У нас вы можете посмотреть бесплатно ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ | ನೂತನ ಧ್ವಜಸ್ಥಂಭ ಪ್ರತಿಷ್ಠೆ | PADUBIDRI | или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಪಡುಬಿದ್ರಿ ದೇಗುಲ : ನೂತನ ಧ್ವಜಸ್ತಂಭದ ಪ್ರತಿಷ್ಠಾಪನೆ (Padubidri Temple: Installation of a new flagpole) ಪಡುಬಿದ್ರಿ ದೇಗುಲ : ನೂತನ ಧ್ವಜಸ್ತಂಭದ ಪ್ರತಿಷ್ಠಾಪನೆ ತಂತ್ರಿಗಳಾದ ವೇ. ಮೂ. ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಸುರೇಂದ್ರ ಉಪಾಧ್ಯಾಯರವರ ನೇತೃತ್ವ (Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ನೂತನ ಧ್ವಜಸ್ತಂಭದ ಸ್ಥಾಪನೆಯು ವಿದ್ಯುಕ್ತವಾಗಿ ಶ್ರೀ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಹಾಗೂ ವೇದಮೂರ್ತಿ ಸುರೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಸಂಪನ್ನಗೊಂಡಿತು. ಜೀರ್ಣೕೊದ್ಧಾರ ಹಾಗೂ ಬ್ರಹ್ಮಕಲಶೋತ್ಸವಾದಿಗಳ ಹೊಸ್ತಿಲಲ್ಲಿರುವ ಶ್ರೀ ದೇಗುಲದಲ್ಲಿ ದೇವತಾ ಪ್ರಾರ್ಥನೆಯ ಬಳಿಕ ರತ್ನನ್ಯಾಸ ಹೋಮ, ನವರತ್ನ ನ್ಯಾಸಗಳನ್ನು ಧ್ವಜಸ್ತಂಭದ ತಳಭಾಗದಲ್ಲಿ ರಾಧಾಕೃಷ್ಣ ಉಪಾಧ್ಯಾಯ ಅವರು ನೆರವೇರಿಸಿದರು. ಈವರೆಗೆ ಜಲಾಧಿವಾಸ, ತೈಲಾಧಿವಾಸ ಪ್ರಕ್ರಿಯೆಗಳನ್ನು ಪೂರೈಸಿರುವ ಧ್ವಜಸ್ತಂಭವನ್ನು ಕ್ರೇನ್ ಬಳಸಿ ದೇಗುಲದ ಹೊರಾಂಗಣಕ್ಕೆ ತರಲಾಯಿತು. ತಂತ್ರಿವರ್ಯರು ತೀರ್ಥ ಪ್ರೋಕ್ಷಣೆಯೊಂದಿಗೆ ಧ್ವಜಸ್ತಂಭವನ್ನು ಮೊದಲಾಗಿ ಶುದ್ಧೀಕರಿಸಿದರು. ಬಳಿಕ ದೇಗುಲದ ಪ್ರಧಾನ ದ್ವಾರದ ಮುಂಬದಿಯಲ್ಲಿ ಭಕ್ತ ಜನರ ಜಯಘೋಷಗಳ ನಡುವೆ ಕಾಷ್ಟ ಶಿಲ್ಪಿ ಮಾಧವ ಆಚಾರ್ಯರವರ ಮುಂದಾಳುತ್ವದಲ್ಲಿ ಸುಮಾರು ಐದು ಅಡಿಗಳಷ್ಟು ಆಳದ ತಳಪಾಯದಲ್ಲಿ ಧ್ವಜಸ್ತಂಭವನ್ನು ಸ್ಥಾಪಿಸಲಾಯಿತು. ದೇವಳದ ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಜೀರ್ಣೕೊದ್ಧಾರ ಸಮಿತಿಯ ಗೌರವಾಧ್ಯಕ್ಷ ಕೊರ್ನಾಯ ಪದ್ಮನಾಭ ರಾವ್, ಉಪಾಧ್ಯಕ್ಷ ಪಿ. ರವೀಂದ್ರನಾಥ ಜಿ. ಹೆಗ್ಡೆ, ಕಾರ್ಯದರ್ಶಿಗಳಾದ ನಡ್ಸಾಲು ಗುತ್ತು ಶ್ರೀನಾಥ್ ಹೆಗ್ಡೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶ್ರೀ ದೇಗುಲದ ಅರ್ಚಕರಾದ ಎರ್ಮಾಳು ಗುರುರಾಜ ಭಟ್, ಹೆಜಮಾಡಿ ಪದ್ಮನಾಭ ಭಟ್, ಜಯ ಶೆಟ್ಟಿ ಪದ್ರ, ವೈ. ಸುಕುಮಾರ್, ಸಹ ಕಾರ್ಯದರ್ಶಿ ನವೀನ್ಚಂದ್ರ ಜೆ. ಶೆಟ್ಟಿ, ವೈ. ಎನ್. ರಾಮಚಂದ್ರ ರಾವ್, ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಕುರ್ಕಿಲ್ಬೆಟ್ಟು ಪುಣೆ, ನವೀನ್ ಎನ್. ಶೆಟ್ಟಿ, ಪೇಟೆಮನೆ ಅನಿಲ್ ಕುಮಾರ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ಮಾಧವ ಶೆಟ್ಟಿ, ಸರಾಫ್ ಸಂಪತ್ ಆಚಾರ್ಯ, ರಮಾಕಾಂತ ರಾವ್, ಪ್ರಕಾಶ್ ದೇವಾಡಿಗ, ಪಿ. ಕೆ. ಸದಾನಂದ, ಭಾಸ್ಕರ ಕೆ., ಪ್ರಶಾಂತ್ ಶೆಣೈ, ಮುರಳೀನಾಥ ಶೆಟ್ಟಿ, ವಿಶುಕುಮಾರ್ ಶೆಟ್ಟಿವಾಲ್, ಕೃಷ್ಣ ಶೆಟ್ಟಿ ಕಂಕಣಗುತ್ತು, ಅಶೋಕ್ ಸಾಲ್ಯಾನ್, ಕುಮಾರ್ ಸಾಲ್ಯಾನ್, ಅಶೋಕ್ ಬಂಗೇರ, ಅನಂತಪಟ್ಟಾಭಿ ರಾವ್, ವಿಠಲ ಬಂಗೇರ, ಶಶಿ, ಹಾಗೂ ನೂರಾರು ಭಕ್ತಾಧಿಗಳು ಧ್ವಜ ಪ್ರತಿಷ್ಠಾಪನೆಯ ಸಂದರ್ಭ ಉಪಸ್ಥಿತರಿದ್ದರು.