У нас вы можете посмотреть бесплатно 9.ಕಟ್ಟುವೆವು ನಾವು-ಗೋಪಾಲಕೃಷ್ಣ ಅಡಿಗ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹೊಸಗನ್ನಡ ಕಾವ್ಯ, ನವೋದಯ ಸಂಪ್ರದಾಯ ಹೊರಳಿ, ಬದಲಾದ ರಾಜಕೀಯ ಅವಸ್ಥಾಂತರದ ಸಂದರ್ಭದಲ್ಲಿ ಕಾವ್ಯದಲ್ಲಿ ಹೊಸತನ ತರುವ ತುಡಿತ, ಕಾವ್ಯ ಮಣ್ಣಿನ ವಾಸನೆಯನ್ನು ಹೊಂದಿ ವಾಸ್ತವಕ್ಕೆ ಮುಖಮಾಡಿ ನಿಲ್ಲಬೇಕು ಎಂಬ ನಿಲುವು, ನವ್ಯ ಕಾವ್ಯದ ಪ್ರವೇಶಕ್ಕೆ ನಾಂದಿ ಹಾಡಿತು. ಗೋಪಾಲಕೃಷ್ಣ ಅಡಿಗರು ನವ್ಯ ಕಾವ್ಯ ಸಂಪ್ರದಾಯವನ್ನು ಹೊಸಗನ್ನಡ ಸಾಹಿತ್ಯದಲ್ಲಿ ದೃಢವಾಗಿ ನಿಲ್ಲಿಸಿದ ರೂವಾರಿಗಳಲ್ಲಿ ಆದ್ಯರು, ಮತ್ತು ಪ್ರಮುಖರು. ಅಡಿಗರ ಪ್ರಾರಂಭದ ಕವನ ಸಂಕಲನಗಳಲ್ಲಿ, ನವೋದಯದ ಆದರ್ಶಪರತೆ, ಉತ್ಸಾಹ, ನಿಸರ್ಗದಲ್ಲಿ ದೈವವನ್ನು ಕಾಣುವ ಆಧ್ಯಾತ್ಮಿಕತೆ ಕಾಣುತ್ತೇವೆ. ನಂತರದಲ್ಲಿ ಅಡಿಗರು ಸ್ವಾತಂತ್ರ್ಯೋತ್ತರ ಕಾಲಘಟ್ಟದ ಬದಲಾದ ಸಂದರ್ಭದ, ನಗರ ಮತ್ತು ಯಾಂತ್ರಿಕ ಪರಿಸರ, ಮಾನವ ಸಂಬಂಧಗಳ ವಿಘಟನೆಯ ನಾಗರಿಕ ಜೀವನ, ಭಾರತದ ರಾಜಕೀಯ, ಸಾಂಸ್ಕೃತಿಕ ವಲಯಗಳ ನಿರಾಶದಾಯಕ ಪರಿಸ್ಥಿತಿಯನ್ನು ಚಿತ್ರಿಸುವ, ಭಾವಾತಿರೇಕವಿಲ್ಲದ ವಸ್ತುನಿಷ್ಠ ಅವಲೋಕನಕ್ಕೆ ತಮ್ಮ ಕಾವ್ಯವನ್ನು ಒಗ್ಗಿಸಿಕೊಂಡರು. ಆರಂಭದ ಅವರ ಎರಡು ಕವನ ಸಂಕಲನಗಳು ನವೋದಯ ಕಾವ್ಯ ಸಂಪ್ರದಾಯದ ಆದರ್ಶದ ಹಿನ್ನೆಲೆಯಲ್ಲಿ ರಚಿತವಾಗಿದ್ದರೆ, ಚಂಡೆ ಮದ್ದಳೆ ಕವನ ಸಂಕಲನದ ನಂತರದ ಅವರ ಕಾವ್ಯಗಳು ನವ್ಯ ಸಂಪ್ರದಾಯಕ್ಕೆ ತಮ್ಮನ್ನು ತಾವು ತೆರೆದುಕೊಂಡಿವೆ. ನವ್ಯಕಾವ್ಯ ಸಂಪ್ರದಾಯಕ್ಕೆ ನಾಂದಿ ಹಾಡಿದ ಅಡಿಗರು ತಮ್ಮ ಕಾವ್ಯಗಳ ಮೂಲಕ ಹೊಸ ಛಂದಸ್ಸು, ಹೊಸ ವಸ್ತು, ಹೊಸ ಭಾಷೆ, ಹೊಸ ದಾಟಿ, ಹೊಸ ಧೋರಣೆ, ಹೊಸ ರೂಪಕಗಳನ್ನು ಕನ್ನಡಕ್ಕೆ ತಂದುಕೊಟ್ಟು ಜನಾಂಗದ ಕಣ್ಣು ತೆರೆಸಿದ ಭಾರತದ ಅತ್ಯಂತ ಶ್ರೇಷ್ಠ ಕವಿ ಎಂಬ ಹಿರಿಮೆಯನ್ನು ಕೂಡ ಪಡೆದರು. ಗೋಪಾಲಕೃಷ್ಣ ಅಡಿಗರು ಕುಂದಾಪುರದ ಮೊಗೇರಿ ಎನ್ನುವ ಹಳ್ಳಿಯಲ್ಲಿ ಹುಟ್ಟಿದರು. ಕುಮಾರವ್ಯಾಸ ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ ಇವುಗಳನ್ನು ಕೇಳುತ್ತಾ ಹಾಗೂ ಯಕ್ಷಗಾನ ಬಯಲಾಟವನ್ನು ನೋಡುತ್ತಾ, ಅದರಲ್ಲಿ ಭಾಗವಹಿಸುತ್ತಾ ಬೆಳೆದರು. ಬೇರೆಬೇರೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಅನೇಕ ಹುದ್ದೆಗಳನ್ನು ಅಡಿಗರು ನಿರ್ವಹಿಸಿದರು. ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಲೆಕ್ಚರರ್, ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಇಂಗ್ಲಿಷ್ ರೀಡರ್, ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಪ್ರಿನ್ಸಿಪಾಲ್, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಿನ್ಸಿಪಾಲ್, ನ್ಯಾಷನಲ್ ಬುಕ್ ಟ್ರಸ್ಟ್ ನಲ್ಲಿ ಡೆಪ್ಯುಟಿ ಡೈರೆಕ್ಟರ್, ಸಿಮ್ಲಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನಲ್ಲಿ ಸಂದರ್ಶಕ ಫೆಲೋ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಮೆರಿಕದ ಬೇರೆಬೇರೆ ವಿಶ್ವವಿದ್ಯಾಲಯಗಳಲ್ಲಿ ಭಾಷಣ, ಕಾವ್ಯ ವಾಚನ ಮಾಡಿದ್ದಾರೆ. ಅಡಿಗರ ಮೊದಲ ಕವನ ಸಂಕಲನ ಭಾವತರಂಗ. ನಂತರ, ಕಟ್ಟುವೆವು ನಾವು, ನಡೆದು ಬಂದ ದಾರಿ, ಚಂಡೆ ಮದ್ದಳೆ, ಭೂಮಿಗೀತ, ವರ್ಧಮಾನ, ಇದನ್ನು ಬಯಸಿರಲಿಲ್ಲ, ಮೂಲಕ ಮಹಾಶಯರು, ಬತ್ತಲಾರದ ಗಂಗೆ, ಚಿಂತಾಮಣಿಯಲ್ಲಿ ಕಂಡ ಮುಖ, ಸುವರ್ಣ ಪುತ್ತಳಿ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಬಾ ಇತ್ತ ಇತ್ತ ಎಂಬ ಕವನ ಸಂಕಲನ, ಅವರ ಮರಣೋತ್ತರ ಪ್ರಕಟಣೆ. ಅಡಿಗರು ಮಣ್ಣಿನ ವಾಸನೆ, ವಿಚಾರ ಪಥ, ಕನ್ನಡದ ಅಭಿಮಾನ, ನಮ್ಮ ಶಿಕ್ಷಣ ಕ್ಷೇತ್ರ ಮೊದಲಾದ ವಿಚಾರ ವಿಮರ್ಶೆ ಕೃತಿಗಳನ್ನು ಬರೆದಿದ್ದಾರೆ. ಸುವರ್ಣ ಕೀಟ, ಜನತೆಯ ಶತ್ರು, ಭೂಗರ್ಭ ಯಾತ್ರೆ, ರೈತರ ಹುಡುಗಿ, ಹುಲ್ಲಿನ ದಳಗಳು, ಇತಿಹಾಸ ಚಕ್ರ, ಕಾವ್ಯ ಜಗತ್ತು ಮೊದಲಾದ ಅನುವಾದ ಕೃತಿಗಳನ್ನು ಕೂಡ ರಚಿಸಿದ್ದಾರೆ. ನೆನಪಿನ ಗಣಿಯಿಂದ ಇವರ ಆತ್ಮಕಥನ. ಹೊಸಗನ್ನಡ ಸಾಹಿತ್ಯದ ಅತ್ಯಂತ ವಿಶಿಷ್ಟ ಹಾಗೂ ಮೇರು ಪ್ರತಿಭೆಯಾದ ಹಾಗೂ ಅತ್ಯುತ್ತಮ ಕವಿಯಾದ ಗೋಪಾಲಕೃಷ್ಣ ಅಡಿಗರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಪ್ರಶಸ್ತಿ, ರಾಜ್ಯ ಮತ್ತು ಕೇಂದ್ರ ಅಕಾಡೆಮಿ ಪ್ರಶಸ್ತಿ, ಕುಮಾರನ್ ಆಶಾನ್ ಪ್ರಶಸ್ತಿ, ಕಬೀರ್ ಸಮ್ಮಾನ್ ಪ್ರಶಸ್ತಿ, ಮರಣೋತ್ತರವಾಗಿ ಪಂಪ ಪ್ರಶಸ್ತಿ ಲಭಿಸಿದೆ. ಸ್ವಾತಂತ್ರ್ಯೋತ್ತರ ಭಾರತದ ಅತ್ಯಂತ ಪ್ರತಿಭಾಶಾಲಿ ಕವಿಯಾಗಿ, ಸ್ವಾತಂತ್ರ್ಯ ಸಂದರ್ಭದಲ್ಲಿ, ಭವಿಷ್ಯ ಭಾರತದ ಬಗೆಗೆ ನಮ್ಮ ದೇಶದ ಜನತೆ ಇಟ್ಟುಕೊಂಡಂತ ಕನಸು, ಆದರ್ಶ, ಭರವಸೆ, ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅಂದುಕೊಂಡಂತೆ ನಡೆಯದೆ ಹುಸಿಹೋದವು ಎಂದು ಭಾವಿಸುವ ಅಡಿಗರು, ನವೋದಯದ ಆದರ್ಶ ಪರದೆಯನ್ನು ಸರಿಸಿ ನವ್ಯದ ದಾರಿಗೆ ಹೊರಳಿಕೊಳ್ಳುತ್ತಾರೆ ಮೊದಲು ಹೇಳಿರುವಂತೆ, ಅಡಿಗರು ನವೋದಯ ಸಂಪ್ರದಾಯದಲ್ಲಿ ಭಾವತರಂಗ ಮತ್ತು ಕಟ್ಟುವೆವು ನಾವು ಎಂಬ ಎರಡು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಪ್ರಸ್ತುತ ಕಟ್ಟುವೆವು ನಾವು ಎಂಬ ಕವನ ಅವರ ಇದೇ ಹೆಸರಿನ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಈ ಕವನ ಸಂಕಲನ ೧೯೪೮ ರಲ್ಲಿ ಪ್ರಕಟಗೊಂಡಿತು. ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ರಚನೆಯಾದ ಈ ಕವನ, ಸ್ವತಂತ್ರಗೊಂಡ ಭಾರತದ ಕಟ್ಟುವಿಕೆಗೆ ಸಂಬಂಧಪಟ್ಟಂತೆ ಹೊಸ ಉತ್ಸಾಹ, ಹುಮ್ಮಸ್ಸು, ಭರವಸೆ, ಆದರ್ಶ, ಹಾಗೆಯೇ ಅದು ಎದುರಿಸುತ್ತಿರುವ ಕೊರತೆಗಳನ್ನು ನಿವಾರಿಸಿ, ಮುಂದೆ ಹೊಸ ಭಾರತವನ್ನು ಕಟ್ಟಬೇಕಾದ, ಕಾಣ್ಕೆಯೊಂದನ್ನು ಮುಂದಿಡುತ್ತದೆ.