У нас вы можете посмотреть бесплатно gabbursong1 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Rajappa: ಸತ್ತಂತ ತೊಗಲಿಗೆ ಮತ್ತೆ ಜೀವವ ತುಂಬಿ ಸುತ್ತ ನಾಡೆಲ್ಲ ಪ್ರತಿ ಧ್ವನಿ ನಾಡೆಲ್ಲ ಪ್ರತಿಧ್ವನಿ ಮಾಡುವಂತ ಚಿತ್ತರದಲೆಗಿಳಿದು ಬಡಿಯುತ್ತ ಕುಣಿಯುತ್ತ ಮುತ್ತಿನ ಮಳೆ ನಾವು ಕರಿಯೋಣ; ಬತ್ತಿದ ನೆಲಕ್ಕಾಗಿ ಎಚ್ಚೆತ್ತಾ ಜನಕ್ಕಾಗಿ ಮುತ್ತಿನ ಮಳೆಯ ನಾವು ಕರೆಯೋಣ ಮೂಡಲ ಸೀಮ್ಯಾಗಾ ಗೇಣು ಉದ್ದ ಮೋಡಾಗಿ ಅಡ್ಯಾಡಿ ಬಾರೊ ಮಳೆರಾಯ ಎತ್ತು, ಎಮ್ಮೆ, ಕರುಗಳು ಕಾಲುವೆಗೆ ಹೋಗ್ಯಾವ ಗಂಗ, ತುಂಗ ಬತ್ತಿ, ನೀರು ಹಿಂಗಿ ಜಲ ಸರಿದು, ಚಿಲಿ ಪಿಳಿ ಗಿಳಿ ಗುಬ್ಬಿ ನೆಲ ನೆಕ್ಕಿ ಸತ್ತಾವ ತಪ್ಪದೆ ಬಾರೊ ಮಳೆರಾಯ ನೀ ಹಿಂಗ್ ಕರೆದರೆ ನಾ ಹೆಂಗ್ ಬರಲಯ್ಯ ನೇಮ ತುಂಬಿದ ಭೂಮಿಗೆ ಬರಲಾರೆ ಮಣ್ಣು ಮುತ್ತದ ಜನ ಕುಳಿತು ಉಣ್ಣುತ್ತಾರೆ ಬೆವರು ಸುರಿಸದೇನೆ ಬೆಣ್ಣೆ ತಿನ್ನುತ್ತಾರೆ ಪ್ರೀತಿ ಪ್ರೇಮ ಮರೆತು ಜಾತಿ ಕಟ್ಟುತ್ತಾರೆ; ಬರಲಾರೆ ಬರಲಾರೆ ಭೂಮಿಗೆ ನೀ ಬರದೆ ಹೋದರೆ ಬದುಕಲಾರೆವು ನಾವು ಮರೀಬ್ಯಾಡೊ ಮಳೆರಾಯ ಮುನಿಬ್ಯಾಡೊ ದಯಮಾಡಿ ಕಾಲಕಾಲದಿಂದ ಕೂಲಿ ಮಾಡುವರು ನಾವು ಕೂಲಿ ಕರೆಯೋರಿಲ್ಲ ಕೂಳಿಲ್ಲ ಕೂಸಿಗೆ ನೀರಿಲ್ಲ ಬ್ಯಾಸಿಗೆ; ಬತ್ತಿದ ನೆಲಕ್ಕಾಗಿ ಎಚ್ಚೆತ್ತ ಜನಕ್ಕಾಗಿ ಮುತ್ತಿನ ಮಳೆ ನಾವು ಕರೆಯೋಣ ಅಲ್ಲಯ್ಯ ಎಂದರೆ ಅದೆ ರಾಗ ಹಾಡುವಿರಿ ; ಯತೆ ಇಲ್ಲವೇನೋ ಎದೆಯಾಗ ಜನಗಳಿರ ಮಿತ್ಯ ಸಾಯದೇನೆ ಸತ್ಯ ಉಳಿಯುವುದುಂಟೆ ಕಳೆಯ ತೆಗೆಯದೇನೆ ಬೆಳೆಯ ಬರುವುದುಂಟೆ ; ರೋಗ ನೀಗದೇನೆ ಜೇವ ಉಳಿಯುವುದುಂಟೆ; ಕಲ್ಲು ಎಸಿಯದೇನೆ ಕಾಯಿ ಉದುರುವುದುಂಟೆ ನಮಗೆ ಶತ್ರುಗಳಾದ ಭೂಮಿಗೆ ಭಾರವಾದ; ಬಲಿತ ಭೂ ಮಾಲಿಕರ ಬಲಿದಾನದ ರಕ್ತ ಹಾದಿ-ಬೀದಿ ತುಂಬಿ ಹಳ್ಳಾಗಿ ಹರಿಬೇಕು; ಒಣ ಗಿಡದ ಹೂ ಅರಳಿ ಗೊಳ್ಳೆಂದು ನಕ್ಕಾಗ ಪಳ್ಳೆಂದು ಭೂಮಿಗೆ ಬರುವೆನು ಅಪ್ಪಯ್ಯ ನಿನ್ನ ಮಾತು ತಪ್ಪದೆ ನಡೆಸುವೆವು; ಹೆಪ್ಪು ಗಟ್ಟಿದ ಸಿಟ್ಟು ಎದೆಯಾಗೆ ಮಳೆರಯ ಧರಣಿ ಸಾರಣಿ ಮಾಡಿ; ಧರ್ಮ ಯುದ್ಧವ ಹೂಡಿ ಚಾಕು ಬಾಕಿನ ಯಾತ್ರೆ; ಕತ್ತಿ ಕೋವಿನ ಜಾತ್ರೆ ಅಷ್ಟ ದಿಕ್ಕುಗಳಲ್ಲಿ ದುಷ್ಟರ ಸಂಹಾರ; ಹಸಿಯಾದ ಅಂಗಳಕೆ ರಕ್ತದ ರಂಗೋಲಿ ಕೆರೆಗೆ ಕಂಕಣ ಕಟ್ಟಿ ನದಿಯೆ ಮದುಮಗಳಾಗಿ; ಗಗನ ಮಾಲಿನಲ್ಲಿ ಮದುಮಗ ಮಳೆರಾಯ; ಸಿಡಿಲು ಒಂದರಗಿತು ಭೂ ಒಡಲು ನಡುಗಿತ್ತು; ಎಚ್ಚೆತ್ತು ಜಲ ಜಿಗಿದು ಬಿರಿದಂತಹ ನೆಲ ತೊಯ್ದು ; ಸುತ್ತ ನಾಡೆಲ್ಲ ಮಳೆ ಬಂತು ಸತ್ತಂತ ತೊಗಲಿಗೆ ಮತ್ತೆ ಜೀವವ ತುಂಬಿ, ಸುತ್ತ ನಾಡೆಲ್ಲ ಪ್ರತಿ ಧ್ವನಿ ನಾಡೆಲ್ಲ ಪ್ರತಿಧ್ವನಿ ಮಾಡುವಂತ ಚಿತ್ತರದಲೆಗಿಳಿದು ಬಡಿಯುತ್ತ ಕುಣಿಯುತ್ತ ಮುತ್ತಿನ ಮಳೆ ನಾವು ಕರಿಯೋಣ; ಬತ್ತಿದ ನೆಲಕ್ಕಾಗಿ ಎಚ್ಚೆತ್ತಾ ಜನಕ್ಕಾಗಿ ಮುತ್ತಿನ ಮಳೆಯ ನಾವು ಕರೆಯೋಣ My name is Rajappa Sirwar from Gabbur, Raichur District, Devadurga Taluk, I am a folk artist. Our groups takes this to every district in Karnataka through street plays and folk music on the new development programs and projects, awareness campaigns on water etc.,.