У нас вы можете посмотреть бесплатно ಮಾಗಿ ಉಳುಮೆ- ಮಣ್ಣಿನ ಆರೋಗ್ಯ ಮತ್ತು ಹೆಚ್ಚಿನ ಇಳುವರಿಗೆ ಉತ್ತಮ ಮಾರ್ಗ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶೀರ್ಷಿಕೆ: ಮಾಗಿ ಉಳುಮೆ- ಮಣ್ಣಿನ ಆರೋಗ್ಯ ಮತ್ತು ಹೆಚ್ಚಿನ ಇಳುವರಿಗೆ ಉತ್ತಮ ಮಾರ್ಗ ಮಾಗಿ ಉಳುಮೆ ಎಂದರೆ ಹಿಂಗಾರಿ ಬೆಳೆಗಳ ಕಟಾವು ನಂತರ ಬೇಸಿಗೆಯ ಉಷ್ಣಾಂಶದಲ್ಲಿ (ಸಾಮಾನ್ಯವಾಗಿ ಫೆಬ್ರವರಿ - ಜೂನ್ ತಿಂಗಳಲ್ಲಿ) ಭೂಮಿಯನ್ನು ಉಳುಮೆ ಮಾಡಿ ಸೂರ್ಯನ ಕಿರಣಗಳಿಗೆ ಮೈಯೊಡ್ಡುವ ಪಾರಂಪರಿಕ ಮತ್ತು ವೈಜ್ಞಾನಿಕವಾಗಿ ಸಾಬೀತಾದ ಕೃಷಿ ಪದ್ಧತಿ. ಕರ್ನಾಟಕದಂತಹ ಮಳೆ ಅವಲಂಬಿತ ಪ್ರದೇಶಗಳಲ್ಲಿ, ಇದು ಅಂತ್ಯAತ ಮಹತ್ವದಾಗಿದ್ದು, ಮಣ್ಣಿನ ರಚನೆ, ನೀರು ಇಂಗುವಿಕೆ, ಅಂತರ್ಜಲ ಸಂರಕ್ಷಣೆಯೊAದಿಗೆ ಕಳೆ, ಕೀಟ ಮತ್ತು ರೋಗಗಳನ್ನು ನಿಯಂತ್ರಿಸಿ ಮುಂಗಾರು ಬೆಳೆಗಳ ಇಳುವರಿಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ. ಮಾಗಿ ಉಳುವೆ ಮಾಡುವ ಸಮಯ ಮತ್ತು ವಿಧಾನಗಳು ಕಾಲ: ಹಿಂಗಾರು ಬೆಳೆ ಕಟಾವು ಮಾಡಿದ ನಂತರ ಅಂದರೆ ಜನವರಿ - ಫೆಬ್ರುವರಿ ತಿಂಗಳಿAದ ಆರಂಭಿಸಿ ಏಪ್ರಿಲ್ ಮೇ ತಿಂಗಳ ಉಷ್ಣಾಂಶದಲ್ಲಿ ಮಾಡಬೇಕು. ಬೇಕಾಗುವ ಉಪಕರಣಗಳು: ಮರದ ನೇಗಿಲು, ಡಿಸ್ಕ್ ಪ್ಲೌ ಅಥವಾ ಚೀಸೆಲ್ ಪ್ಲೌ ಗಮನಿಸಬೇಕಾದ ಅಂಶಗಳು ಮಣ್ಣು ಹದವಾಗಿರಬೇಕು ಪೂರ್ತಿಯಾಗಿ ಒಣಗಿರಬಾರದು ಕಡಿಮೆ ತೇವಾಂಶವಿದ್ದು, ಉಳುಮೆಗೆ ಅನುಕೂಲವಾಗಿರಬೇಕು ಇಳಿಜಾರು ಪ್ರದೇಶವಿದ್ದರೆ ಭೂಮಿಗೆ ಅಡ್ಡಲಾಗಿ ಉಳುಮೆ ಮಾಡಬೇಕು ಮುಂಗಾರು ಮಳೆಯ ಮೊದಲು ಮಣ್ಣನ್ನು ಸಮತಟ್ಟಾಗಿ ಮಾಡಿ ಕೊಟ್ಟಿಗೆ ಗೊಬ್ಬರ ಹಾಕಿ ಹರಗಿ ಮಾಡಬೇಕು ಮಾಗಿ ಉಳುಮೆಯ ಪ್ರಯೋಜನಗಳು *ಮಣ್ಣಿನ ಕಣಗಳ ರಚನೆ: ಆಳವಾದ ಉಳುಮೆಯಿಂದ ಮಣ್ಣು ಸಡಿಲಗೊಂಡು ಮಣ್ಣಿನ ಕಣಗಳು ಬಿಡಿ ಬಿಡಿಯಾಗುವುದರಿಂದ ಗಾಳಿ ಮತ್ತು ನೀರಿನ ಸಂಚಾರ ಉತ್ತಮವಾಗಿ ಇಂಗಾಲದ ಡೈ ಆಕ್ಸೆöÊಡ್ ಅಂಶ ಕಡಿಮೆಯಾಗುತ್ತದೆ ನೀರಿನ ಸಂರಕ್ಷಣೆಯೊAದಿಗೆ ತೇವಾಂಶ ಹೆಚ್ಚಿಸುವುದು: ಮಣ್ಣಿನ ಕಣಗಳು ಬಿಡಿ ಬಿಡಿಯಾಗುವುದರಿಂದ ಅವುಗಳ ಮೇಲ್ಮೈ ಪ್ರದೇಶ ಹೆಚ್ಚಾಗಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಾಗುವುದರಿಂದ ನೀರಿನ ಹರಿಯುವಿಕೆ ಕಡಿಮಾಯಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗುತ್ತದೆ ಕಳೆ ನಿಯಂತ್ರಣ: ಆಳವಾಗಿ ಉಳುಮೆ ಮಾಡುವುದರಿಂದ ಭೂಮಿಯಲ್ಲಿರುವ ಕಳಗಳ ಬೀಜಗಳು ಮೇಲ್ಗಡೆ ಬಂದು, ಸೂರ್ಯನ ಕಿರಣಗಳಿಗೆ ಮೈಯೊಡ್ಡುವ ಮೂಲಕ ಅವುಗಳ ಮೊಳಕೆ ಶಕ್ತಿ ಕಡಿಮೆಗೊಂಡು ಮುಂದಿನ ಬೆಳೆಯಲ್ಲಿ ಕಳೆಗಳ ಬೆಳವಣಿಗೆ ಕಡಿಮೆಯಾಗುತ್ತದೆ ಕೀಟ ಮತ್ತು ರೋಗ ನಿಯಂತ್ರಣ: ಆಳವಾಗಿ ಉಳುಮೆ ಮಾಡುವುದರಿಂದ ಕೀಟಗಳ ಮೊಟ್ಟೆಗಳು ಮತ್ತು ಪೂತಕೀಟಗಳ (ಠಿuಠಿಚಿ) ಭೂಮಿ ಮೇಲೆ ಬರುವುದರಿಂದ ಪಕ್ಷಿಗಳಿಗೆ ಆಹಾರವಾಗಿ, ಮುಂದಿನ ಬೆಳೆಗಳಲ್ಲಿ ಅವುಗಳ ಸಂಖ್ಯೆ ಕಡಿಮೆಯಾಗವದರೊಂದಿಗೆ ಮುಂದಿನ ಬೆಳೆಯಲ್ಲಿ ಕೀಟದ ಭಾಗ ಕಡಿಮೆ ಆಗುತ್ತದೆ ಸೂಕ್ಷ್ಮ ಜೀವಿಗಳ ಚಟುವಟಿಕೆ: ಭೂಮಿಯ ಮೇಲ್ಮೆöÊ ಮಣ್ಣಿನ ಕೆಳಭಾಗದಲ್ಲಿ ವಾಸಿಸುವಂತಹ ಸೂಕ್ಷ್ಮ ಜೀವಿಗಳಿಗೆ ಗಾಳಿ ಮತ್ತು ಬೆಳಕಿನೊಂದಿಗೆ ನೀರು ಸಿಗುವುದರಿಂದ ಅವುಗಳ ಸಂಖ್ಯೆ ಹೆಚ್ಚಾಗಿ ಮುಂದಿನ ಬೆಳೆಗಳಿಗೆ ಪೋಷಕಾಂಶಗಳು ಸಿಗುವಂತೆ ಮಾಡುತ್ತವೆ. ಮಾಗಿ ಉಳುಮೆಯಿಂದ ಬೆಳೆಗಳ ಮೇಲಿನ ಪರಿಣಾಮ (ಹಿಂದೆ ಕೈಗೊಂಡ ಸಂಶೋಧನೆ ಮೂಲಕ ತಿಳಿದು ಬಂದ ಅಂಶಗಳು) ಮಾಗಿ ಉಳುಮೆಯಿಂದ ವಿವಿಧ ಕೃಷಿ ಅಧ್ಯಯನಗಳು, ಕರ್ನಾಟಕ ಮತ್ತು ಭಾರತದ ಇತರೆ ಭಾಗಗಳಲ್ಲಿ ಬೆಳೆಗಳ ಇಳುವರಿ ಗಣನೀಯವಾಗಿ ಹೆಚ್ಚಿದೆ ಎಂಬುದು ಕಂಡು ಬಂದಿದೆ. ಉದಾಹರಣೆಗೆ ಹೇಳುವುದಾದರೆ ರಾಗಿ ಬೆಳೆಯಲ್ಲಿ 15-30% ರಷ್ಟು ಇಳುವರಿಯನ್ನು ಹೆಚ್ಚಿಸಲು ಸಾಧ್ಯ. ಅದರಂತೆ ಜೋಳದಲ್ಲಿ (20-25%), ಶೆಂಗಾದಲ್ಲಿ (20%) ಮತ್ತು ಸೋಯಾ ಅವರೆಯಲ್ಲಿ (15%) ರಷ್ಟು ಕಂಡು ಬಂದಿದೆ. ಆದ್ದರಿAದ ಕರ್ನಾಟಕದಂತಹ ಮಳೆ ಅವಲಂಬಿತ ಮತ್ತು ಒಣ ಪ್ರದೇಶಗಳಲ್ಲಿ ಮಾಗಿ ಉಳುಮೆ ನಿಯಮಿತವಾಗಿ ಅಳವಡಿಸಿಕೊಳ್ಳುವುದು ಸುಸ್ಥಿರ ಕೃಷಿಗೆ ಅತ್ಯಗತ್ಯ. ಇದು ರೈತರಿಗೆ ಹೆಚ್ಚಿನ ಇಳುವರಿ ನೀಡುವುದಲ್ಲದೆ, ಮಣ್ಣಿನ ಫಲವತ್ತತೆಯನ್ನು ದೀರ್ಘಕಾಲದವರೆಗೆ ಕಾಪಾಡುವುದರೊಂದಿಗೆ ಪರಿಸರ ಸಂರಕ್ಷಣೆಗೆ ಸಹಾಯ ಮಾಡುತ್ತದೆ ಮತ್ತು ಭವಿಷ್ಯದ ಪೀಳಿಗೆಗೆ ಉತ್ತಮ ಭೂಮಿಯನ್ನು ಉಳಿಸಿಕೊಡುತ್ತದೆ. ಅದ್ದರಿಂದ ಪ್ರತಿ ರೈತನೂ ಮಾಗಿ ಉಳುಮೆಯನ್ನು ತಪ್ಪದೆ ಮಾಡಬೇಕು, ಏಕೆಂದರೆ "ಶ್ರೀಮಂತರ ಗೊಬ್ಬರಕ್ಕೆ, ಬಡವನ ಮಾಗಿ ಉಳುಮೆ" ಎಂಬ ಗಾದೆಯಂತೆ ಸಾಬೀತಾಗುತ್ತದೆ. ಸರಿಯಾದ ಸಮಯದಲ್ಲಿ, ಸರಿಯಾದ ಆಳದಲ್ಲಿ ಉಳುಮೆ ಮಾಡಿದರೆ ಇದು ಕೃಷಿಯಲ್ಲಿ ಗೇಮ್ ಚೇಂಜರ್ ಆಗುತ್ತದೆ ಎಂಬುದು ಸುಳ್ಳಾಗುವುದಿಲ್ಲ.