У нас вы можете посмотреть бесплатно ನರಕಯಾತನೆ ಅನುಭವಿಸುತ್ತಿದೆ ಕುಟುಂಬ..! ನಾಗರಿಕ ಸಮಾಜ ನೆರವಿಗೆ ಬರಬೇಕಾಗಿದೆ. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಇಂದ್ರಾಳಿ ರೈಲು ಗೋದಾಮು ರಸ್ತೆ ಸನಿಹ ಸಣ್ಣದಾದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ದಂಪತಿಗಳು ದಯನೀಯ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವುದು ಕಂಡು ಬಂದಿದೆ. ನಿಲ್ಲಲು ಸ್ವಂತ ಸೂರಿಲ್ಲ, ಹೊಟ್ಟೆಗೂ ಬಟ್ಟೆಗೂ ಇಲ್ಲದೆ ತೀರ ಅಸಹಾಯಕ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ದಂಪತಿಗಳಿಗೆ ಸಮಾಜಸೇವಕ ನಿತ್ಯಾನಂದ ಒಳಕಾಡುವರು ತುರ್ತು ನೆರವಿಗೆ ಬಂದು, ದಾನಿಯೊಬ್ಬರ ಮೂಲಕ ಒಂದು ತಿಂಗಳಿಗೆ ಬೇಕಾಗುವಷ್ಟು ಪಡಿತರ ಸಾಮಾಗ್ರಿಗಳನ್ನು ವಿತರಿಸಿ ನೆರವಾಗಿದ್ದಾರೆ. ಸುಲೋಚನಾ ಸುವರ್ಣ ಕ್ರಿಶ್ಚನ್ ಧರ್ಮದ ಐಜಿತ್ ಡಿಸೋಜ ಅವರನ್ನು ವಿವಾಹವಾಗಿ ಜೀವನ ನಡೆಸುತ್ತಿದ್ದರು. ಆಟೋ ಚಾಲಕನಾಗಿ ಗಂಡ ದುಡಿಯುತ್ತಿದ್ದರು. ಕೆಲವು ವರ್ಷದ ಹಿಂದೆ ಪಾರ್ಶ್ವವಾಯುವಿನಿಂದ ಸೊಂಟದ ಸ್ವಾಧೀನ ಕಳೆದುಕೊಂಡು ಎಳಲಾಗದೆ ಹಾಸಿಗೆ ಹಿಡಿದರು. ಸಂಸಾರ ರಥದ ಸಾರಥಿಯಾಗಿದ್ದ ಯಜಮಾನ ನೆಲ ಹಿಡಿದ ಮೇಲೆ ಹೆಂಡತಿ ಗಂಡನ ಶುಶ್ರೂಸೆ ನಡೆಸಲು ನಿಲ್ಲಬೇಕಾಯಿತು. ಆಕೆ ಹೊರಗಡೆ ಕೆಲಸಕ್ಕೆ ಹೋಗಲಾಗದ ಪರಿಸ್ಥಿತಿ ಎದುರಾಯಿತು. ಇತ್ತ ಬಂಧು ಬಳಗವೂ ಇಲ್ಲದೆ, ಆದಾಯ ಇಲ್ಲದೆ ದಂಪತಿಗಳ ಬದುಕು ನರಕಯಾತನೆಯಾಗಿದೆ. ದಂಪತಿಗಳ ನೆರವಿಗೆ ಸಂಘ ಸಂಸ್ಥೆಗಳು ಬರಬೇಕಾಗಿದೆ. ಮಾನವೀಯ ಮನಸ್ಸುಗಳು ಸ್ಪಂದಿಸಬೇಕಾಗಿದೆ. ತಮ್ಮ ನೋವನ್ನು ಯಾರಿಗೂ ಹೇಳದೆ, ಎಲ್ಲವನ್ನು ಎದುರಿಸಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿಗಳ ಕರುಣಾಜನಕ ಸ್ಥಿತಿ ಗಮನಿಸಿದ ಅನುಷಾ ದೇವಾಡಿಗ ಅವರು, ಒಳಕಾಡುವರಿಗೆ ಮೊದಲಾಗಿ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿದ ಒಳಕಾಡುವರು, ಮನೆಯಲ್ಲಿ ನಿಜಸ್ಥಿತಿ ಅರಿತು ಮೊದಲಾಗಿ ಹಸಿದಿರುವ ಹೊಟ್ಟೆಗೆ ಆಹಾರ ಸಾಮಾಗ್ರಿಗಳನ್ನು ಒದಗಿಸುವ ವ್ಯವಸ್ಥೆಗೊಳಿಸಿದರು. ಉದ್ಯಮಿ ಉದಯ ಕುಮಾರ್ ಒಂದು ತಿಂಗಳಿಗೆ ಬೇಕಾಗುವಷ್ಟು ಪಡಿತರ ಸಾಮಗ್ರಿ ಖರಿಧಿಸಿ ನೀಡಿ ಮಾನವೀಯತೆ ಮೆರೆದರು. #udupi #mangalore #spandanatv #kannadanews #news #spandana