У нас вы можете посмотреть бесплатно ರಾಜ್ಯಸಭೆಯಲ್ಲೂ ವಂದನಾ ನಿರ್ಯಣದ ಮೇಲೆ ಚರ್ಚೆ | 16 ತಾಸು ಚರ್ಚೆಗೆ ಸಮಯ ನಿಗದಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ರಾಜ್ಯಸಭೆಯಲ್ಲೂ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಯಿತು. ಚರ್ಚೆಗೆ 16 ತಾಸು ನಿಗದಿಪಡಿಸಲಾಗಿದೆ. ವಂದನಾ ನಿರ್ಣಯವನ್ನು ಮಂಡಿಸಿದ ನಾಮ ನಿರ್ದೇಶಿತ ಸದಸ್ಯ ಸಿ.ಸದಾನಂದನ್ ಮಾಸ್ಟರ್, ವಿಕಸಿತ ಭಾರತದ ಪಯಣವನ್ನು ರಾಷ್ಟ್ರಪತಿ ಅವರು ತಮ್ಮ ಭಾಷಣದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಆರಂಭದಿಂದಲೂ ಎನ್ ಡಿಎ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಬಡತನ ನಿರ್ಮೂಲನೆ ಕುರಿತು ಸ್ಪಷ್ಟ ನಿಲುವು ಹೊಂದಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ , ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ನ ಧ್ಯೇಯದಿಂದ ಮಾತ್ರ ವಿಕಸಿತ ಭಾರತ ನಿರ್ಮಾಣ ಸಾಧ್ಯ ಎಂದರು. ಕಳೆದೊಂದು ದಶಕದಲ್ಲಿ 25 ಕೋಟಿ ಜನರನ್ನು ಬಡತನದಿಂದ ಹೊರ ತರಲು ಸರ್ಕಾರಕ್ಕೆ ಸಾಧ್ಯವಾಗಿದೆ. 95 ಕೋಟಿ ಭಾರತೀಯರು ಇದೀಗ ಸಾಮಾಜಿಕ ಭದ್ರತೆ ಹೊಂದಿದ್ದಾರೆ. ಸುಧಾರಣಾ ಹಾದಿಯಲ್ಲಿ ಸರ್ಕಾರ ಸಾಗುತ್ತಿದ್ದು, ಆಧುನಿಕ ಮೂಲಸೌಕರ್ಯದಲ್ಲಿ ಹಿಂದೆಂದೂ ಆಗದ ಹೂಡಿಕೆಯನ್ನು ದೇಶ ಕಾಣುತ್ತಿದೆ ಎಂದರು. ಬಿಜೆಪಿ ಸದಸ್ಯೆ ಡಾ. ಮೇಧಾ ವಿಶ್ರಾಮ್ ಕುಲಕರ್ಣಿ , ರಾಷ್ಟ್ರಪತಿ ಅವರು ತಮ್ಮ ಭಾಷಣದಲ್ಲಿ ದೇಶದ ನಿರಂತರ ಪ್ರಗತಿಯನ್ನು ಪ್ರಸ್ತಾಪಿಸಿದ್ದಾರೆ. ಭಾರತದ ಆರ್ಥಿಕತೆ ಸದೃಢವಾಗಿದ್ದು, ಬೆಳವಣಿಗೆ ದರ ಶೇಕಡ 7.2ಕ್ಕೆ ಏರಿದೆ. ಜಿಎಸ್ ಟಿ ಆದಾಯವು ಅಗಾಧ ವೃದ್ಧಿಯಾಗುತ್ತಿದೆ. ಕಳೆದ ಕೆಲವೇ ವರ್ಷಗಳಲ್ಲಿ 3 ಕೋಟಿ ಹೊಸ ತೆರಿಗೆ ಪಾವತಿದಾರರು ಸೇರ್ಪಡೆಯಾಗಿದ್ದಾರೆ ಎಂದರು. ಕಾಂಗ್ರೆಸ್ ನ ದಿಗ್ವಿಜಯ ಸಿಂಗ್ , ಸರ್ಕಾರವು ರೈತರು ಮತ್ತು ಕಾರ್ಮಿಕ ವಿರೋಧಿ ನೀತಿ ಹೊಂದಿದೆ. ದೇಶದಲ್ಲಿ ಉದ್ಯೋಗ ಪ್ರಮಾಣ ಇಳಿಕೆಯಾಗುತ್ತಿದೆ. ಸರ್ಕಾರದ ಭರವಸೆ ಹೊರತಾಗಿಯೂ ರೈತರ ಆದಾಯ ಇದುವರೆಗೆ ದ್ವಿಗುಣಗೊಂಡಿಲ್ಲ ಎಂದು ಆರೋಪಿಸಿದರು. ಟಿಎಂಸಿ ಸದಸ್ಯೆ ಸಾಗರಿಕಾ ಘೋಷ್, ಡಿಜಿಟಲ್ ವ್ಯವಸ್ಥೆಗಳಿಂದ ಸೈಬರ್ ವಂಚನೆ ಮತ್ತು ಮಾಹಿತಿ ಹಗರಣಗಳು ನಡೆಯುತ್ತಿವೆ. ಹೆಚ್ಚುತ್ತಿರುವ ವಾಯು ಮತ್ತು ಜಲ ಮಾಲಿನ್ಯದಿಂದ ಅಪಾರ ಆರ್ಥಿಕ ನಷ್ಟವಾಗುತ್ತಿದೆ ಎಂದರು. #LiveDDChandanaNews #DDChandanaNews #DDChandana #DDKannada