಮೇಲೆ ಕಾಮದೇವ ದಾಳಿ ಮಾಡಿ, ತನ್ನ ಪಂಚಬಾಣ ಪ್ರಯೋಗದಿಂದ ಅವನನ್ನು ಅರೆವೆಣ್ಣಾಗಿಸಿ, ಹಾಗೆಯೇ ತಾನು ಆತನ ಶಾಪಕ್ಕೆ ಗುರಿಯಾಗಿ, ಹೆಂಡತಿಯಿಂದ ಅಗಲಿ, ಕೊನೆಗೆ ಅವಳನ್ನು ಮತ್ತೆ ಸೇರಿಕೊಂಡ ಕಾಮನ ಕಥೆ ಈ ಕಾವ್ಯದ ವಸ್ತು. ಕಾವ್ಯದ ಆರಂಭದಲ್ಲಿ ಆಂಡಯ್ಯ ಕನ್ನಡ ನಾಡಿನ ವರ್ಣನೆಯನ್ನು ಮಾಡುತ್ತಾನೆ. ಆಧುನಿಕ ಪೂರ್ವ ಸಾಹಿತ್ಯದ ಸಂದರ್ಭದಲ್ಲಿ ನಾವು ರಾಷ್ಟ್ರ, ರಾಷ್ಟ್ರೀಯತೆ ಎಂಬ ಆಧುನಿಕ ಪರಿಕಲ್ಪನೆಗಳನ್ನು ಕಾಣಲು ಸಾಧ್ಯವಿಲ್ಲ. ಆದರೆ ಇದನ್ನೇ ನಮ್ಮ ಕವಿಗಳು, ಲೇಖಕರು, ನಾಡಿನ ಕುರಿತಾದ ಅಭಿಮಾನದ ವರ್ಣನೆಯಾಗಿ ಮತ್ತೊಂದು ರೂಪದಲ್ಲಿ ವ್ಯಕ್ತಪಡಿಸುತ್ತಾರೆ. ಇವುಗಳನ್ನು ಅವರ ಕಾವ್ಯಗಳಲ್ಲಿ ಕಾಣಲು ಸಾಧ್ಯ. ಆಂಡಯ್ಯನ ಕಬ್ಬಿಗರ ಕಾವದಲ್ಲೂ ಕನ್ನಡ ನಾಡಿನ ವರ್ಣನೆಯನ್ನು ಆಧುನಿಕ ರಾಷ್ಟ್ರೀಯತೆಯ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಗಮನಿಸದೇ, ನಾವು ಆಧುನಿಕ ಪೂರ್ವದಲ್ಲಿ ಇದ್ದಂತ ನಾಡಿನ ಅಭಿಮಾನವಾಗಿ ಕಾಣುವುದು ಸೂಕ್ತ ಎನಿಸುತ್ತದೆ. ಆಂಡಯ್ಯ ಕನ್ನಡ ನಾಡನ್ನು ವರ್ಣಿಸುವ ಸಂದರ್ಭ ಕಾವ್ಯದ ಆರಂಭದ ಭಾಗದಲ್ಲಿದೆ. ಕನ್ನಡ ನಾಡಿನ ಸೌಂದರ್ಯವನ್ನು ಆಂಡಯ್ಯ ವರ್ಣಿಸುವ ಪರಿ ಅನನ್ಯವಾದದ್ದು. ನೀರು ನಿಂತಂತಹ ಸ್ಥಳಗಳಲ್ಲಿ ತಾವರೆಯ ಹೂವುಗಳು, ಅವುಗಳ ಕಂಪಿಗೆ ಬಿಡದೆ ಮುತ್ತಿಕೊಂಡಿರುವ ಹೆಣ್ಣು ದುಂಬಿಗಳು, ಆ ದುಂಬಿಗಳನ್ನು ಹಿಂಬಾಲಿಸಿಕೊಂಡು ಬಂದ ಬೇಡತಿಯರು, ಆ ಬೇಡತಿಯರ ನಡಿಗೆಯನ್ನು ಅಣಕಿಸುವಂತೆ ಮೆಲ್ಲನೆ ಅಡಿ ಇಡುವ ಹೆಣ್ಣು ಹಂಸಗಳ ಬಳಗಗಳು, ಗಳಗಳನೆ ಪ್ರಸರಿಸಿ ಹರಿಯುವ ಕೊರಲುದ್ದ ನಿಂತ ಎಳನೀರಿನ ಹೊನಲು ಅಲ್ಲಿ ಬೆಳೆದ ಬಿಳಿಯ ಕಬ್ಬುಗಳಿಗೆ ಆಧಾರವಾಗಿದೆ. ಅಲ್ಲಿ ಬೆಳೆದಿರುವ ಬೆಳೆಗಳ ತಿನ್ನಲು ಬರುವ ಪಕ್ಷಿಗಳನ್ನು ಓಡಿಸುವ ಆ ನಾಡಿನ ಸುಂದರವಾದ ಸ್ತ್ರೀಯರು ಹಾಗೂ ಅವರನ್ನು ನೋಡುತ್ತ ನಿಲ್ಲುವ ದಾರಿಹೋಕರು, ಸ್ವರ್ಗದ ಎತ್ತರಕ್ಕೆ ನಿಲುಕುವಂತೆ ಎತ್ತರವಾಗಿರುವ ಮಹಡಿಗಳ ಮೇಲೆ, ತಂಡ ತಂಡವಾಗಿ ನಿಂತ ಸುಂದರಿಯರಾದ ಸ್ತ್ರೀಯರು, ಮಾವಿನ ಮರದ ಕೊಂಬೆ ಕೊಂಬೆಯಲ್ಲಿ ಹರಟುತ್ತಿರುವ ಗಿಳಿಗಳ ಬಳಗಗಳು ಹಾಗೂ ಅವುಗಳನ್ನು ತಮ್ಮ ಸುಸ್ವರದಿಂದ ಸೋಲಿಸುವ ಕೋಗಿಲೆಗಳ ಚೆಲುವನ್ನು ಆ ನಾಡು ಒಳಗೊಂಡಿದೆ. ಹಲವು ನಾಲಿಗೆ ಇರುವ ಆದಿಶೇಷನು ಮನಸು ಮಾಡಿದರು ಕೂಡ ಆತನಿಂದ ವರ್ಣಿಸಲು ಅಸಾಧ್ಯ ಎಂಬ ಸಂದರ್ಭದಲ್ಲಿ, ಉಳಿದ ಸಾಮಾನ್ಯರು ಹೊಗಳಲು ಸಾಧ್ಯವೇ ಎಂಬ ಜನರ ಮಾತಿನಿಂದ ಹಾಗೂ ಹೂತಳೆದ ಕೊಳಗಳಿಂದ, ಕೆರೆಗಳಿಂದ, ತಂಪಾಗಿ ಬೀಸುವ ಗಾಳಿಯಿಂದ, ಹಳ್ಳಿಗಳಿಂದ, ಸಾಗುವಳಿ ಭೂಮಿಗಳಿಂದ, ಕನ್ನಡ ಎಂಬ ಈ ನಾಡು ಚೆಲುವಾಗಿದೆ ಎಂದು ಕವಿ ವರ್ಣಿಸುತ್ತಾನೆ. ಇವು ಹಳ್ಳಿಗಳು, ಇವು ಪಟ್ಟಣಗಳು, ಇವು ಕೆರೆಗಳು, ಇವು ಆವರಿಸಿ ನಿಂತ ಮುಗಿಲ ಸಾಲುಗಳು, ಇವು ಕಾಡು, ಇವು ಪ್ರಸಿದ್ಧವಾದ ವನಗಳು, ಎಂದು ಪ್ರತ್ಯೇಕ ಪ್ರತ್ಯೇಕವಾಗಿ ಹೇಳಲಿಕ್ಕೆ ಅಸಾಧ್ಯವಾಗುವಂತೆ, ಆ ಕನ್ನಡ ನಾಡಿನಲ್ಲಿ ಇವೆಲ್ಲವೂ ಕೂಡ ತುಂಬಿ ಹೋಗಿವೆ. ಆ ಕನ್ನಡ ನಾಡಿನಲ್ಲಿ ಮಲ್ಲಿಗೆ, ಸಂಪಗೆ, ದಾಳಿಂಬೆ, ಕೆಂಪಾಗಿರುವ ತೆಂಗು, ಮಾವು, ಅಡಕೆ, ಇಂತಹ ಗಿಡ ಮರಗಳಲ್ಲದೆ ಬೇರೆ ಗಿಡ ಮರಗಳು ಇಲ್ಲದಂತೆ ಸೌಂದರ್ಯ ಪಡೆದಿವೆ.