У нас вы можете посмотреть бесплатно ಬಯಲು ಆಲಯ ಸೌತಡ್ಕ ಶ್ರೀ ಮಹಾಗಣಪತಿ ದೇವರ ವಾರ್ಷಿಕ ಮೂಡಪ್ಪ ಸೇವೆ ಸುಸಂಪನ್ನ. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಪ್ರಸಿಧ್ಧ ಬಯಲು ಆಲಯ ಗಂಟೆ ಗಣಪನ ಕ್ಷೇತ್ರವೆಂದೇ ಪ್ರಸಿಧ್ಧೀ ಹೊಂದಿರುವ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ. ವರ್ಷಂಪ್ರತಿ ಯಂತೆ ಮಾಘ ಶುಧ್ಧ ಚತುರ್ಥಿ ದಿನಾಂಕ 22. ಜನವರಿ 2026 ರಂದು ಬೆಳಗ್ಗೆ ಅಷ್ಟೋತ್ತರ ಸಂಖ್ಯೆಯ ನಾರೀಕೇಳ ಫಲ ಅಷ್ಟದ್ರವ್ಯದಿಂದ ಗಣಪತಿ ಮಂಡಲ ಬಿಡಿಸೀ ಪೂಜಿಸಿ, ಅರ್ಚಿಸಿ, ಪ್ರಧಾನ ಹೋಮ ಕುಂಡದಲ್ಲಿ ಅಗ್ನಿ ಪ್ರತಿಷ್ಠಾಪಿಸಿ ಆವಾಹಿಸಿ, ಪೂಜಿಸಿ ಅರ್ಚಿಸಿ ಆಜ್ಯಾಹುತಿ, ಅಷ್ಟ ದ್ರವ್ಯ, ದೂರ್ವೆ ಆಹುತಿ ನೀಡಿ, ಹಣ್ಣು ಹಂಪಲು ತೆಂಗಿನಕಾಯಿ, ವಸ್ತ್ರಗಳಿಂದ ಪೂರ್ಣಾಹುತಿ ಜರುಗುವ ಮೂಲಕ ಗಣಹೋಮ ನೆರವೇರಿತು. ಮಹಾಮಂಗಳಾರತಿ, ಪ್ರಾರ್ಥನೆ, ಸ್ಥಾಪಿತ ಕಲಶವನ್ನು ಶ್ರೀ ಮಹಾಗಣಪತಿ ದೇವರಿಗೆ ಅಭಿಷೇಕ ಮಾಡಲಾಯಿತು. ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಅಥರ್ವಶೀರ್ಷ ಪಾರಾಯಣ, ರುದ್ರ ಪಾರಾಯಣ ಊರ ಭಕ್ತ ಋತ್ವಿಜರಿಂದ ನೆರವೇರಿ, ಪಂಚಾಮೃತ, ಸಿಹಿಯಾಳ, ಅಭಿಷೇಕ, ಅಲಂಕಾರ, ಮಹಾ ಮಂಗಳಾರತಿ ಮೂಲಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೇಯಿತು. ಸಂಜೆ ಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರಿಗೆ ಕಬ್ಬಿನ ಜಲ್ಲೆಗಳಿಂದ ಬೇಲಿ ರಚಿಸಿ, ಹೂಗಳಿಂದ ಅಲಂಕರಿಸಿ, ಪ್ರಾರ್ಥನೆ ನಡೆದು, ಕಬ್ಬಿನ ಬೇಲಿಯೊಳಗೆ ತುಪ್ಪದಿಂದ ಕರಿದ ವಿಶೇಷ ಅಪ್ಪಗಳನ್ನು ಸುರಿದು, ಗಣಪನನ್ನು ಮುಚ್ಚುವಂತೆ ಮಾಡಲಾಯಿತು. ಬಳಿಕ ರಂಗಪೂಜೆ, ತಂತ್ರೋಕ್ತವಾಗಿ ಅರ್ಚಿಸಿ, ನೈವೇದ್ಯ ಸಮರ್ಪಿಸಿ ಮಹಾ ಮಂಗಳಾರತಿಯೊಂದಿಗೆ, ಮಹಾಪೂಜೆ ಸಮರ್ಪಿಸಲಾಯಿತು. ಆನಂತರ ಸೇವಾ ಭಕ್ತ ವರ್ಗಕ್ಕೆ ತೀರ್ಥ ಅಪ್ಪ ಕಜ್ಜಾಯ ಪ್ರಸಾದದೊಂದಿಗೆ ಅನ್ನದಾನ ಜರುಗಿತು. ಈ ಸಂದರ್ಭದಲ್ಲಿ ಮುಖ್ಯವಾಗಿ ವ್ಯವಸ್ಥಾಪನಾ ಸಮೀತಿ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸರ್ವ ಸದಸ್ಯರು, ಮತ್ತಿತರ ಸೇವಾದಾರರು, ಭಕ್ತ ವರ್ಭಾಗ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. Mangalore Samachar.. / @mangaloresamachar9338