У нас вы можете посмотреть бесплатно ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹಸ್ರಲಿಂಗದ ಲಿಂಗಗಳ ಸಂಖ್ಯೆ ಕ್ಷೀಣ: ಏನು ಕಾರಣ? | Vijay Karnataka или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಕ್ಷೇತ್ರಗಳಲ್ಲೊಂದಾದ ಸಹಸ್ರಲಿಂಗದಲ್ಲಿದ್ದ ಲಿಂಗಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಇದು ಸಾರ್ವಜನಿಕರಿಗೆ ಅಚ್ಚರಿಯ ಜೊತೆಗೆ ಆತಂಕವನ್ನೂ ತಂದೊಡ್ಡಿದೆ. ಶಿರಸಿ ತಾಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ. ದೂರದ ಭೈರುಂಬೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಹಸ್ರಲಿಂಗ, ಸುತ್ತಲಿನ ಹಸಿರು ಪರಿಸರದಿಂದಲೇ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ಕ್ರಿ.ಶ 1678ರಿಂದ 1718ರವರೆಗೆ ಇಲ್ಲಿ ಆಳ್ವಿಕೆ ನಡೆಸಿದ್ದ ಸೋದೆಯ ಮೊದಲ ದೊರೆ ಅರಸಪ್ಪ ನಾಯ್ಕ, ತನಗೆ ಮಕ್ಕಳಾಗದ ಕಾರಣಕ್ಕೆ ಸಂತಾನ ಭಾಗ್ಯ ಕರುಣಿಸಿದರೆ ಶಾಲ್ಮಲಾ ನದಿಯಲ್ಲಿ ಶಿವಲಿಂಗ ನಿರ್ಮಿಸುತ್ತೇನೆ ಎಂದು ಶಿವನಲ್ಲಿ ಹರಕೆ ಹೊತ್ತಿದ್ದರಂತೆ. ಹರಕೆ ಹೊತ್ತ ಬಳಿಕ ಮಕ್ಕಳಾಗುತ್ತಿದ್ದಂತೆ ಇಲ್ಲಿ ಕೆಲವಷ್ಟು ಶಿವಲಿಂಗವನ್ನು ಕೆತ್ತಿಸಿದರಂತೆ. ತದನಂತರ ಆಡಳಿತಕ್ಕೆ ಬಂದ ಶಿವಭಕ್ತನಾಗಿದ್ದ ದೊರೆ ಸದಾಶಿವರಾಯ, ವೈಶಾಖ ಮಾಸದಲ್ಲಿ ಸಾವಿರಾರು ಲಿಂಗಗಳನ್ನು ಕೆತ್ತಿಸಿ ಪೂಜೆ ಸಲ್ಲಿಸುತ್ತಾ ಬಂದಿದ್ದ ಎಂದು ಶಾಸನವೊಂದು ತಿಳಿಸುತ್ತದೆ. ತದನಂತರದಿಂದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ಇಲ್ಲಿ ಬಂದು ಪೂಜೆ ಸಲ್ಲಿಸುತ್ತಾ ಬಂದಿದ್ದು, ಸಂತಾನರಹಿತರಿಗೆ ಮಕ್ಕಳಾದ ಉದಾಹರಣೆಗಳೂ ಸಾಕಷ್ಟಿವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಇಷ್ಟು ಐತಿಹ್ಯವುಳ್ಳ ಸಹಸ್ರಲಿಂಗದಲ್ಲಿ ಕಳೆದ 20- 25 ವರ್ಷಗಳಿಂದ ಲಿಂಗಗಳ ಸಂಖ್ಯೆಯಲ್ಲಿ ಇಳಿಕೆಯಾಗತೊಡಗಿದೆ. ಬಿಸಿಲು- ಮಳೆಯ ಕಾರಣದಿಂದ, ನದಿಯಲ್ಲಿ ಪ್ರವಾಹ ಉಂಟಾಗಿ ರಭಸವಾಗಿ ಹರಿಯುವಾಗ ಸವೆದಿರಬಹುದು ಎಂದು ಸ್ಥಳೀಯರು ಅಂದಾಜಿಸಿದರೂ ಕೂಡ, ಐನೂರು ವರ್ಷಗಳಷ್ಟು ಇತಿಹಾಸ ಹೊಂದಿದ ಶಿವಲಿಂಗಗಳು ಇತ್ತೀಚಿನ ಕೆಲ ದಶಕಗಳಿಂದ ಸವೆದು ಕಣ್ಮರೆಯಾಗುತ್ತಿರುವುದು ಸ್ಥಳೀಯರಲ್ಲೂ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಪುರಾತತ್ವ ಇಲಾಖೆ ಹಾಗೂ ಜಿಲ್ಲಾಡಳಿತ ಗಮನ ಹರಿಸಿ, ಈ ಪುಣ್ಯ ಕ್ಷೇತ್ರದಲ್ಲಿನ ಲಿಂಗಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ. #karwar #Shivalinga #Rain Our Website : https://Vijaykarnataka.com Facebook: / vijaykarnataka Twitter: / vijaykarnataka