У нас вы можете посмотреть бесплатно ಕಾಂಚನದಲ್ಲಿ ನಿರ್ಮಿಸಲಾದ ನೂತನ ಸಂಗೀತ ಕಲಾಶಾಲೆ, ಸಭಾಭವನ ಹಾಗೂ ಭೋಜನ ಶಾಲೆಗಳ ಕಟ್ಟಡ ಲೋಕಾರ್ಪಣೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸಂಗೀತರತ್ನ, ಋಷಿಗಂಧರ್ವ ವಿ.ಕಾಂಚನ ವೆಂಕಟ ಸುಬ್ರಹ್ಮಣ್ಯಂ ಅವರ 105ನೇಯ ಜನ್ಮವರ್ಷ ಮಹೋತ್ಸವದ ಅಂಗವಾಗಿ ಕಾಂಚನ ಶ್ರೀ ಲಕ್ಷ್ಮೀನಾರಾಯಣಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ಅಂದಾಜು 2 ಕೋಟಿ ರೂ.ವೆಚ್ಚದಲ್ಲಿ ಕಾಂಚನದಲ್ಲಿ ನಿರ್ಮಿಸಲಾದ ನೂತನ ಸಂಗೀತ ಕಲಾಶಾಲೆ, ಸಭಾಭವನ ಹಾಗೂ ಭೋಜನ ಶಾಲೆಗಳ ಕಟ್ಟಡ ಲೋಕಾರ್ಪಣೆಗೊಳಿಸಿದ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ. ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ ಎನ್ನುವ ಮೂಲಕ ಮಾತು ಆರಂಭಿಸಿ, ಹಲವು ರೀತಿಯ ಸಂಸ್ಕೃತಿಯಿಂದಾಗಿ ಕರಾವಳಿ ಕರ್ನಾಟಕಕ್ಕೆ ದೊಡ್ಡ ಹೆಸರು ಬಂದಿದೆ. ಸಂಗೀತ, ಸಾಹಿತ್ಯ, ಕಲೆ ಉಳಿಸಬೇಕೆಂಬ ನಿಟ್ಟಿನಲ್ಲಿ ಪುಟ್ಟ ಹಳ್ಳಿಯಾಗಿರುವ ಕಾಂಚನ ದೊಡ್ಡ ಮಟ್ಟದ ಕೆಲಸಮಾಡುತ್ತಿದೆ. ಅನೇಕ ವಿದ್ವಾಂಸರನ್ನು ಸೃಷ್ಟಿ ಮಾಡಿದೆ ಎಂದು ಮೆಚ್ಚುಗೆ 6 ವ್ಯಕ್ತಪಡಿಸಿದರು. ಸಂಗೀತ ವಿದ್ಯೆಯು ರಾಜ ಕಿತ್ತುಕೊಳ್ಳಲು ಆಗದ, ದಾಯಾದಿಗೆ ಕಾಂಚನ ಸಂಗೀತ ಕಲಾಶಾಲೆ ಲೋಕಾರ್ಪಣೆಶತಾಧಿಕ ಕಂಠಗಾಯನ, ವಾದನ ದಕ್ಕ, ಅಗ್ನಿಯಲ್ಲಿ ಸುಡದ ಹಾಗೂ ನೀರಿನಲ್ಲಿ ನೆನೆಯದ ಗುಪ್ತನಿಧಿಯಾಗಿದೆ. ವಿದ್ಯೆಗೆ ಕೊನೆ ಇಲ್ಲ. ಕಷ್ಟದಲ್ಲೂ, ಸುಖದಲ್ಲೂ ಅನುಭವಿಸಬಹುದು. ಮರಕ್ಕೆ ಬೇರು ಮುಖ್ಯವಿದ್ದಂತೆ ಮನುಷ್ಯನಿಗೆ ನಂಬಿಕೆ ಸಹ ಮುಖ್ಯವಾಗಿದೆ. ಸಾಹಿತ್ಯ, ಸಂಗೀತವೂ ಧರ್ಮದ ಒಂದು ಭಾಗ ಆಗಿದೆ. ನಮ್ಮಲ್ಲಿ ಪ್ರತಿಭೆಗಳಿಗೆ ಅವಕಾಶ ಸಿಗಬೇಕು. ಇದಕ್ಕೆ ಇಂತಹ ಸಂಸ್ಥೆಗಳು ಶಕ್ತಿ ತುಂಬಬೇಕು. ಸಂಸ್ಕೃತಿ ನಮ್ಮ ದೇಶದ ಆಸ್ತಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಸ್ನೇಹಿತರಾದ ನ್ಯಾಯವಾದಿ ರಾಜಶೇಖರ ಹಿಲ್ಯಾರ್ ಅವರು ಧರ್ಮ, ಧರ್ಮಸ್ಥಳದ ರಕ್ಷಣೆಗಾಗಿ ನಿಂತುಕೊಂಡಿದ್ದಾರೆ. ಅವರಿಗೆ ಶಕ್ತಿ ಕೊಡಬೇಕೆಂದೂ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಇಲ್ಲಿ ಸಭಾ ಭವನ ನಿರ್ಮಾಣಕ್ಕೆ ಸಂಬಂಧಿಸಿ ನೀಡಿರುವ ಮನವಿಯನ್ನೂ ಪರಿಗಣಿಸುತ್ತೇನೆ. ದೇವರು ವರ, ಶಾಪ ಕೊಡುವುದಿಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ನಾವು ಯಾವ ರೀತಿ ಸೇವೆ ಮಾಡುತ್ತೇವೆ ಎಂಬುದು ಮುಖ್ಯವಾಗಿದೆ ಎಂದು ಹೇಳಿದ ಡಿ.ಕೆ.ಶಿವಕುಮಾರ್ ಅವರು, ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ 70 ಜನರ ಆಯ್ಕೆ ಮಾಡಿದ್ದು ಇದರಲ್ಲಿ ಕರಾವಳಿ ಪ್ರದೇಶದ 10 ರಿಂದ 11 ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಲ್ಲಿನ ಜನರಿಂದ ಶಿಕ್ಷಣ, ಸಾಹಿತ್ಯ, ಭೂತಾರಾಧನೆ, ನಾಗಾರಾಧನೆ, ಕಂಬಳ, ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ಇದೆ. ಕರಾವಳಿ ಪ್ರದೇಶ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಆನಂದಕ್ಕೆ ದೇವರು ಕೊಟ್ಟ ಸ್ವರವೊಂದೇ ಸಾಕು-ರಾಘವೇಶ್ವರ ಶ್ರೀ: ಆಶೀರ್ವಚನ ನೀಡಿದ ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು, ಕಾಂಚನದಲ್ಲಿ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ. ಇಲ್ಲಿನ ಮಣ್ಣು, ನೀರು, ಗಾಳಿ ಸಹಿತ ಎಲ್ಲಾ ಕಡೆಯೂ ಸಂಗೀತದ ಹರಿವಿದೆ. ಮನಸ್ಸು ತುಂಬಿ ಹಾಡುವುದರಿಂದ ದು:ಖ, ಸಂಕಟಗಳು ಮಾಯವಾಗಿ ನೆಮ್ಮದಿ ಉಳಿದುಕೊಳ್ಳುತ್ತದೆ. ಆನಂದಕ್ಕೆ ದೇವರು ಕೊಟ್ಟಸ್ವರವೊಂದೇ ಸಾಕು ಎಂದು ನುಡಿದರು, ನೋವು ಮರೆಯಲು ಕುಡಿತಕ್ಕೆ ಶರಣಾಗುವ ಬದಲು ಭಜನೆಯ ಕುಣಿತಕ್ಕೆ ಶರಣಾಗಬೇಕು. ಗಾನ, ನೃತ್ಯ, ಚಿತ್ರ, ಸಂಗೀತ ಕಲೆಯ ಮೂಲಕ ಮನಸ್ಸು ಏಕಾಗ್ರತೆಗೊಂಡಲ್ಲಿ ಬದುಕಿನ ನೋವು ಅಳಿಸಬಹುದು. ಇಂಹತ ವಿದ್ಯೆಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕು. ಸಂಗೀತ ಕಲಿಯಲು ಏಕಾಗೃತೆ, ಸಹನೆ, ಶ್ರಮ, ಆಸಕ್ತಿ ಇರಬೇಕು. ಸಂಗೀತದ ಪರಂಪರೆ ಉಳಿಸುವ ದೊಡ್ಡ ಪ್ರಯತ್ನ ಕಾಂಚನ ಮನೆತನದಿಂದ ನಡೆದಿದೆ. ಕರ್ನಾಟಕ ಸಂಗೀತಕ್ಕೆ ಕಾಂಚನ ಮನೆತನದ ದೊಡ್ಡ ಕೊಡುಗೆಯೂ ಇದೆ ಎಂದು ಹೇಳಿದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಯವರು, 2004ರಲ್ಲಿ ಕಾಂಚನ ವಿ.ಸುಬ್ಬರತ್ನಂ ಹಾಗೂ ರೋಹಿಣಿ ಸುಬ್ಬರತ್ನಂ ಅವರಿಂದ ಶ್ಲೋಕ ಕಲಿತು ಹಾಡಿರುವುದನ್ನು ನೆನಪಿಸಿಕೊಂಡರು. ಕಾಂಚನದ ಏಳಿಗೆಯಲ್ಲಿ ಇಲ್ಲಿನ ಅಳಿಯಂದಿರ ಶ್ರಮವೂ ಇದೆ. ರೋಹಿಣಿ ಸುಬ್ಬರತ್ನಂ ಅವರು ನಡೆದಾಡುವ ವಿಶ್ವಕೋಶ ಎಂದು ಸ್ವಾಮೀಜಿ ಬಣ್ಣಿಸಿದರು. ಕಾಂಚನ ಕರ್ನಾಟಕದ ತಿರುವಯ್ಯಾರ್ ಎಂಬುವುದು ನಿಜ-ಡಾ| ಡಿ.ವೀರೇಂದ್ರ ಹೆಗ್ಗಡೆ: ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕಾಂಚನ ಮನೆತನಕ್ಕೆ ಹಿಂದಿನಿಂದಲೂ ಒಡನಾಟವಿದೆ. ಕಾಂಚನ ವಿಶೇಷವಾದ ಭೂಮಿ, ಕಾಂಚನ ಮನೆತನದವರು ಶಾಸ್ತ್ರೀಯ ಸಂಗೀತದ ಪರಿಚಯ ಮಾಡಿದ್ದಾರೆ. ಸಂಗೀತದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಕಾಂಚನ ಕರ್ನಾಟಕದ ತಿರುವಯ್ಯಾರ್ ಎಂಬುವುದು ನಿಜವಾದ ಮಾತು ಆಗಿದೆ. ಈ ಸಂಸ್ಥೆಯನ್ನು ಉಳಿಸಿಕೊಂಡು =ಹೋಗುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂದು ಹೇಳಿದರು. ಕಾಂಚನ ಮನೆತನದವರು ತಮ್ಮ ಹಿರಿಯರ ನೆನಪಿನಲ್ಲಿ ಆರಂಭಿಸಿದ ಕಾಂಚಿನ ಶ್ರೀ ಲಕ್ಷ್ಮೀನಾರಾಯಣ ಪ್ರಾಥಮಿಕ ಶಾಲೆ ಹಾಗೂ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯನ್ನು ಈಗ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ. ಹರ್ಷೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಶಾಲೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗಲಾಗುತ್ತಿದೆ ಎಂದು ಡಾ|ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಸಂಗೀತದಿಂದ ಮನಸ್ಸಿನವೇದನೆ, ನೋವು ಕಡಿಮೆಯಾಗಲಿದೆ; ಅಶೋಕ್ ನಡೆಯಿತು. ನೂರಕ್ಕೂ ಹೆಚ್ಚು ಕಲಾವಿದರು ಏಕಕಾಲದಲ್ಲಿ ಕೀರ್ತನೆಗಳನ್ನು ಹಾಡಿದರು. ಈ ವೇಳೆ ಮೃದಂಗ, ವಯಲಿನ್ ವಾದನವೂ ನಡೆಯಿತು. ಬಳಿಕ ಅಭಿಷೇಕ್ ಎನ್.ಎಸ್.ಮತ್ತು ತಂಡದವರಿಂದ ಗಾಯನ ನಡೆಯಿತು. ವಯಲಿನ್ ನಲ್ಲಿ ಅಭಯ್ ಸಂಪಿಗೆತ್ತಾಯ, ದ್ವಂದ್ವ ಮೃದಂಗದಲ್ಲಿ ಕಾಂಚಿನ ಈಶ್ವರ ಭಟ್, ಅಕ್ಷಯ್ ನಾರಾಯಣ ಅವರು ಸಹಕರಿಸಿದರು. ಮಧ್ಯಾಹ್ನ ವಿವಿಧ ರೈ: ಮುಖ್ಯ ಅತಿಥಿಯಾಗಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಸಂಗೀತದಿಂದ ಮನಸ್ಸಿನ ವೇದನೆ, ನೋವು ಕಡಿಮೆಯಾಗಲಿದೆ. ನಮ್ಮ ಆಚಾರ, ವಿಚಾರಗಳಿಗೆ ಒತ್ತು ನೀಡುವ ಕೆಲಸವನ್ನು ರಾಜಶೇಖರ ಹಿಲ್ಕಾರ್ ಹಾಗೂ ಕಾಂಚನ ಮನೆತನದವರು ಮಾಡುತ್ತಿದ್ದಾರೆ. ಕಾಂಚನ ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟೂ ದೊಡ್ಡ ಮಟ್ಟದಲ್ಲಿ ಮೂಡಿಬರಲಿ ಎಂದು ಹಾರೈಸಿದರು. ಸನ್ಮಾನ: ಶಿಲ್ಪಿ ಎನ್.ವಿ.ರಘುರಾಮ್, ಮಾಸ್ಟರ್ ಪ್ಲಾನರಿಯ ಆಕಾಶ್ ಸಹಿತ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ಗಣ್ಯರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಬೇಕಲ್ ಗೋಕುಲಂ ಗೋಶಾಲೆಯ ಪರಂಪರಾ ವಿದ್ಯಾಪೀಠದ ಮುಖ್ಯ ಪ್ರಾಚಾರ್ಯರಾದ ವೇ! ಬ್ರ ವಿಷ್ಣುಪ್ರಸಾದ್ ಹೆಬ್ಬಾರ್ ಅವರ ಪತ್ನಿ ಡಾ| ನಾಗರತ್ನ ಹೆಬ್ಬಾರ್, ಹೈಕೋರ್ ನ್ಯಾಯವಾದಿ ರಾಜಶೇಖರ ಹಿಲ್ಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಹಿಣಿ ಸುಬ್ಬರತ್ನಂ ಅವರು ರಚಿಸಿದ ಕಾಂಚನ-ಪರಂಪರೆ-ಸಂಗೀತ ಪುಸ್ತಕವನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಅಕಾಡೆಮಿ ಟ್ರಸ್ಟ್ನ ಕಾರ್ಯದರ್ಶಿ ರೋಹಿಣಿ ಸುಬ್ಬರತ್ನಂ ಅವರು ಸ್ವಾಗತಿಸಿ, ಕಾಂಚನದ ಇತಿಹಾಸದ ಬಗ್ಗೆ ತಿಳಿಸಿದರು. ಮೃದಂಗ ವಿದ್ವಾನ್ ಕೆ.ಯು.ಜಯಚಂದ್ರ ರಾವ್ ವಂದಿಸಿದರು. ನ್ಯಾಯವಾದಿ ಮಹೇಶ್ ಕಜೆ, ಉಪನ್ಯಾಸಕ ಮೋಹನಚಂದ್ರ ಪದಕ ಕಾಂಚನ ಹಾಗೂ ನಿವೃತ್ತ ಉಪನ್ಯಾಸಕ ಗಣರಾಜ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್, ಶ್ರೇಯಸ್ ಕುಮಾರ್ ಸಹಿತ ವಿವಿಧ ಕ್ಷೇತ್ರದ ಗಣ್ಯರು, ರಾಜಕೀಯ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.