У нас вы можете посмотреть бесплатно ನಂಜನುಂಡ ನಂಜುಂಡನ ಅರ್ಧಾಂಗಿ ನಂಜ ಮೇಲೆ ತೋರಿದ ದರ್ಪ, ಧೈರ್ಯವಿದ್ದವರು ಮಾತ್ರ ನೋಡಿ ಗೆಳೆಯರೇ. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮೈ ರೋಮಾಂಚನವಾಯಿತು ಕಣ್ರೀ.. ನೋಡಿ... ನೃತ್ಯ ನೋಡಿದರೆ ಕೆಳಗಿನ ಬರಹ ಓದುವುದೇ ಬೇಡ.. ಅಷ್ಟು ಅದ್ಭುತ.. ರುಚಿ ಶರ್ಮ ತಾಯಿಗೆ ನಮೋನಮಃ..🙏🙏 ============================== ಏಳೂರ ಬೆಟ್ಟಗಳು ಹತ್ತಿಳಿದು ಪಡೆದೆನೋ ಅಂತಿಂತ ಗಂಡಲ್ಲ ಶಾರ್ಧೂಲನವನನಾ ಬಿಡದ ಮೊಗ್ಗುಗಳಿಲ್ಲ, ಗಿಡದ ಹೂಗಳನೆಲ್ಲ ದಿಂಡುಗಳ ಕಟ್ಟಿ ಕಟ್ಟಿಕೊಂಡೆನವನನಾ ನಾರಾಯಣಪ್ಪನೇ ನಾಕುಮುಖದವನೇ ನೀವ್ಹೆಂಗೆ ಬಿಟ್ಟಿರೋ ವಿಷವಕುಡಿಯಲವನಾ ಲಕ್ಷ್ಮಮ್ಮ ಸರಸಮ್ಮ ಇಂದ್ರಪ್ಪ ಚಂದ್ರಣ್ಣ ನೀವ್ಯಾಕೆ ತಡೆದಿಲ್ಲಾ ಸಾವನಪ್ಪುವವನಾ ವಾಸುಕಿಯನಂತಶೇಷಪದ್ಮನಾಭಕಂಬಲಂ ಶಂಖಪಾಲ ತಕ್ಷಕಂ ಧಾರ್ತರಾಷ್ಟ್ರಕಾಲಿಯಂ ಸರ್ವಸರ್ಪ ಕಾರ್ಕೋಟ ಕಾಲಕೂಟ ವಿಷಗಳೇ ನಂಜುಂಡನರ್ಧಾಂಗಿ ನವದುರ್ಗಿ ಹೇಳುತಿರುವೆನು ಕಂಠದಿಂದ ಕೆಳಗೆ ಮಾತ್ರಾಂಗುಲದಷ್ಟೂ ಇಳಿದೊಡೆ ನೀಲಕಂಠನಾಣೆಗೂ ವಿಷಕೆವಿಷವನಾಗುವೆನಾ... Ahoratra ============================== ಬೆಳ್ನೊರೆ ತೆರೆಯಾಗಿ ದಡಕ್ಕಪ್ಪಳಿಸುತ್ತಿರುವ ಕ್ಷೀರಸಾಗರದಲ್ಲಿ ಒಂದೆಡೆ ಸುರರು ನಿಂತಿದ್ದಾರೆ, ಮೊತ್ತೊಂದೆಡೆ ಅಸುರರು ನಿಂತಿದ್ದಾರೆ. ಅವರ ನಡುವೆ ವಾಸುಕಿಯನ್ನು ಸುತ್ತಿಕೊಂಡಿರುವ ಮಂದರ ಪರ್ವತ. ಈಗಾಗಲೇ ಮಂದರದಿಂದ ಕ್ಷೀರಸಾಗರ ಮಂಥನ ಪ್ರಾರಂಭವಾಗಿದೆ. ವಾಸುಕಿಯ ಬಾಲದ ಭಾಗದಲ್ಲಿ ನಿಂತ ದೇವಗಣ ಒಮ್ಮೆ ಜೋರಾಗಿ ಎಳೆದೆರೆ, ತಲೆಯ ಭಾಗವನ್ನು ಹಿಡಿದ ದಾನವಗಣ ಮತ್ತಷ್ಟು ಶಕ್ತಿ ಹಾಕಿ ಎಳೆಯುತ್ತಿದೆ. ಒಮ್ಮೆಲೇ ಮಂದರವು ಕುಸಿಯಲಾರಂಭಿಸಿತು. ಸಂಕಟ ಬಂದಾಗ ನೆನೆಯುವ ದೇವನನ್ನು ಕೂಗಿದಾಕ್ಷಣ ಆ ಮಹಾವಿಷ್ಣು ತಟ್ಟನೋಡಿ ಬಂದ. ಬಂದವನೇ ಕೂರ್ಮಾವತಾರ ತಾಳಿ ಮಂದರಾಚಲ ಕುಸಿಯದಂತೆ ಎತ್ತಿ ಹಿಡಿದಿದ್ದಾನೆ. ಮಂಥನ ನಿರಾತಂಕವಾಗಿ ಮುಂದುವರೆಯುತ್ತಿದೆ. ಹಲವು ರತ್ನಗಳು, ಅಮೂಲ್ಯ ಸ್ತ್ರೀರತ್ನ ಲಕ್ಷ್ಮೀದೇವಿ, ಚಂದ್ರ, ಇತ್ಯಾದಿಗಳು ಈಗಾಗಲೇ ಕ್ಷೀರಸಾಗರದ ಒಡಲಿಂದ ಉದ್ಭವಿಸಿವೆ. ಅಮೃತದಾಸೆಯಲ್ಲಿ ಇರುವವರ ಕಣ್ಣಿಗೆ ಕ್ಷೀರಸಾಗರದಿಂದ ಎದ್ದು ಬರುತ್ತಿರುವ ಆ ವಸ್ತು ಕಾಣಿಸಿದೆ. ಅಮೃತವೇ ಬಂತು ಎಂಬ ಸಂತಸ ಉಕ್ಕುವುದರೊಳಗೆ, ಅದೋ, ಅದರಿಂದ ಉಗ್ರ ಬಿಸಿಹಬೆ ಉಕ್ಕುತ್ತಿದೆ. ಅಕಟಕಟಾ.. ಆ ವಸ್ತು ನೀಲಿಯ ಕಾಲಕೂಟ ಎಂಬುದು ಎಲ್ಲರಿಗೂ ಅರಿವಾಗಿದೆ. ಸಕಲ ಸೃಷ್ಟಿಯೂ ಅದರಿಂದ ನಾಶವಾಗಬಹುದು ಎಂಬ ಹೆದರಿಕೆ ಉದ್ಭವಿಸಿದೆ. ಸಂಕಟಹರಣಾ ಎನ್ನಲು ಅವನೂ ಮಂದರದ ಅಡಿಯಲ್ಲಿ ನಿಂತಿದ್ದಾನೆ. ಇಂತಹ ಉತ್ಯುಗ್ರ ಸಂಕಟಕ್ಕೆ ಶಮನವೊಂದೇ ಆ ಮಹಾದೇವ ಎಂದು ಎಲ್ಲರೂ ಒಕ್ಕೊರಲಿನಿಂದ ಅವನನ್ನು ಕೂಗಿದ್ದಾರೆ. ಆತನೋ ಹೆಸರಿಗಷ್ಟೇ ಮಹಾದೇವನಲ್ಲ !! ತನ್ನ ಕಾರ್ಯಕ್ಕೂ ಮಹಾದೇವನೇ ಸರಿ. ಓಡೋಡಿ ಬಂದವನು ನಿಂತು ನೋಡಿದವನಿಗೆ ಪರಿಸ್ಥಿತಿ ಅರಿವಾಗಿದೆ. ಸಕಲಕ್ಕೂ ಒಡೆಯನವ, ವಿಷಕ್ಕೂ ಒಡೆಯನೇ !! ಆದರೆ ಆ ಕರಾಳ ಗರಳವನ್ನು ಇಡುವುದಾದರೂ ಎಲ್ಲಿ? ಹೇಗೆ? ಕ್ಷಣಕಾಲವೂ ಯೋಚಿಸದೇ ನೀಲಾಗಸವನ್ನು ಮುದ್ದೆ ಮಾಡಿದಂತೆ ಕಂಗೊಳಿಸುತ್ತಿರುವ ಆ ಹಾಲಾಹಲವನ್ನು ಲೀಲಾಜಾಲವಾಗಿ ಹಸ್ತದಿಂದ ಎತ್ತಿ ತನ್ನ ಬಾಯಿಗೆ ಸುರಿದುಕೊಂಡಿದ್ದಾನೆ ಆ ಕೈಲಾಸವಸನ. ಆಗ ಬಂದಳು ನೋಡಿ ನಮ್ಮ ಮಹಾತಾಯಿ, ಪರ್ವತರಾಜ ಪುತ್ರಿ ಪಾರ್ವತಿ !! ಎದುರಿನಲ್ಲಿ ಪತಿದೇವನಿದ್ದಾನೆ. ಸುತ್ತೆಲ್ಲ ನೆರೆದ ಸುರಾಸುರರು. ಎಲ್ಲರ ಮೊಗದಲ್ಲೂ ಕಳವಳ. ಏನಾಯಿತು, ಏನು ಮಾಡಿದ ಮಹಾದೇವ ಎಂಬ ಭೀತಿಯಲ್ಲಿ ಅವನೆಡೆಗೆ ನೋಡುತ್ತಿರುವ ದೇವದಾನವರನ್ನು ನೋಡುತ್ತಲೇ ಸಕಲವೂ ತಿಳಿಯಿತು ಆ ಗಿರಿರಾಜಸುತೆ ಗಿರಿಜೆಗೆ. ಆಕ್ಷಣವೇ ಕೆರಳಿ ಕೆಂಡವಾಗಿ ಪತಿಯ ಬಾಯಿಂದ ಕೆಳಗಿಳಿಯುತ್ತಿದ್ದ ನಂಜನ್ನು ಅವನ ಗಂಟಲಿನಲ್ಲೇ ಒತ್ತಿ ಹಿಡಿದಿದ್ದಾಳೆ. ಮರುಕ್ಷಣ ಅವಳ ಸಿಟ್ಟು ಉಳಿದವರೆಡೆಗೆ ತಿರುಗಿದೆ. ಆ ಸಂದರ್ಭದಲ್ಲಿ ಈ ಕವನದ ಜನನವಾಗಿದೆ. ಕವಿ ಅಹೊರಾತ್ರಣ್ಣ ಅವರ ಅಗಾಧ ಜ್ಞಾನ, ಕಲ್ಪನಾಶಕ್ತಿ, ವಿಷಯಸಂಗ್ರಹ, ಕ್ಲಿಷ್ಟ ವಿಷಯಗಳನ್ನು ಸರಳ ಪದಗಳಲ್ಲಿ ವರ್ಣಿಸುವ ಶಕ್ತಿ ನಮಗೆ ಅರಿವಾಗುವುದೇ ಇಂತಹ ಅಮೂಲ್ಯ ಸುನೀತಗಳ ಮೂಲಕ. ಕವಿ ಇಲ್ಲಿ ಮಹಾದೇವಿಯ ಆಕ್ರೋಶವನ್ನು ವರ್ಣಿಸಿದ ಬಗೆ ಅನನ್ಯ, ರೋಮಾಂಚನಗೊಳಿಸುವಂತಹುದು !! “ ಏಳೂರ ಬೆಟ್ಟಗಳು ಹತ್ತಿಳಿದು ಪಡೆದೆನೋ ಅಂತಿಂತ ಗಂಡಲ್ಲ ಶಾರ್ಧೂಲನವನನಾ “ ತಾಯಿ ಸುತ್ತ ನೋಡುತ್ತಾ ಘರ್ಜಿಸುತ್ತಿದ್ದಾಳೆ, ಈ ನನ್ನ ಪತಿ ಸಾಮಾನ್ಯದವನಲ್ಲ, ಏಳು ಲೋಕದೊಳಗೂ ಇಂತಹವನು ಬೇರೆ ಇಲ್ಲ. ಶಾರ್ದೂಲನಂತಹ ಅಂದರೆ ಹೆಬ್ಬುಲಿಯಂತಹ ಗಂಡು ಇವನು. ಇವನನ್ನು ನಾನು ಎಷ್ಟು ಕಷ್ಟಪಟ್ಟು ಹುಡುಕಿ, ಒಲಿಸಿ, ಮೆಚ್ಚಿಸಿ ಮದುವೆಯಾಗಿದ್ದೇನೆ ಗೊತ್ತಾ ನಿಮಗೆ ಎನ್ನುತ್ತಿದ್ದಾಳೆ ಅವಳು. ಇಲ್ಲಿ ಕವಿ ಏಳೂರು ಎಂದು ಏಕೆ ಬಳಸಿದರು ಎಂಬ ಕುತೂಹಲ ನಮಗೆ ಮೂಡುವುದು ಸಹಜ. ಲೋಕಗಳು ಇರುವುದು ಹದಿನಾಲ್ಕು. ತಾಯಿ ಹದಿನಾಲ್ಕು ಲೋಕಗಳನ್ನೂ ಹುಡುಕಬೇಕಿತ್ತಲ್ಲವೇ? ಕೇವಲ ಏಳನ್ನು ಮಾತ್ರ ಹುಡುಕಲು ಕಾರಣವೇನು? ಲೋಕಗಳು ಹದಿನಾಲ್ಕು ಆಗಿದ್ದರೂ ಅವುಗಳಲ್ಲಿ ಏಳು ಮಾತ್ರವೇ ಊರ್ಧ್ವ ಲೋಕಗಳು. ಏಳು ಲೋಕಗಳು ಆಧೋಲೋಕಗಳು. ಮಂಗಲಮೂರ್ತಿ ಆಕೆ, ಸೊಗಸು ಒಳಿತುಗಳೆಲ್ಲ ಅಡಕವಾಗಿರುವ ಭೂ, ಬಹುವ, ಸುವ, ಮಹಾ, ಜನ, ತಪ, ಸತ್ಯ ಲೋಕಗಳಲ್ಲಿ ಹುಡುಕಬೇಕೇ ಹೊರತು ಸಕಲ ಕೆಡುಕುಗಳಿರುವ ಅತಲ, ವಿತಲ, ಸುತಲ, ರಸಾತಲ, ತಲಾತಲ, ಪಾತಾಲಗಳಲ್ಲಿ ಏಕೆ ಹುಡುಕುತ್ತಾಳೆ? ಇಲ್ಲೊಂದು ಎಲ್ಲರೂ ಪಾಲಿಸಬೇಕಾದ ನಿಗೂಢವಿದೆ ನೋಡಿ. ಯಶವನ್ನೋ, ಸಂಪತ್ತನ್ನೋ, ಅಧಿಕಾರವನ್ನೋ, ಹುಡುಕುವುದಾದರೆ ನಾವು ಮೇಲ್ಮುಖವಾಗಿ ಹೊರಡಬೇಕು, ಎತ್ತರಕ್ಕೇರಬೇಕು, ಔನ್ನತ್ಯಕ್ಕೇರಬೇಕು, ನಮ್ಮ ಬೆಳವಣಿಗೆ ಊರ್ಧ್ವಮುಖವಾಗಿರಬೇಕು. ನಮ್ಮ ಗಮನ ಕೆಳಕ್ಕಿರಬಾರದು.ನಾವು ಕೆಳಗಿಳಿಯಬಾರದು. ಅಲ್ಲವೇ? ತಾಯಿ ಸರ್ವಜ್ಞೆ, ಆಕೆ ಮೇಲಿನ ಎಲ್ಲ ಲೋಕಗಳನ್ನೂ ಹುಡುಕಿ ಪಡೆದ ಶಾರ್ದೂಲ ಆ ಮಹಾದೇವ. “ ಬಿಡದ ಮೊಗ್ಗುಗಳಿಲ್ಲ, ಗಿಡದ ಹೂಗಳನೆಲ್ಲ ದಿಂಡುಗಳ ಕಟ್ಟಿ ಕಟ್ಟಿಕೊಂಡೆನವನನಾ “ ಹಾಗಂತ ಸುಲಭದಲ್ಲಿ ದೊರೆತವನಲ್ಲ ಅವ. ಅವನನ್ನು ಒಲಿಸಲು ನಾನು ಮಾಡದ ಪೂಜೆಯಿಲ್ಲ, ಅರ್ಚಿಸಲು ತರದ ಹೂಗಳಿಲ್ಲ, ಹೂವುಗಳ ಮಾಲೆ ಕಟ್ಟಿ, ಆ ಮಾಲೆಗಳ ಹೊರೆ ಕಟ್ಟಿ ಅವನನ್ನು ಅರ್ಚಿಸಿದ್ದೇನೆ ಎನ್ನುತ್ತಾಳೆ ಉಮೆ. ಇಲ್ಲಿ ಬಳಸಿದ ದಿಂಡು ಎಂಬ ಪದಕ್ಕೆ ಹೂವಿನ ಹಾರ ಎಂಬ ಅರ್ಥವಿದೆ ಹಾಗೂ ಹೊರೆ ಕಟ್ಟಿರುವುದು ಎಂಬ ಅರ್ಥವೂ ಇದೆ. ಅಷ್ಟೊಂದು ಕಷ್ಟ ಪಟ್ಟು ಗಳಿಸಿದ ಮಹಾನಿಧಿ ಆ ಮಹಾಬಲ ಎನ್ನುತ್ತಾ ಮತ್ತಷ್ಟು ರೋಷಾವೇಶಕ್ಕೊಳಗಾಗುತ್ತಾಳೆ ಮಹೇಶ್ವರಿ. ಈಗ ಅವಳ ಕೋಪ ತ್ರಿಮೂರ್ತಿಗಳಲ್ಲಿ ಬಾಕಿ ಉಳಿದ ಇಬ್ಬರ ಕಡೆಗೆ ಹೋಗುತ್ತಿದೆ. “ ನಾರಾಯಣಪ್ಪನೇ ನಾಕುಮುಖದವನೇ ನೀವ್ಹೆಂಗೆ ಬಿಟ್ಟಿರೋ ವಿಷವಕುಡಿಯಲವನಾ “ ನಾರಾಯಣಪ್ಪನೆ, ಚತುರ್ಮುಖ ಹೊತ್ತ ಬ್ರಹ್ಮನೇ ನೀವು ಇಬ್ಬರು ಇಲ್ಲೇ ಇದ್ದು ಕೂಡಾ ಯಾಕೆ ತಡೆಯಲಿಲ್ಲ ನೀವು ? ವಿಷ ಕುಡಿಯುವುದರೊಳಗೆ ತಡೆಯಬೇಕಿತ್ತಲ್ಲ ನೀವು ? ಎನ್ನುತ್ತಾಳೆ ಶಿವೆ. ಕೆಲವೊಮ್ಮೆ ಈ ಗಂಡಂದಿರು ಮಾಡುವ ಕೆಲಸಕ್ಕೆ, ನಂತರ ಸಂಬಂಧವಿಲ್ಲದವರೆಲ್ಲರೂ, ಕೇವಲ ಅಲ್ಲಿ ಇದ್ದರು ಎಂಬ ಒಂದೇ ಕಾರಣಕ್ಕೆ ಬೈಸಿಕೊಳ್ಳುವ ಪರಿಸ್ಥಿತಿ ಬರುತ್ತೆ ನೋಡಿ. " ಲಕ್ಷ್ಮಮ್ಮ ಸರಸಮ್ಮ ಇಂದ್ರಪ್ಪ ಚಂದ್ರಣ್ಣ ನೀವ್ಯಾಕೆ ತಡೆದಿಲ್ಲಾ ಸಾವನಪ್ಪುವವನಾ " ಅನಾದಿ ಕಾಲದಿಂದ ಇರುವವರ ಮೇಲೆ ಕೋಪ ಮಾಡಿಕೊಂಡವಳ ಗಮನ ಅದೇ ತಾನೇ ಹುಟ್ಟಿದವರನ್ನೂ ಬಿಡಲಿಲ್ಲ. ದೇವರೊಂದಿಗೆ ಅವರ ಮಡದಿಯರ ಮೇಲೂ ಕೋಪಿಸಿಕೊಂಡಿದ್ದಾಳೆ ಶಕ್ತಿ. ಮಹಾ ಪಾಷಾಣ ಸೇವಿಸಿ ಈಗ ಪತಿ ಮರಣವನ್ನಪ್ಪಿದರೆ ಮುಂದೆ ಜಗತ್ತು ನಡೆಯುವುದಾದರೂ ಹೇಗೆ ಎಂಬ ಅವಳ ತಳಮಳ, ಆತಂಕ, ಕೋಪದ ಪರಾಕಾಷ್ಟೆ ಇಲ್ಲಿ ಕಾಣುತ್ತಿದೆ. " ವಾಸುಕಿಯನಂತಶೇಷಪದ್ಮನಾಭಕಂಬಲಂ ಶಂಖಪಾಲ ತಕ್ಷಕಂ ಧಾರ್ತರಾಷ್ಟ್ರಕಾಲಿಯಂ " ಅವಳ ಕೋಪ ಮುಂದುವರಿದು, ಈಗ ದೇವಾದಿದೇವರಿಂದ ವಿಷಶರೀರಿಗಳತ್ತ ಹೊರಳಿದೆ. ಅನಂತಂ