У нас вы можете посмотреть бесплатно ಕಳೆದ 11 ವರ್ಷಗಳಲ್ಲಿ ರೈಲ್ವೆ ಕ್ಷೇತ್ರದಲ್ಲಿ ಅಗಾಧ ಪ್ರಗತಿ ; ಅಮೃತ್ ಭಾರತ್ ಎಕ್ಸ್ ಪ್ರೆಸ್ ಸೇವೆ ಆರಂಭ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕಳೆದ 11 ವರ್ಷಗಳಲ್ಲಿ ರೈಲ್ವೆ ಕ್ಷೇತ್ರದಲ್ಲಿ ಅಗಾಧ ಪ್ರಗತಿಯಾಗಿದೆ. ಮಧ್ಯಮ ವರ್ಗ ಮತ್ತು ಸಾಮಾನ್ಯ ಜನರಲ್ಲಿ ಜನಪ್ರಿಯ ರೈಲು ಎಂದು ವಿಶಿಷ್ಟ ಗುರುತನ್ನು ಗಳಿಸಿರುವ ಅಮೃತ್ ಭಾರತ್ ಎಕ್ಸ್ ಪ್ರೆಸ್, ಪ್ರಸ್ತುತ ದೇಶಾದ್ಯಂತ 12 ಸೇವೆಗಳನ್ನು ನಿರ್ವಹಿಸುತ್ತಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದು ರಾಜ್ಯಸಭೆಗೆ ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ದೇಶದಲ್ಲಿ, ನಿಗದಿತ ಸಮಯದ ಮಿತಿಯೊಳಗೆ ಬರುವ ರೈಲುಗಳ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ. ಶೇಕಡಾ 77 ರಷ್ಟು ಸಮಯಪಾಲನೆ ಸಾಧಿಸಲಾಗಿದ್ದು, 24 ರೈಲ್ವೆ ವಿಭಾಗಗಳು ಶೇಕಡಾ 90 ಕ್ಕಿಂತ ಹೆಚ್ಚು ಸಮಯಪಾಲನೆಯನ್ನು ದಾಖಲಿಸಿವೆ ಎಂದರು. ರೈಲ್ವೆ ತನ್ನ ವಿಶಾಲ ಜಾಲದ ಕಾರ್ಯಕ್ಷಮತೆಯನ್ನು ಸುಧಾರಿಸಲು ಬಹು ತಂತ್ರಗಳನ್ನು ಅಳವಡಿಸಿಕೊಂಡಿದೆ. ಮೂಲಸೌಕರ್ಯ ಮತ್ತು ತಂತ್ರಜ್ಞಾನದಲ್ಲಿ ಅಗಾಧ ಪ್ರಗತಿ ಸಾಧಿಸುತ್ತಿದೆ. 2026-27ರ ವೇಳೆಗೆ ಮುಂಬೈ-ಅಹಮದಾಬಾದ್ ಬುಲೆಟ್ ರೈಲು, ವಂದೇ ಭಾರತ್ ಸ್ಲೀಪರ್ ರೈಲುಗಳು, 9 ಸಾವಿರದ 700 ಕಿಲೋ ಮೀಟರ್ಗೂ ಹೆಚ್ಚು ಹೊಸ ಮಾರ್ಗಗಳು ಮತ್ತು 52 ವಾರಗಳಲ್ಲಿ 52 ಸುಧಾರಣೆಗಳ ಮೂಲಕ ರೈಲ್ವೆ ಜಾಲದ ಆಧುನೀಕರಣ ವೇಗ ಪಡೆದಿದೆ ಎಂದರು. ರೈಲ್ವೆ ಅಭಿವೃದ್ಧಿಗಾಗಿ ಬಜೆಟ್ನಲ್ಲಿ ವಿಶೇಷ ಅನುದಾನವನ್ನು ಮೀಸಲು ಇಡಲಾಗಿದೆ. ಜಪಾನ್ ಸೇರಿದಂತೆ ವಿವಿಧ ದೇಶಗಳ ರೈಲ್ವೆ ಕಾರ್ಯಗಳನ್ನು ಪರಿಶೀಲಿಸಿ, ಭಾರತದಲ್ಲಿಯೂ ರೈಲ್ವೆಯನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು. ಇದಕ್ಕೂ ಮುನ್ನ ನಡೆದ ಶೂನ್ಯವೇಳೆಯಲ್ಲಿ, ಬಿಜೆಪಿ ಸಂಸದ ಸದಾನಂದ ಮ್ಹಾಲು ಶೇಟ್ ಅವರು, ವನ್ಯಜೀವಿಗಳ ಒಳನುಗ್ಗುವಿಕೆಯಿಂದ ರೈತರಿಗೆ ಸಮಸ್ಯೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ, ರೈತರ ಶಾಶ್ವತ ರಕ್ಷಣೆಗೆ ಸೂಕ್ತ ರೀತಿಯಲ್ಲಿ ಬೇಲಿ ಹಾಕುವ ಯೋಜನೆ ರೂಪಿಸುವಂತೆ ಆಯಾ ರಾಜ್ಯಗಳ ಅರಣ್ಯ ಇಲಾಖೆಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಒದಗಿಸುವಂತೆ ಅವರು ಸರ್ಕಾರವನ್ನು ವಿನಂತಿಸಿದರು. "ವನ್ಯಜೀವಿಗಳ ರಕ್ಷಣೆ ಮತ್ತು ರೈತರ ಉಳಿವಿನ ನಡುವೆ ಸಮತೋಲನ ಇರಬೇಕಾಗಿದೆ. ಆದರೆ ಇಂದು ಪರಿಸ್ಥಿತಿ ಮಿತಿ ಮೀರಿದ್ದು, ವನ್ಯಜೀವಿಗಳಿಂದ ರೈತರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದರು. ಆಪ್ ಸಂಸದೆ ಸ್ವಾತಿ ಮಲಿವಾಲ್, ಆರೋಗ್ಯ ವಿಮಾ ಕಂಪೆನಿಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಶೋಷಣೆಯ ಬಗ್ಗೆ ಮಾತನಾಡಿದರು. ಕೇಂದ್ರ ಸರ್ಕಾರವು, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಬೇಕು, ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಿಸಬೇಕು ಎಂದು ಆಗ್ರಹಿಸಿದರು. ದಿವ್ಯಾಂಗರಿಗೆ ವಿಶೇಷ ವಿಮಾ ಸೌಲಭ್ಯ ನೀಡುವತ್ತ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಕೇಳಿಕೊಂಡರು. #LiveDDChandanaNews #DDChandanaNews #DDChandana #DDKannada