У нас вы можете посмотреть бесплатно ಮಳವಳ್ಳಿಯಲ್ಲಿ ವಿನೂತನ ಯೋಜನೆ ಅನುಷ್ಠಾನ: ವಿದ್ಯುತ್ ಅಗತ್ಯವಿಲ್ಲದೆ ಸೌರಶಕ್ತಿ ಸಹಾಯದಿಂದ ರೈಸ್ ಮಿಲ್ ಚಾಲನೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮಳವಳ್ಳಿ : ವಿದ್ಯುಚ್ಛಕ್ತಿ ಅಗತ್ಯ ವಿಲ್ಲದೆ ಸೌರಶಕ್ತಿ ಸಹಾಯದಿಂದ ರೈಸ್ ಮಿಲ್ ವೊಂದನ್ನು ಚಾಲನೆ ಮಾಡಬಹುದಾದ ವಿನೂತನ ಯೋಜನೆಗೆ ಮಳವಳ್ಳಿ ಪಟ್ಟಣ ದಲ್ಲಿ ಚಾಲನೆ ನೀಡಲಾಗಿದೆ. ಪಟ್ಟಣದ ಕೊಳ್ಳೇಗಾಲ ರಸ್ತೆಯಲ್ಲಿ ರುವ ಮಾಡ್ರನ್ ರೈಸ್ ಮಿಲ್ ನಲ್ಲಿ ಇದೀಗ ವಿದ್ಯುಚ್ಛಕ್ತಿ ಅಗತ್ಯವಿಲ್ಲದೆ ಸೌರಶಕ್ತಿ ಸಹಾಯದಿಂದ ರೈಸ್ ಮಿಲ್ ನ್ನು ರನ್ ಮಾಡಬಹು ದಾದ ವಿನೂತನ ಹಾಗೂ ಅಪರೂಪದ ಯೋಜನೆ ಅಳವಡಿಸಲಾಗಿದ್ದು ಶುಕ್ರವಾರ ಸಾಯಂಕಾಲ 6.30ರ ಸಮಯ ದಲ್ಲಿ ಮಿಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸು ವುದರೊಂದಿಗೆ ಯೋಜನೆಗೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಆರ್ ಜೆ ಪವರ್ ಸಲ್ಯೂಷನ್ ಕಂಪನಿಯ ಮುಖ್ಯಸ್ಥ ಜಗದೀಶ್ ಅವರು ತಮ್ಮ ಕಂಪನಿ ವತಿಯಿಂದ ಮಾಡ್ರನ್ ರೈಸ್ ಮಿಲ್ ನಲ್ಲಿ ಸುಮಾರು 100 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಯ ಸೋಲಾರ್ ಸಿಸ್ಟಮ್ ನ್ನು ಅಳವಡಿಸಿಕೊಡಲಾಗಿದ್ದು ಸೋಲಾರ್ ಸಿಸ್ಟಮ್ ಹೊಂದಿದ ಪ್ರಥಮ ರೈಸ್ ಇದಾಗಿದ್ದು ಇದ ರಿಂದ ರೈಸ್ ಮಿಲ್ ಮಾಲೀಕರಿಗೆ ವಿದ್ಯುತ್ ಬಿಲ್ ಗಣನೀಯವಾಗಿ ಕಡಿಮೆಯಾಗಲಿದ್ದು ಮಾಲೀಕರಿಗೆ ಆರ್ಥಿಕ ವೆಚ್ಚ ಬಹಳಷ್ಟು ಕಡಿಮೆ ಯಾಗಲಿದೆ ಎಂದು ತಿಳಿಸಿದರು. ಆರ್ ಜೆ ಪವರ್ ಸೆಲ್ಯೂಷನ್ ಕಂಪನಿಯ ಮಳವಳ್ಳಿ ಭಾಗದ ಪ್ರಮುಖರಾದ ಗಿರಿಧರ್ ಮಾತನಾಡಿ ಈ ಸೋಲಾರ್ ಸಿಸ್ಟಮ್ ನಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಇವರ ಮಿಲ್ ಗೆ ಅಗತ್ಯ ವಿರುವಷ್ಟು ಬಳಕೆಯಾಗಿ ಉಳಿಕೆ ಹೆಚ್ಚುವರಿ ವಿದ್ಯುತ್ ಕೆಇಬಿ ಲೈನ್ ಗೆ ನೀಡಲಾಗುವುದು ಇದನ್ನು ಮೆಡ್ ಮೀಟರ್ ರೆಕಾಡ್೯ ಮಾಡಲಿದ್ದು ಈಗೆ ಕೆಇಬಿ ಲೈನ್ ಗೆ ನೀಡಲಾದ ಕರೆಂಟ್ ಗೆ ಒಂದು ಯೂನಿಟ್ ಗೆ 3ರೂ 8 ಪೈಸೆ ಯನ್ನು ಕೆ ಇ ಬಿ ಮಾಲೀಕರಿಗೆ ನೀಡಲಿದೆ ಎಂದು ತಿಳಿಸಿದರು. ಮಾಡ್ರನ್ ರೈಸ್ ಮಿಲ್ ಮಾಲೀಕ ರಾದ ಎಂ ಎಸ್ ನಾಗರಾಜು ಅವರು ಮಾತನಾಡಿ ವಿದ್ಯುಚ್ಛಕ್ತಿ ಅಭಾವವಿರುವ ಈ ಸಂದರ್ಭದಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಿ ಕೊಳ್ಳುವಂತೆ ಆರ್ ಜೆ ಪವರ್ ಸೆಲ್ಯೂಷನ್ ಕಂಪನಿಯವರು ಮನವರಿಕೆ ಮಾಡಿಕೊಟ್ಟ ಹಿನ್ನಲೆ ಯಲ್ಲಿ ಈ ಸೋಲರ್ ಸಿಸ್ಟಮ್ ನ್ನು ಅಳವಡಿ ಸಿಕೊಳ್ಳಲಾಗಿದ್ದು ಸುಮಾರು 35 ಲಕ್ಷ ರೂ ಅಂದಾಜು ವೆಚ್ಚದ ಯೋಜನೆ ಯಲ್ಲಿ ವಿದ್ಯುತ್ ಬಿಲ್ ಉಳಿತಾ ಯದಲ್ಲೇ ಬ್ಯಾಂಕಿನ ಇಎಂಐ ಕಟ್ಟಿ ಪೂರ್ಣಗೊಳಿಸಬಹುದೆಂದು ಕಂಪನಿಯವರು ತಿಳಿಸಿದ್ದಾರೆ ಸಣ್ಣ ಕೈಗಾರಿಕೆಗಳಿಗೆ ಇದು ತುಂಬಾ ಉಪಯುಕ್ತವಾಗಿದ್ದು ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ನಮಗೆ ಆರ್ಥಿಕವಾಗಿ ಲಾಭವಾಗಲಿದೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.