У нас вы можете посмотреть бесплатно ವಚನಾಂತರಂಗ ಮಾಲಿಕೆ 99: ಗುರು ಬಸವಣ್ಣನವರ 459-463 ವಚನ ಚಿಂತನ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ವಚನಾಂತರಂಗ ಮಾಲಿಕೆ 99: ಗುರು ಬಸವಣ್ಣನವರ 459-463 ವಚನ ಚಿಂತನ ಅಯ್ಯಾ, ನಿಮ್ಮ ಶರಣರ ದಾಸೋಹಕ್ಕೆ ಎನ್ನ ತನುಮನಧನವಲಸದಂತೆ ಮಾಡಯ್ಯಾ, ತನು ದಾಸೋಹಕ್ಕುಬ್ಬುವಂತೆ ಮಾಡು, ಮನ ದಾಸೋಹಕ್ಕೆ ಲೀಯವಹಂತೆ ಮಾಡು, ಧನ ದಾಸೋಹಕ್ಕೆ ಸವೆದು ನಿಮ್ಮ ಶರಣರ ಪ್ರಸಾದದಲ್ಲಿ ನಿರಂತರ ಆಡಿ, ಹಾಡಿ, ನೋಡಿ, ಕೂಡಿ, ಭಾವಿಸಿ, ಸುಖಿಸಿ, ಪರಿಣಾಮಿಸುವಂತೆ ಮಾಡು, ಕೂಡಲಸಂಗಮದೇವಾ. ಹಾರುವ ಹಾರುವನಪ್ಪೆ, ಸದ್ಭಕ್ತರೆನ್ನುವರೆಂದು; ಹಾರುವ ಹಾರುವನಪ್ಪೆ, ಶರಣರು ಎನ್ನುವರೆನ್ನುವರೆಂದು, ಕೂಡಲಸಂಗನ ಶರಣರು ತಮ್ಮೊಕ್ಕುದನಿಕ್ಕಿ ಸಲಹುವರಾಗಿ. ಒಕ್ಕುದ ಮಿಕ್ಕುದನುಂಡು ಕಿವಿಕಿವಿದಾಡುವೆ: ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು, ಕೂಡಲಸಂಗನ ಶರಣರ ಮನೆಯ ಭಕ್ತಿಯ ಮರುಳ ನಾನು. ಗುರು ಲಿಂಗ ಜಂಗಮದಿಂದೆ ಪಾದೋದಕ ಪ್ರಸಾದವಾಯಿತ್ತು. ಆ ಭಾವನೆ ಮಹಾಪ್ರಸಾದವಾಗಿ- ಎನಗೆ ಬೇರೆ ಪ್ರಸಾದವೆಂಬುದಿಲ್ಲಾ, ಕೂಡಲಸಂಗಮದೇವಾ. ಅಹುದೆಂದರಿಯೆ, ಆಗದೆಂದರಿಯೆ, ಆದಿಯ ಪಥವ ತೋರಲರಿಯೆ, ಸತ್ಯವನರಿಯೆ, ಸಹಜವನರಿಯೆ, ಸಜ್ಜನ ಶುದ್ಧವ ಮುನ್ನವೇ ಅರಿಯೆ! ನಿಮ್ಮ ಶರಣರ ಒಕ್ಕುದನುಂಡಿಪ್ಪೆ, ಕೂಡಲಸಂಗಮದೇವಾ.