У нас вы можете посмотреть бесплатно ನೃತ್ಯ ವಿದುಷಿ ಧನಲಕ್ಷ್ಮೀ ಮೊಗೇರ ಭಟ್ಕಳ ಇವಳ ಭರತನಾಟ್ಯ ರಂಗಪ್ರವೇಶ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಯಶಸ್ವಿಯಾದ ಧನಲಕ್ಷ್ಮಿಯ ರಂಗಪ್ರವೇಶ ಭಟ್ಕಳ: ನಗರದ ಝೇಂಕಾರ್ ಆರ್ಟ್ ಅಸೋಸಿಯೇಷನ್ ಸಂಸ್ಥೆಯ ವಿದ್ಯಾರ್ಥಿನಿ ನೃತ್ಯ ವಿದುಷಿ ಧನಲಕ್ಷ್ಮೀ ಮೊಗೇರ ಇವಳ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಶನಿವಾರ ಸಂಜೆ ನಗರದ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಯಶಸ್ವೀಯಾಗಿ ನಡೆಯಿತು.ಕಾರ್ಯಕ್ರಮವನ್ನು ಹುಬ್ಬಳ್ಳಿಯ ನೃತ್ಯವಿದ್ವಾನ್ ಸುಜಯ ಶ್ಯಾನಭಾಗ್ ಅವರು ದೀಪಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ನೃತ್ಯವು ಮಕ್ಕಳಲ್ಲಿ ಶಿಸ್ತು, ಸಮಯಪ್ರಜ್ಞೆ ಹಾಗೂ ಮಾನಸಿಕ–ದೈಹಿಕ ಸಾಮರ್ಥ್ಯವನ್ನು ಬೆಳೆಸುವ ಅತ್ಯಂತ ಮಹತ್ವದ ಕಲೆ ಎಂದು ಹೇಳಿದರು. ಪರೀಕ್ಷೆಗಳ ಒತ್ತಡದ ನಡುವೆಯೂ ವಿದ್ಯಾಭ್ಯಾಸಕ್ಕೆ ಧಕ್ಕೆಯಾಗದಂತೆ ನೃತ್ಯಾಭ್ಯಾಸವನ್ನು ಸಮತೋಲನದಿಂದ ಮುಂದುವರಿಸಿಕೊಂಡು ಶಾಸ್ತ್ರಾಧಾರಿತವಾಗಿ ಪರಿಪೂರ್ಣತೆಯನ್ನು ಸಾಧಿಸಿರುವ ಧನಲಕ್ಷ್ಮೀ ಅವರ ಪ್ರಯತ್ನ ಶ್ಲಾಘನೀಯ ಎಂದರು. ವೇ.ಮೂ. ವಿನೋದ ಭಟ್ಟ ಅವರು ನಟರಾಜ ಪೂಜೆ ಹಾಗೂ ಗೆಜ್ಜೆಪೂಜೆಯನ್ನು ನಡೆಸಿಕೊಟ್ಟರು. ನಂತರ ನೃತ್ಯಗುರು ವಿದುಷಿ ನಯನ ಪ್ರಸನ್ನ ಇವರಿಂದ ಗೆಜ್ಜೆಯನ್ನು ಕಟ್ಟಿಸಿಕೊಂಡು ಪುಷ್ಪಾಂಜಲಿಯೊಂದಿಗೆ ರಂಗಪ್ರವೇಶ ಮಾಡಿದ ಧನಲಕ್ಷೀ ಮೊಗೇರ ಒಂದಾದ ಮೇಲೆ ಒಂದರಂತೆ ವಿವಿಧ ನೃತ್ಯ ಪ್ರಾಕಾರಗಳನ್ನು ಪ್ರದರ್ಶಿಸುತ್ತಾ ಕಿಕ್ಕಿರಿದು ಸೇರಿದ್ದ ಜನ ಸಮೂಹದ ಮನಗೆಲ್ಲುವಲ್ಲಿ ಯಶಸ್ವೀಯಾಗಿದ್ದಲ್ಲದೇ ನಿರಂತರವಾಗಿ ಚಪ್ಪಾಳೆ ಗಿಟ್ಟಿಸಿಕೊಂಡು ಪ್ರೇಕ್ಷಕವರ್ಗವನ್ನು ಮಂತ್ರಮುಗ್ದರನ್ನಾಗಿಸಿದ ಕೀರ್ತಿಗೆ ಭಾಜನಳಾದಳು. ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕುಮಾರಿ ವಿದುಷಿ ಧನಲಕ್ಷೀ ಮೊಗೇರ ಅವಳನ್ನು ಸನ್ಮಾನಿಸಿ, ಗೌರವಿಸಿದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಹಾಗೂ ಉ.ಕ.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಮಾತನಾಡಿ ಝೇಂಕಾರ್ ಆಟ್ಸ್ ಅಸೋಶಿಯೇನ್ ಸ್ಥಾಪಿಸುವ ಮೂಲಕ ಪ್ರಸನ್ನ ಪ್ರಭು ಕುಟುಂಬದವರು ಅನೇಕ ನೃತ್ಯ, ಸಂಗೀತ ಪ್ರತಿಭೆಗಳನ್ನು ಸಮಾಜಕ್ಕೆ ನೀಡಿದ್ದಾರೆ. ಅವರ ಸಂಸ್ಥೆಯಿಂದ ಇಂದು ರಂಗಪ್ರವೇಶ ಮಾಡಿದ ಧನಲಕ್ಷೀ ಮೊಗೇರ ಈಕೆಯು ನೃತ್ಯದಲ್ಲಿ ಮಾತ್ರವಲ್ಲ ತನ್ನ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿದ ಪ್ರತಿಭಾವಂತೆಯಾಗಿದ್ದಾಳೆ ಎಂದರು. ಬೀನಾವೈದ್ಯ ಶೈಕ್ಷಣಿಕ ಸಂಸ್ಥೆಯ ಆಡಳಿತ ನಿರ್ದೇಶಕಿ ಪುಷ್ಪಲತಾ ಮಂಕಾಳ ವೈದ್ಯ ಮಾತನಾಡಿ ನೃತ್ಯ ಕಲೆಯನ್ನು ಒಲಿಸಿಕೊಳ್ಳುವುದು ಒಂದು ತಪಸ್ಸಿದ್ದ ಹಾಗೆ. ಅದನ್ನು ಅತ್ಯಂತ ಪ್ರೀತಿಯಿಂದ ಅಷ್ಟೇ ಕರಾರುವಕ್ಕಾಗಿ ಹೇಳಿಕೊಡುವ ವಿಧುಷಿ ನಯನ ಪ್ರಸನ್ನ ಅವರ ಕಾರ್ಯ ಶ್ಲಾಘನೀಯವಾದದ್ದು. ವಿಧುಷಿ ಪಟ್ಟಕ್ಕೇರಿರುವುದು ಧನಲಕ್ಷೀ ಮೊಗೇರ ಈಕೆಯ ಸಾಧನೆಗೆ ಸಂದ ಗೌರವವಾಗಿದೆ ಎಂದರು.ಈ ಕಾರ್ಯಕ್ರಮಕ್ಕೆ ಹಿನ್ನೆಲೆಯಲ್ಲಿ ಸಹಕರಿಸಿದ ವಾದ್ಯಗೋಷ್ಠಿ ಕಲಾವಿರಾದ ಗಾಯಕ ವಿದ್ವಾನ ರಾಜೀವ ಬೆಂಗಳೂರು, ಮ್ರದಂಗದಲ್ಲಿ ವಿದ್ವಾನ ಲಕ್ಷ್ಮೀನಾರಾಯಣ ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ದೀಪಕ್ ಹೆಬ್ಬಾರ್ ಬೆಂಗಳೂರು,ರಿದಂಪೆಡ್ ನಲ್ಲಿ ವಿದ್ವಾನ್ ರಾಘವೇಂದ್ರ ರಂಗಧೋಳ್ ಶಿವಮೊಗ್ಗ ಇವರಿಗೆ ಧನಲಕ್ಷ್ಮಿಯ ಪಾಲಕರಾದ ರಾಮಚಂದ್ರ ಹಾಗೂ ಶಾರದಾ ದಂಪತಿಗಳು ಸನ್ಮಾನಿಸಿ ಗೌರವಿಸಿದರು. ಗುರುವಂದನಾ ಕಾರ್ಯಕ್ರಮದಲ್ಲಿ ನೃತ್ಯವಿದುಷಿ ನಯನ ಪ್ರಸನ್ನ ಹಾಗೂ ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು ಇವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ರಾಜಾರಾಮ್ ಪ್ರಭು, ಬೀನಾ ವೈದ್ಯ ಮುಂತಾದವರು ಉಪಸ್ಥಿತರಿದ್ದರು. ಧನಲಕ್ಷಿಯ ತಾಯಿ ಶಾರದಾ ಮೊಗೇರ ವಂದಿಸಿದರೆ ನೃತ್ಯ ವಿದುಷಿ ಪಲ್ಲವಿ ಗಾಯತ್ರಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. Photography By Kiran Professional Bhatkal