У нас вы можете посмотреть бесплатно ವಚನಾಂತರಂಗ ಮಾಲಿಕೆ 93: ಗುರು ಬಸವಣ್ಣನವರ 431-435 ವಚನ ಚಿಂತನ, ಭಕ್ತನ ಮಹೇಶ್ವರಸ್ಥಲ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ವಚನಾಂತರಂಗ ಮಾಲಿಕೆ 93: ಗುರು ಬಸವಣ್ಣನವರ 431-435 ವಚನ ಚಿಂತನ, ಭಕ್ತನ ಮಹೇಶ್ವರಸ್ಥಲ ಎಂಬತ್ತುನಾಲ್ಕು ಲಕ್ಷ ಮುಖದೊಳಗೊಂದೇ ಮುಖವಾಗಿ ಕಾಡಿ ನೋಡೆನ್ನನು, ಬೇಡಿ ನೋಡೆನ್ನನು: ಬೇಡದಿದ್ದರೆ, ಅಯ್ಯಾ, ನಿಮಗೆ ಪ್ರಮಥರಾಣೆ! ನೀನಾವ ಮುಖದಲ್ಲೂ ಬಂದು ಬೇಡಿದೊಡೀವೆ, ಕೂಡಲಸಂಗಮದೇವಾ. ಕಂದಿದೆನಯ್ಯಾ ಎನ್ನ ನೋಡುವರಿಲ್ಲದೆ; ಕುಂದಿದೆನಯ್ಯಾ ಎನ್ನ ನುಡಿಸುವರಿಲ್ಲದೆ; ಬಡವಾದೆನಯ್ಯಾ ಎನ್ನ ತನು, ಮನ, ಧನವ ಬೇಡುವರಿಲ್ಲದೆ? ಕಾಡುವ ಬೇಡುವ ಶರಣರ ತಂದು ಕಾಡಿಸು ಬೇಡಿಸಯ್ಯಾ ಕೂಡಲಸಂಗಮದೇವಾ. ವೇಷ ಅವಿಚಾರದಲ್ಲಿ ನಡೆಯಿತ್ತೆಂದು ಆಸುರದಲ್ಲಿ ಬಗುಳುವ ಕುನ್ನಿ, ನೀ ಕೇಳಾ: ಹರಿಯನೆ ದಾಸನ ವಸ್ತ್ರವ? ಉಣ್ಣನೆ ಚೆನ್ನಯ್ಯನ ಸಂಗಾತ? ಪರವಧುವ ಕೊಳ್ಳನೆ ಸಿಂಧುಬಲ್ಲಾಳನ? ಬೇಡನೆ ಸಿರಿಯಾಳನ ಮಗನ? ನಡೆವುದು ನುಡಿವುದು ಅವಿಚಾರವೆಂದು, ಭಾವ ವಿಭಾವವೆಂದು ಕಂಡೆನಾದರೆ ತಪ್ಪೆನ್ನದು, ಮೂಗ ಕೊಯಿ! ಕೂಡಲಸಂಗಮದೇವಾ. ನೀನಿಕ್ಕಿದ ಬೀಯದಲ್ಲಿ ವಂಚನೆಯುಳ್ಳರೆ ಸಂಗಾ, ನಿಮ್ಮ ತೊತ್ತುತನಕ್ಕೆ ದೂರವಯ್ಯಾ! ಕದ್ದು ತಿಂದರೆ ಕೈಹಿಡಿದೊಮ್ಮೆ ಬಡಿದು ತುಡುಗುಣಿತನವ ಬಿಡಿಸಯ್ಯಾ! ಜಂಗಮ ಮನೆಗೆ ಬಂದಲ್ಲಿ ಓಸರಿಸಿದರೆ ಹಿಡಿದು ಮೂಗ ಕೊಯಿಯಯ್ಯಾ! ಕೂಡಲಸಂಗಮದೇವಾ. ದೇವನಿಂತಹನೆಂದು ತೋರಿಕೊಡುವೆನು ಗಣಂಗಳಿಗೆ: ಬಲ್ಲಾಳನ ವಧುವ ಬೇಡಿದಾತನೀ ದೇವ! ದೇವನಿಂತಹನೆಂದು ತೋರಿಕೊಡುವೆನು ಗಣಂಗಳಿಗೆ: ದಾಸನ ವಸ್ತ್ರವ ಬೇಡಿದಾತನೀ ದೇವ! ದೇವನಿಂತಹನೆಂದು ತೋರಿಕೊಡುವೆನು ಗಣಂಗಳಿಗೆ: ಸಿರಿಯಾಳನ ಮಗನ ಬೇಡಿದಾತನೀ ದೇವ! ಕೂಡಲಸಂಗಮದೇವ ಜಂಗಮ ಮುಖಲಿಂಗವಾಗಿ, ಕಾಡಿ ನೋಡುವ, ಬೇಡಿ ನೋಡುವ!