У нас вы можете посмотреть бесплатно ಬಜೆಟ್ ನಲ್ಲಿ ಭೀಮಾ ಬ್ರಿಡ್ಜ್ ನವೀಕರಣಕ್ಕೆ 100 ಕೋಟಿ ಮೀಸಲಿಡಿ: ಉಮೇಶ್ ಮುದ್ನಾಳ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಬಜೆಟ್ ನಲ್ಲಿ ಭೀಮಾ ಬ್ರಿಡ್ಜ್ ನವೀಕರಣಕ್ಕೆ 100 ಕೋಟಿ ಮೀಸಲಿಡಿ: ಉಮೇಶ್ ಮುದ್ನಾಳ ಕೆಳಹಂತದ 9 ಸೇತುವೆ ಮೇಲ್ದರ್ಜೆಗೆ ಏರಿಸಲು ಬಜೆಟ್ ನಲ್ಲಿ ಯೋಚಿಸುವಂತೆ ಉಮೇಶ್ ಮುದ್ನಾಳ ಒತ್ತಾಯ ಹೈದ್ರಾಬಾದ್ ನಿಜಾಮರ ಕಾಲದಲ್ಲಿ ನಿರ್ಮಾಣ ಮಾಡಿರುವ ಯಾದಗಿರಿ ಜಿಲ್ಲೆಯ ಭೀಮಾನದಿಯ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ಹೀಗಾಗಿ ಅತಿ ಹೆಚ್ಚು ಬಜೆಟ್ ಮಂಡಿಸಿದ ಸಿಎಂ ಖ್ಯಾತಿಯ ಸಿದ್ದರಾಮಯ್ಯ ಸಾಹೇಬರು ಈ ಭಾರೀ ಬಜೆಟ್ ನಲ್ಲಿ 100 ಕೋಟಿ ಮೀಸಲಿಡುವಂತೆ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಯಾದಾಗಿರಿ ತಾಲೂಕಿನ ಕೆಳಹಂತದ ಸೇತುವೆ ಮೇಲೆ ಪ್ರತಿವರ್ಷ ಸುರಿತ್ತಿದ್ದ ಮಳೆಗೆ ಸೇತುವೆಗಳು ಜಲಾವೃತ ಆಗುತ್ತಿದ್ದ ಕಾರಣ ಸೇತುವೆಗಳಿಗೆ ಭೇಟಿ ನೀಡಿ 9 ಸೇತುವೆಗಳಿಗೆ ತಡೆಗೋಡೆ ಹಾಗೂ ಅಗಲಿಕರಣದ ಜೊತೆಗೆ ಮೇಲ್ದರ್ಜೆಗೆ ಏರಿಸಬೇಕೆಂದು ಒತ್ತಾಯಿಸಿದ್ದಾರೆ ಯಾದಗಿರಿ ತಾಲೂಕಿನ ವ್ಯಾಪ್ತಿಗೆ ಬರುವ ಡಾನ್ ಬಾಸ್ಕೊ, ದೊಡ್ಡಹಳ್ಳ, ಚಾಮನಳ್ಳಿ, ನಾಯ್ಕಲ್, ನಾಲ್ವಡಗಿ, ಠಾಣಾಗುಂದಿ, ತಳಕ, ಬಾಚವಾರ,ಕೂಯಿಲುರ, ಯರಗೋಳ ದೊಡ್ಡ ಕೆರೆ ಕೆಳಭಾಗದ ಸೇತುವೆ ಪ್ರತಿವರ್ಷ ಮಳೆಗಾಲದಲ್ಲಿ ಮೇಲೆ ನೀರು ಬಂದು ಸಂಪರ್ಕ ಕಡಿತಗೊಳ್ಳುತ್ತವೆ. ಆದರೆ ಜಿಲ್ಲಾ ಕೇಂದ್ರವಾಗಿ 15 ವರ್ಷಗಳು ಗತಿಸಿದ್ದರೂ ಮೇಲ್ದರ್ಜೆಗೆ ಏರಿಸುವ ಕೆಲಸವಾಗಿಲ್ಲ. ಈ ಬಜೆಟ್ ನಲ್ಲಾದ್ರೂ ಮುಖ್ಯಮಂತ್ರಿಗಳು ಪ್ರತ್ಯೇಕ ಅನುದಾನ ನೀಡಬೇಕು ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಾಬ್ಬಣ್ಣ, ಶರಣಪ್ಪ, ಸಲೀಂ,ವಿಜಯ್,ಪ್ರಭು,ರವಿಕುಮಾರ್, ಪವನ್, ಧರೀಪ್ ಸೇರಿ ಅನೇಕರು ಉಪಸ್ಥಿತರಿದ್ದರು.