У нас вы можете посмотреть бесплатно KARNATAKA BHOVI ABHIRUDHI NIGAM | SAMAJA KALYANA ELAKE | SOCIAL WELFARE DEPARTMENT | SONAR TV. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
KARNATAKA BHOVI ABHIRUDHI NIGAM | SAMAJA KALYANA ELAKE | SOCIAL WELFARE DEPARTMENT. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ಜನವರಿ 17 ಮತ್ತು 18 ರಂದು ಎರಡು ದಿನಗಳ ಸಾಮಾಜಿಕ ನ್ಯಾಯ ನಾಯಕತ್ವ ತರಬೇತಿ ಕುರಿತು ಜಾಗೃತಿ ಮೂಡಿಸುವ ಕಾರ್ಯಾಗಾರ. ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಬೆಂಗಳೂರು. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ20ನೇ ಮಹಡಿ ವಿಶ್ವೇಶ್ವರಯ್ಯ ದೊಡ್ಡ ಗೋಪುರ ಡಾ. ಬಿ ಆರ್ ಅಂಬೇಡ್ಕರ್ ವೀದಿ ಬೆಂಗಳೂರು - ರಾಜ್ಯ ಅನುಸೂಚಿತ ಜಾತಿಗಳು/ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ತಿನ ದಿನಾಂಕ:26-05-2015 ರಲ್ಲಿ ಸಭೆಯಲ್ಲಿ ನೀಡಿದ ಅನುಮೋದನೆಯಂತೆ ಹಾಗೂ ಸರ್ಕಾರದ ಆದೇಶ ದಿನಾಂಕ:29-02-2016 ರಲ್ಲಿ ರಂದು ಕರ್ನಾಟಕದಲ್ಲಿ ವಾಸಿಸುತ್ತಿರುವ ಭೋವಿ ಜನಾಂಗದ ಜನರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಪರಿಶಿಷ್ಟ ಜಾತಿಯಲ್ಲಿ ಬರುವ 101 ಉಪ ಜಾತಿಗಳ ಅಧಿಸೂಚನೆ ಆಧಾರದ ಮೇಲೆ ಭೋವಿ ಜಾತಿಯು ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ಒಡನಾಟ, ಸಾಂಪ್ರದಾಯಿಕ ಉದ್ಯೋಗ, ಪ್ರಾದೇಶಿಕ ಭಾಷೆಗಳು, ಹಬ್ಬಗಳ ಆಚರಣೆಗಳು, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಆಧರಿಸಿ ಪರಿಶಿಷ್ಟ ಜಾತಿಯ 09 ಜಾತಿ/ಉಪಜಾತಿಗಳಾದ 1) ಭೋವಿ, 2) ಒಡ್, 3) ಒಡ್ಡೆ, 4) ಒಡ್ಡರ್, 5) ವಡ್ಡರ, 7) ಕಲ್ಲು ಒಡ್ಡರ, 8) Bovi (Non Besta), 9) ಮಣ್ಣು ವಡ್ಡರ ಈ ಜಾತಿಗಳಿಗೆ ಕರ್ನಾಟಕ ಭೋವಿ ಅಭಿವೃಧಿ ನಿಗಮದ ಯೋಜನೆಗಳ ಸೌಲಭ್ಯಗಳ ಪಡೆಯಲು ಗುರುತಿಸಲಾಗಿದೆ. ಸರ್ಕಾರದ ಆದೇಶದಂತೆ ಭೋವಿ ಜನಸಂಖ್ಯೆ ಹೆಚ್ಚಿರುವ 1) ಬೆಂಗಳೂರು ನಗರ, 2)ಬೆಂಗಳೂರು ಗ್ರಾಮಾಂತರ, 3)ವಿಜಯಪುರ, 4)ಕಲಬುರಗಿ, 5) ತುಮಕೂರು, 6)ಬಳ್ಳಾರಿ, 7)ಚಿತ್ರದುರ್ಗ, 8) ರಾಯಚೂರು, 9)ಧಾರವಾಡ, 10)ಕೋಲಾರ, 11) ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರತ್ಯೇಕ ಭೋವಿ ನಿಗಮದ ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳ ಕಛೇರಿಯನ್ನು ತೆರೆಯಲು ಆದೇಶಿಸಲಾಗಿರುತ್ತದೆ. ಪ್ರಸ್ತುತ ಬೆಂಗಳೂರು ನಗರ, ಕೋಲಾರ, ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಜಿಲ್ಲಾ ಕಛೇರಿಯನ್ನು ತೆರೆದು ನಿಗಮದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿರುತ್ತದೆ. ಪ್ರತಿ ವರ್ಷ ಆಯವ್ಯಯ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಡಿ ಸರ್ಕಾರದಿಂದ ಅನುದಾನವನ್ನು ನಿಗಧಿಪಡಿಸಲಾಗುತ್ತಿದ್ದು 2025-26 ನೇ ಸಾಲಿಗೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ರೂ.9375.00 ಲಕ್ಷ ಗಳ ಅನುದಾನವನ್ನು ನಿಗಧಿಪಡಿಸಲಾಗಿರುತ್ತದೆ. 2025-26 ನೇ ಸಾಲಿಗೆ ನಿಗಧಿಪಡಿಸಲಾದ ಅನುದಾನದ ಪೈಕಿ ಈವರೆವಿಗೂ ಸರ್ಕಾರದಿಂದ ರೂ.7018.75 ಲಕ್ಷಗಳು ಬಿಡುಗಡೆಯಾಗಿರುತ್ತದೆ. ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ 2025-26 ನೇ ಸಾಲಿನಲ್ಲಿ ಈವರೆವಿಗೆ 880 ಫಲಾನುಭವಿಗಳಿಗೆ ರೂ.878.50 ಲಕ್ಷಗಳನ್ನು ವಿತರಿಸಿ, ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಉದ್ಯಮಶೀಲತಾ ಯೋಜನೆಯು ಬ್ಯಾಂಕಿನ ಸಹಯೋಗದನ್ವಯ ಅನುಷ್ಠಾನಗೊಳಿಸಲಾಗುತ್ತಿದ್ದು, ರೂ.1.00 ಲಕ್ಷ ಸಹಾಯಧನವಾಗಿದ್ದು, 2025-26 ನೇ ಸಾಲಿನಲ್ಲಿ ಈವರೆವಿಗೆ 118 ಫಲಾನುಭವಿಗಳಿಗೆ ರೂ.118.00 ಲಕ್ಷಗಳನ್ನು ವಿತರಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಉದ್ಯಮಶೀಲತಾ ಯೋಜನೆಯು ಬ್ಯಾಂಕಿನ ಸಹಯೋಗದನ್ವಯ ರೂ.2.00 ಲಕ್ಷ ಸಹಾಯಧನವಾಗಿದ್ದು, 2025-26 ನೇ ಸಾಲಿನಲ್ಲಿ ಈವರೆವಿಗೆ 238 ಫಲಾನುಭವಿಗಳಿಗೆ ರೂ.471.43 ಲಕ್ಷಗಳನ್ನು ವಿತರಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಉದ್ಯಮಶೀಲತಾ ಯೋಜನೆಯು ಬ್ಯಾಂಕಿನ ಸಹಯೋಗದನ್ವಯ ರೂ.3.50 ಲಕ್ಷ ಸಹಾಯಧನವಾಗಿದ್ದು, 2025-26 ನೇ ಸಾಲಿನಲ್ಲಿ ಈವರೆವಿಗೆ 117 ಫಲಾನುಭವಿಗಳಿಗೆ ರೂ.406.50 ಲಕ್ಷಗಳನ್ನು ವಿತರಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ, ಉದ್ಯಮಶೀಲತಾ ಸ್ವಾವಲಂಭಿ ಸಾರಥಿ ಯೋಜನೆಯ ರೂ.4.00 ಲಕ್ಷ ಘಟಕ ವೆಚ್ಚ, ದ ಯೋಜನೆಯಡಿ 2025-26 ನೇ ಸಾಲಿನಲ್ಲಿ ಈವರೆವಿಗೆ 187 ಫಲಾನುಭವಿಗಳಿಗೆ ರೂ.748 ಲಕ್ಷಗಳನ್ನು ವಿತರಿಸಲಾಗಿದ್ದು ಬ್ಯಾಂಕಿನ ಸಹಯೋಗದನ್ವಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಮೈಕ್ರೋಕ್ರೆಡಿಟ್ ಯೋಜನೆಯಡಿ 2025-26 ನೇ ಸಾಲಿನಲ್ಲಿ ಈವರೆವಿಗೆ 1310 (130 ಸಂಘಗಳಿಗೆ) ಫಲಾನುಭವಿಗಳಿಗೆ 2.260.00 ಲಕ್ಷಗಳನ್ನು ವಿತರಿಸಲಾಗಿದ್ದು ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ 2025-26 ನೇ ಸಾಲಿನಲ್ಲಿ ಈವರೆವಿಗೆ 78 ಕೊಳವೆಬಾವಿಗಳನ್ನು ಕೊರೆಯಲಾಗಿದ್ದು, ರೂ.527.46 ಲಕ್ಷಗಳನ್ನು ಗುತ್ತಿಗೆದಾರ ಕಂಪನಿಯವರಿಗೆ ಪಾವತಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಭೂ ಒಡೆತನ ಯೋಜನೆಯಡಿ 2025-26 ನೇ ಸಾಲಿನಲ್ಲಿ ಈವರೆವಿಗೆ 180 ಮಹಿಳಾ ಫಲಾನುಭವಿಗಳಿಗೆ 223.38 ಎಕರೆ ಭೂಮಿ ಖರೀದಿಸಿ, ರೂ.2532.34 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ. 2025-26ನೇ ಸಾಲಿನಲ್ಲಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರು ಪೀಠ, ಚಿತ್ರದುರ್ಗ ಇವರ ಸಾನಿಧ್ಯದಲ್ಲಿ, ಶ್ರೀ ರಾಮಪ್ಪ.ಎಂ. ಮಾನ್ಯ ಅಧ್ಯಕ್ಷರು (ರಾಜ್ಯ ಸಚಿವರ ಸ್ಥಾನಮಾನ), ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಇವರ ಅಧ್ಯಕ್ಷತೆಯಲ್ಲಿ ಸಾಮಾಜಿಕ ನ್ಯಾಯದ ನಾಯಕತ್ವ ತರಬೇತಿ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ಭೋವಿ ಸಮುದಾಯದ ಯುವಕ/ಯುವತಿಯರು ಮತ್ತು ಕಾರ್ಯಕರ್ತರಿಗೆ ದಿನಾಂಕ:17-01-2026 ಮತ್ತು 18-01-2026 ರಂದು 02 ದಿನಗಳ ಕಾರ್ಯಾಗಾರವನ್ನು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಇವರ ಸಂಯುಕ್ತ ಆಶ್ರಯದಲ್ಲಿ ಜ್ಞಾನಭಾರತಿ ಮುಖ್ಯ ರಸ್ತೆ, NOC ಎದುರು ಟೀಚರ್ಸ್ ಕಾಲೋನಿ, ನಾಗರಭಾವಿ, ಬೆಂಗಳೂರು. ಹಮ್ಮಿಕೊಳ್ಳಲಾಗಿದೆ. 2025-26ನೇ ಸಾಲಿನಲ್ಲಿ ನಿಗಮದಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು ಸ್ವಯಂ ಉದ್ಯೋಗ ನೇರಸಾಲ ಯೋಜನೆ ಕುರಿ ಮೇಕೆ ಸಾಕಾಣಿಕೆ. ಉದ್ಯಮ ಶೀಲತಾ ಯೋಜನೆ. ಬ್ಯಾಂಕ್ ಸಹಯೋಗದಲ್ಲಿ. ಮೈಕ್ರೋ ಕ್ರೆಡಿಟ್ ಪ್ರೇರಣಾ. ಭೂ ಒಡೆತನ ಯೋಜನೆ. ಗಂಗಾ ಕಲ್ಯಾಣ ಯೋಜನೆ ವೈಯಕ್ತಿಕ ಕೊಳವೆ ಬಾವಿ ಏತ ನೀರಾವರಿ. ದೌರ್ಜನ್ಯ ಪ್ರಕರಣ ಆಕಸ್ಮಿಕ ಅವಘಡಕ್ಕೊಳಗಾಗಿ ಮರಣ ಹೊಂದಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಡಿ ಸೌಲಭ್ಯ ಒದಗಿಸಲಾಗುವುದು.