У нас вы можете посмотреть бесплатно ಶ್ರೀ ಮನ್ನಾಗಮಂಡಲ ಮಹೋತ್ಸವ ಸಡಗರ ಸಂಭ್ರಮದಿಂದ ಸುಸಂಪನ್ನ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶ್ರೀ ಮನ್ನಾಗಮಂಡಲ ಮಹೋತ್ಸವ ಸಡಗರ ಸಂಭ್ರಮದಿಂದ ಸುಸಂಪನ್ನ ವಿಶೇಷ ವರದಿ. ಪ್ರಕೃತಿ, ಕೃಷಿ ಮತ್ತು ಸಂಸ್ಕೃತಿಯ ಪಾವನ ಸಂಕಲ್ಪ ಡಾ. ಜಿ. ರಾಮಕೃಷ್ಣ ಆಚಾರ್ . ತನ್ನ ಬಡತನದಲ್ಲಿ ಅಚಲವಾದ ಶ್ರದ್ಧೆ ಮತ್ತು ನಂಬಿಕೆಗಳಿಂದ ತಮ್ಮ ಕರ್ತವ್ಯವನ್ನು ಮಾಡುತ್ತಾ ಬೆಳೆಯುತ್ತಾ ಇತರರನ್ನು ಬೆಳೆಸುತ್ತಾ ಸಮಾಜದಲ್ಲಿ ಉತ್ತುಂಗಕ್ಕೆ ಹೇರಿದ ಪರಿಶ್ರಮಿ ಅವರೇ ಡಾ ರಾಮಕೃಷ್ಣ ಆಚಾರ್. ಸವಾಲುಗಳನ್ನು ಮೆಟ್ಟಿಲೆಂದು ಏರುತ್ತಾ ಪರಿಶ್ರಮದಿಂದ ದೇಶವ್ಯಾಪ್ತಿಯಾಗಿ ಬೆಳೆದು ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಏರಿ ನಿಂತ ಯಶಸ್ವಿ ಉದ್ಯಮಿ. ತಾನು ಬೆಳೆಯುದರೊಂದಿಗೆ ಇತರರನ್ನು ಬೆಳೆಸುವ ಕಾಯಕ. ಈಗಾಗಲೇ ನೂರಾರು ಉದ್ಯೋಗಗಳನ್ನು ಸೃಷ್ಟಿಸಿ ಸಾವಿರಾರು ಮಂದಿಯ ಉಣ್ಣುವ ಅನ್ನಕ್ಕೆ ಕಾರಣೀಭೂತರಾದ ಡಾ. ರಾಮಕೃಷ್ಣ ಆಚಾರ್. ಅತ್ಯಂತ ದೊಡ್ಡ ಉದ್ಯಮಿಯಾಗಿ ಬೆಳೆದ ಇವರು ತಾನು ಹುಟ್ಟಿ ಬೆಳೆದ ಭೂಮಿತಾಯಿಗೆ ಏನಾದರೂ ಮಾಡಬೇಕೆಂಬ ಉದ್ದೇಶದಿಂದ ಮುನಿಯಾಲು ಎಂಬಲ್ಲಿ ಬರಡು ಭೂಮಿಯನ್ನು ಸಾಂಪ್ರದಾಯಿಕ ರೀತಿಯಲ್ಲಿ ದೇಸಿ ಪದ್ಧತಿಯಲ್ಲಿ ಕೃಷಿ ಭೂಮಿಯನ್ನಾಗಿ ಮಾಡಿ ಮಿಶ್ರ ಬೆಳೆಗಳನ್ನು ಬೆಳೆದು ಮಾದರಿ ಕೃಷಿಕರಾಗಿ ಬೆಳೆದು ನಿಂತ ಕೃಷಿ ತಪಸ್ವಿ ಡಾ ರಾಮಕೃಷ್ಣ ಆಚಾರ್. ಅವರು ಪ್ರಕೃತಿಯನ್ನು ಜೀವಾಳವನ್ನಾಗಿ ಮಾಡಿಕೊಂಡು, ತಮ್ಮ ಬದುಕನ್ನೇ ಕೃಷಿ ಸೇವೆಗೆ ಅರ್ಪಿಸಿರುವ ರೈತನ ತ್ಯಾಗ, ಪರಿಶ್ರಮ ಮತ್ತು ಮಹತ್ವವನ್ನು ಗುರುತಿಸುವ ಮಹತ್ತರ ಉದ್ದೇಶದಿಂದ ರೈತಪೀಠ ಎಂಬ ಗೌರವ ಪ್ರಶಸ್ತಿಯನ್ನು ಸ್ಥಾಪಿಸಿ ರೈತರನ್ನು ಸನ್ಮಾನಿಸಲು ಸಂಕಲ್ಪಿಸಿದ್ದಾರೆ. ಈ ಪವಿತ್ರ ಕಾರ್ಯಕ್ಕೆ ಪೂರ್ವಭಾವಿಯಾಗಿ ದೈವ ಚಿತ್ತದಂತೆ ಪ್ರಕೃತಿಯ ರಕ್ಷಕನಾದ ನಾಗದೇವರ ಆಶೀರ್ವಾದ ಪಡೆಯಲು ಮತ್ತು ಸನಾತನ ಸಂಸ್ಕೃತಿಯ ಮೂಲಭೂತ ತತ್ವವಾದ ಪ್ರಕೃತಿ ಸಂರಕ್ಷಣೆಯ ಸಂದೇಶವನ್ನು ಸಾಕಾರಗೊಳಿಸಲು, ಅತ್ಯಂತ ಶುದ್ಧ ಮತ್ತು ಪವಿತ್ರವಾದ ನಾಗಮಂಡಲ ಸೇವೆಯನ್ನು ನೆರವೇರಿಸುವ ಸಂಕಲ್ಪವನ್ನು ಕೈಗೊಂಡಿದ್ದಾರೆ. ಸನಾತನ ಸಂಸ್ಕೃತಿಯ ಕೇಂದ್ರ ಬಿಂದು ಪ್ರಕೃತಿ. ಮಣ್ಣು, ನೀರು, ಅಗ್ನಿ, ವಾಯು ಮತ್ತು ಆಕಾಶ ಎ೦ಬ ಪಂಚ ಭೂತಗಳಿಂದಲೇ ಪ್ರಪಂಚ ನಿರ್ಮಿತವಾಗಿದೆ. ಈ ಪಂಚ ಭೂತಗಳನ್ನು ಕಾಪಾಡುವ ಉದ್ದೇಶದಿಂದಲೇ ನಮ್ಮ ಹಿರಿಯರು ಮರಗಳ ಕೆಳಗೆ ನಾಗಪ್ರತಿಷ್ಠೆ ಮಾಡಿ, ಆ ಪ್ರದೇಶವನ್ನು 'ನಾಗಬನ'ವೆಂದು ಘೋಷಿಸಿ, ಅದನ್ನು ಅಚಲವಾಗಿ ಸಂರಕ್ಷಿಸುತ್ತಿದ್ದರು. ಪ್ರಕೃತಿಯನ್ನು ಉಳಿಸಿಕೊಟ್ಟ ನಾಗನನ್ನು ಪ್ರಕೃತಿಯ ನಡುವೆಯೇ ಆರಾಧಿಸುವುದು ನಮ್ಮ ಧರ್ಮ. ಸಂಜೀವಿನಿ ಗೋಧಾಮದಲ್ಲಿ ನಡೆಯುವ ವಿಶಿಷ್ಟ ನಾಗಮಂಡಲ – ಪ್ರಮುಖ ಹೆಜ್ಜೆಗಳು ಶುದ್ಧ ಭೂಮಿ ಸೃಷ್ಟಿ: ಉಳುಮೆ ಮಾಡಿ, ಮಣ್ಣು ಹದಮಾಡಿ, ಬೀಜ ಬಿತ್ತನೆ ಮಾಡಿ ಹಾಗೂ ಹಸುಗಳು ಮೇಯುವ ಮೂಲಕ ಭೂಮಿಯನ್ನು ಪವಿತ್ರೀಕರಿಸಲಾಯಿತು. ರಾಸಾಯನಿಕ ರಹಿತ ಬಣ್ಣಗಳ ತಯಾರಿ: ಅಕ್ಕಿಪುಡಿ (ಬಿಳಿ); ಅರಿಶಿನ (ಹಳದಿ); ಅರಿಶಿನದೊಂದಿಗೆ ಸುಣ್ಣ (ಕೆಂಪು); ಎಲೆಪುಡಿ (ಹಸಿರು); ಹೊಟ್ಟು ಸುಟ್ಟು (ಕಪ್ಪು), ಈ ಐದು ಶುದ್ಧ ಬಣ್ಣಗಳಿಂದಲೇ ನಾಗಮಂಡಲ ರಚನೆ. ದೊಂದಿ ಬೆಳಕಿನ ಅಲಂಕಾರ: ದೊಂದಿ ಮತ್ತು ತೈಲದ ದೀಪಗಳಿಂದ ಮಂಟಪವನ್ನು ಅಲಂಕರಿಸಿ, ದೇವರಿಗೆ ನೆರಳು ಬೀಳದಂತೆ ಶುದ್ಧ ಆರಾಧನಾ ವಿಧಾನವನ್ನು ಪಾಲಿಸಲಾಯಿತು. ಶಬ್ದಮಾಲಿನ್ಯ ರಹಿತ ಸಂಗೀತ: ಗೋವು-ಪ್ರಾಣಿ-ಪಕ್ಷಿ ಸಂಕುಲಕ್ಕೆ ತೊಂದರೆಯಾಗದಂತೆ ಉಡಿಕೆ, ಶಂಖ, ತಾಳ, ನಾಗ ಸ್ವರಗಳಂತಹ ಮೃದು ಸ್ಥರಗಳಿಂದಲೇ ಸೇವೆ. ಅನ್ನದಾನ: ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬೀಜದುಂಡೆ ಪ್ರಸಾದ: ಸುಬ್ರಹ್ಮಣ್ಯ ದೇವರ ಮೃತ್ತಿಕೆಯು ಸೇರಿದ ಮಣ್ಣಿನಿಂದ ತಯಾರಿಸಿದ ಬೀಜದುಂಡೆ - ಪ್ರಕೃತಿಯನ್ನು ಉಳಿಸುವ ಪವಿತ್ರ ಪ್ರಸಾದ. 5000 ಬೀಜ ದುಂಡೆಗಳ ವಿತರಣೆಯ ಸಂಕಲ್ಪ ಮಾಡಲಾಗಿತ್ತು. ಶ್ರೀ ನಾಗದೇವರಿಗೆ ಅತ್ಯಂತ ಪ್ರಿಯವಾದ ಹಿಂಗಾರ ಹೂವಿನ ಬಳಕೆಯನ್ನು ಮಿತಿಗೊಳಿಸಿ, ಕೇವಲ ಒಂದು ಸಾವಿರ ಹಾಳೆ ಹಿಂಗಾರವನ್ನು ಮಾತ್ರ ಉಪಯೋಗಿಸುವುದು. ಅದಕ್ಕೆ ಪ್ರತಿಯಾಗಿ ಒಂದು ಸಾವಿರ ಅಡಿಕೆ ಸಸಿಗಳನ್ನು ವಿತರಿಸುವ ಮೂಲಕ ಪ್ರಕೃತಿ ಸಂರಕ್ಷಣೆಯ ಪ್ರತಿಜ್ಞೆ ಮಾಡಲಾಯಿತು. ಈ ಮೂಲಕ, ರೈತನ ಗೌರವ, ಪ್ರಕೃತಿಯ ಸಂರಕ್ಷಣೆ ಮತ್ತು ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ಒಂದೇ ವೇದಿಕೆಯಲ್ಲಿ ಜೋಡಿಸುವುದೇ ರೈತಪೀಠ ಮತ್ತು ನಾಗಮಂಡಲ ಸೇವೆಯ ಮೂಲ ಉದ್ದೇಶವಾಗಿತ್ತು. ಸ್ವಸ್ತಿಶ್ರೀ ವಿಜಯಾಭ್ಯುದಯ ವಿಶ್ವಾವಸು ನಾಮ ಸಂವತ್ಸರದ ಕುಂಭ ಮಾಸ ದಿನ 9 ಸಲುವ ಫಾಲ್ಗುಣ ಶುಕ್ಲ ೪ಯು, ದಿನಾಂಕ 21.02.2026 ಶನಿವಾರದಂದು ಮುನಿಯಾಲು ಸ೦ಜೀವಿನಿ ಗೋಧಾಮದ ನಾಗಬನದಲ್ಲಿ ಶ್ರೀಮತಿ ಸವಿತಾ ಆರ್. ಆಚಾರ್ ಮತ್ತು ಡಾ. ಜಿ. ರಾಮಕೃಷ್ಣ ಆಚಾರ್ ಶ್ರೀಮತಿ ಅನುಷಾ ಆಚಾರ್ ಮತ್ತು ಪ್ರಜ್ವಲ್ ಆಚಾರ್ ಶ್ರೀಮತಿ ಪೂಜಾ ಆಚಾರ್ ಮತ್ತು ತೇಜಸ್ ಆಚಾರ್ ರಕ್ಷತ್ ಆಚಾರ್ ಹಾಗೂ ಕುಟುಂಬದವರಿ೦ದ ಶ್ರೀಮನ್ನಾಗಮಂಡಲ ಪ್ರಕೃತಿಯಿಂದ ಪ್ರಕೃತಿಗೆ ಸೇವೆ ನಡೆಯಿತು. ತತ್ಸಂಭದ್ಧ 19.02.202600 21.02.2026 ರವರೆಗೆ ಕೊರಂಗ್ರಪಾಡಿ ವಿದ್ವಾನ್ ಶ್ರೀ ಕೆ.ಪಿ. ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಶ್ರೀ ವಾಸುದೇವ ಭಟ್ ಅವರ ಸಹಯೋಗದೊಂದಿಗೆ ಪಾತ್ರಿಗಳಾದ ಶ್ರೀ ರಾಮಚಂದ್ರ ಕುಂಜಿತ್ತಾಯ ರ ಸರ್ವ ಸಹಕಾರದಲ್ಲಿ ಸಂಪನ್ನತೆ. ಶುಕ್ರವಾರ, 20 ಫೆಬ್ರವರಿ 2026 ಕೃಷಿ ಮಂಡಲ ಶ್ರೀನಿವಾಸ ಸಭಾ ಮಂಟಪ ನಾಗಮಂಡಲ ಇದು ಪ್ರಕೃತಿಯ ಜೊತೆಗೆ ನಂಬಿಕೆಯ ಅನುಸಂಧಾನ. ನಮ್ಮ ನೆಲ ಮೂಲದ ಕೃಷಿ ಸಂಸ್ಕೃತಿ ಉಳಿದರೆ ಮಾತ್ರ ಈ ಆಚರಣೆಗಳಿಗೆ ಒಂದು ಅರ್ಥ. ಈ ಹಿನ್ನೆಲೆಯಲ್ಲಿ ಯುವ ಜನತೆಗೆ ಕೃಷಿಯ ಖುಷಿಯನ್ನು ತಿಳಿಸುವ ಅರ್ಥ ಪೂರ್ಣ ಕೃಷಿ ವಿಚಾರಗೋಷ್ಠಿಗಳನ್ನು ಈ ನಾಗಮಂಡಲದ ಚಪ್ಪರದ ನೆರಳಿನಲ್ಲಿ ಆಯೋಜಿಸಲಾಗಿತ್ತು. ಪೂರ್ವಾಹ್ನ 10:30 ಕೃಷಿ ವಿಚಾರಗೋಷ್ಠಿ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಕರಾಗಿ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ಪ್ರಸ್ತಾವನೆ: ಶ್ರೀಕಾಂತ್ ಶೆಟ್ಟಿ ಕಾರ್ಕಳ, ಲೇಖಕರು, ಉಡುಪಿ ಪೂರ್ವಾಹ್ನ 11:00, ಕೃಷಿ ವಿಚಾರಗೋಷ್ಠಿ 1, ವಿಷಯ: ಕರಾವಳಿಯ ಕೃಷಿ ಬಹುತ್ವ ಮತ್ತು ಧಾರ್ಮಿಕ ನಂಬಿಕೆಗಳು ಸಂಪನ್ಮೂಲ ವ್ಯಕ್ತಿ: ಡಾ. ನರೇಂದ್ರ ರೈ ದೇರ್ಲ ನಿವೃತ್ತ ಪ್ರಾಧ್ಯಾಪಕರು ಮತ್ತು ಪ್ರಸಿದ್ಧ ಕೃಷಿ ಅಂಕಣ ಕಾರರು ಮಧಾಹ್ನ 12:00 ಕೃಷಿ ವಿಚಾರಗೋಷ್ಠಿ 2 ವಿಷಯ: ಯುವಜನತೆ ಮತ್ತು ಭವಿಷ್ಯದಲ್ಲಿ ಕೃಷಿ ಸಾಧ್ಯತೆಗಳು, ಸಂಪನ್ಮೂಲ ವ್ಯಕ್ತಿ: ಶ್ರೀ ನಿರಂಜನ ಪೊಳ್ಯ, ಗ್ರಾಮಜನ್ಯ, ಪುತ್ತೂರು ಅಧ್ಯಕ್ಷತೆ: ಶ್ರೀ ಗುಣಪಾಲ ಕಡಂಬ ಪ್ರಗತಿಪರ ಕೃಷಿಕರು ಮತ್ತು ನಿವೃತ್ತ ಪ್ರಾಂಶುಪಾಲರು ಅಪರಾಹ್ನ 1:30ರಿಂದ 2:30 - ಭೋಜನ ವಿರಾಮ ಅಪರಾಹ್ನ 2:30 ಕೃಷಿ ವಿಚಾರಗೋಷ್ಠಿ 3 ವಿಷಯ: ಹೊಸ ತಲೆಮಾರಿನ ಕೃಷಿ ಮತ್ತು ಹಳ್ಳಿ ವಾಪಸಾತಿಯ ಅನುಭವ ಸಂಪನ್ಮೂಲ ವ್ಯಕ್ತಿ: ಶ್ರೀ ಪ್ರವೀಣ್ ಕೇಶವ್ ಪ್ರಯೋಗಶೀಲ ಕೃಷಿಕರು, ಮೈರುಗ, ಕುರುಡಪದವು ಅಧ್ಯಕ್ಷತೆ: ಡಾ. ಧನಂಜಯ್, ಕೃಷಿ ವಿಜ್ಞಾನಿಗಳು, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಶ್ರೀನಿವಾಸ ಸಭಾ ಮಂಟಪ ಯಕ್ಷ ಗಾನ ವಲ್ಲರಿ ಸಂಜೆ 5:00 | ಶ್ರೀನಿವಾಸ ಸಭಾ ಮಂಟಪ ದೇಶದ ನಿರುದ್ಯೋಗ, ಬಡತನ ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸಲು ಕೃಷಿಕರ ಕೈ ಬಲಪಡಿಸುವ ಮತ್ತು ಅವರಿಗೆ ಒಂದು ಘನತೆಯ ಬದುಕನ್ನು ಒದಗಿಸುವ ಅನಿವಾರ್ಯತೆ ಇದೆ. ಹೀಗಾಗಿ ಈ ದೇಶದ ಸಾಹಿತ್ಯ ಮತ್ತು ಕಲಾರಂಗದಲ್ಲಿ ಇದ್ದಂತೆ ಕೃಷಿಕರಿಗೂ ಕೂಡ ಒಂದು ಪ್ರಶಸ್ತಿಯನ್ನು ಕೊಡುವ ಯೋಜನೆಯೇ ರೈತಪೀಠ ಪ್ರಶಸ್ತಿ. ದಿವ್ಯ ಸಾನಿಧ್ಯ ಪೂಜ್ಯ ಶ್ರೀ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಿದ್ಧಗಿರಿ ಮಠ (ಕಾನೇರಿ), ಕೊಲ್ಲಾಪುರ, ಮಹಾರಾಷ್ಟ್ರ / @mangaloresamachar9338