У нас вы можете посмотреть бесплатно ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀಕ್ಷೇತ್ರ ಇಂದ್ರಾಣಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕರ್ನಾಟಕ ರಾಜ್ಯದ, ಉಡುಪಿ ಜಿಲ್ಲೆಯ, ,"ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ" "ಶ್ರೀಕ್ಷೇತ್ರ ಇಂದ್ರಾಣಿ". ಅತಿ ಪುರಾತನವಾದ ಕಾರ್ಣಿಕವಾದಂತಹ ಶ್ರೀಕ್ಷೇತ್ರವು, ತ್ರೇತಾಯುಗ ಕಾಲದಿಂದಲೂ ಕೂಡ ಇತ್ತು ಎನ್ನುವುದು ಇತಿಹಾಸ. ಇಂದ್ರನ ಆಸ್ಥಾನದಲ್ಲಿ ಇಂದ್ರ ಹಾಗೂ ಶಚಿದೇವಿ ಜೊತೆಯಾಗಿರುವಂತಹ ಸಂದರ್ಭದಲ್ಲಿ, ನಾಟ್ಯ ಮಾಡುತ್ತಿರುವಂತಹ ಊರ್ವಶಿಯ ತೊಡೆಯ ಕಡೆ ಇಂದ್ರನ ಗಮನ ಹೋದಾಗ, ಶಚಿದೇವಿಗು ಇಂದ್ರನಿಗೂ ವಿರಸ ಉಂಟಾಗಿ, ಅಲ್ಲಿಂದ ಮುನಿಸಿಕೊಂಡು ಹೊರಟು ಹೋಗುತ್ತಾಳೆ. ಮಾರ್ಗಮಧ್ಯದಲ್ಲಿ ನಾರದ ಮಹರ್ಷಿಗಳನ್ನು ಕಂಡು, ಅವರಲ್ಲಿ ತನ್ನ ಕಷ್ಟವನ್ನು ತೋಡಿಕೊಂಡಾಗ, ಭೂಲೋಕದಲ್ಲಿ ವೇದಾಚಲ ಪರ್ವತ ಇದೆ, ವೇದಾಚಲ ಸರೋವರವು ಕೂಡ ಇದೆ. ಅಲ್ಲಿ ಚವನ ಮಹರ್ಷಿಗಳು ತಪೋನಿರತರಾಗಿದ್ದು, ಅಲ್ಲಿ ಹೋಗಿ ನೀನು ತಪಸ್ಸನ್ನಾಚರಿಸಿದಲ್ಲಿ ನೆಮ್ಮದಿಯನ್ನು ಪಡೆಯಬಹುದು ಎನ್ನುವುದಾಗಿ ನಾರದ ಮಹರ್ಷಿಗಳು ತಿಳಿಸುತ್ತಾರೆ. ಹಾಗೆ ಭೂಲೋಕಕ್ಕೆ ಇಳಿದ ಶಚಿದೇವಿಯು ಅಲ್ಲಿ ತಪೋನಿರತರಾಗಿದ್ದು, ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುತ್ತಾಳೆ. ಚವನ ಮಹರ್ಷಿಗಳ ತಪೋಬಲ ದಿಂದಾಗಿ ಐದು ದುರ್ಗೆಯರು ಇಲ್ಲಿ ನೆಲೆಯಾಗಿ ನಿಲ್ಲುತ್ತಾರೆ. ಇಂದ್ರನು ನಾರದನನ್ನು ಸಂಧಿಸಿ ಶಚೀ ದೇವಿಯ ಬಗ್ಗೆ ವಿಚಾರಿಸಿದಾಗ ಭೂಲೋಕದಲ್ಲಿರುವ ವೇದಾಚಲ ಪರ್ವತದಲ್ಲಿ ತಪೋನಿರತಳಾಗಿದ್ದಾಳೆ ಎನ್ನುವ ವಿಚಾರ ತಿಳಿದಂತಹ ಇಂದ್ರನು, ಭೂಲೋಕಕ್ಕೆ ಬಂದು ಶಚೀದೇವಿ ಯಲ್ಲಿ ಪುನಃ ಸ್ವರ್ಗಕ್ಕೆ ಬರಲು ಕೇಳಿಕೊಳ್ಳುತ್ತಾನೆ.. ಮುಂದೆ ಈ ಕ್ಷೇತ್ರವು ಇಂದ್ರಾಣಿ ಪಂಚದುರ್ಗಾಪರಮೇಶ್ವರಿ ಎನ್ನುವುದಾಗಿ ಜನಮಾನಸದಲ್ಲಿ ನೆಲೆಯಾಗಿ ನಿಲ್ಲುತ್ತದೆ. ಲಕ್ಷ್ಮಿ ಸ್ವರೂಪದಲ್ಲಿರುವ ದುರ್ಗಾದೇವಿಯು ಭಕ್ತರನ್ನು ಹರಸುತ್ತಿದ್ದಾಳೆ. Location : https://maps.app.goo.gl/jwpAFgQPJLYSF... #karnataka #travel #durgaparameshwaritemple #indrani #udupitemple #karavalipeople #history #historicaltemples