У нас вы можете посмотреть бесплатно ಹಲಗೂರಿನ ವಿದ್ಯಾಧಾರೆಇಂಟರ್ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವದಸಂಭ್ರಮ-ಮನಸೆಳೆದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ನೃತ್ಯ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ನಾವು ಬದ್ಧರಿದ್ದೇವೆ,ವಿದ್ಯಾಧಾರೆ ಶಾಲೆಯ ಸಂಸ್ಥಾಪಕ ಹೆಚ್. ವಿ.ಅಶ್ವಿನ್ ಕುಮಾರ್ ಹೇಳಿಕೆ ವಿದ್ಯಾಧಾರೆ ಶಾಲಿಯ ವಾರ್ಷಿಕೋತ್ಸವದಲ್ಲಿ ಬಿಗ್ ಬಾಸ್ ವಿನ್ನರ್ ಗಿಲ್ಲಿ ನೋಡಲು ಮುಗಿಬಿದ್ದ ಅಭಿಮಾನಿಗಳು ಮಳವಳ್ಳಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿಷಯ ಆಧಾರಿತ ಗುಣಾತ್ಮಕ ಶಿಕ್ಷಣ ನೀಡುವುದರ ಜೊತೆಗೆ ಮುಂದಿನ ಜೀವನದ ಮೌಲ್ಯಗಳನ್ನು ಕಲಿಸಿಕೊಡುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆ, ಎಂದು ಶ್ರೀ ಲೀಲಾ ನಾಗರಾಜಪ್ಪ ಎಜುಕೇಶನಲ್ ಟ್ರಸ್ಟಿನ ವಿದ್ಯಾಧಾರೆ ಇಂಟರ್ನ್ಯಾಷನಲ್ ಸ್ಕೂಲ್ ನ ಸಂಸ್ಥಾಪಕರಾದ ಹೆಚ್. ವಿ. ಅಶ್ವಿನ್ ಕುಮಾರ್ ತಿಳಿಸಿದರು. ವಳಗೆರೆ ದೊಡ್ಡಿ ಗ್ರಾಮದಲ್ಲಿರುವ ವಿದ್ಯಾಧಾರೆ ಇಂಟರ್ನ್ಯಾಷನಲ್ ಸ್ಕೂಲಿನ ಪ್ರಥಮ ವರ್ಷದ ವಾರ್ಷಿಕ ಮಹೋತ್ಸವ ಕಾರ್ಯಕ್ರಮದಲ್ಲಿ ದಿವಂಗತ ಲೀಲಾ ನಾಗರಾಜಪ್ಪನವರ ಭಾವಚಿತ್ರಕ್ಕೆ ಪುಷ್ಪ ಮಾಲೆ ಅರ್ಪಿಸಿದ ನಂತರ ಅವರು ಮಾತನಾಡಿದರು ಕಾರ್ಯಕ್ರಮವನ್ನು ಮೈಸೂರಿನ ಮಧುಮೇಹ ತಜ್ಞರಾದ ಡಾ. ರಘು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಜೀವನದಮೌಲ್ಯಗಳು, ಸಮಯ ಪ್ರಜ್ಞೆ, ಮತ್ತುಸ್ವಂತಿಕೆಯಿಂದ ಬದುಕನ್ನು ಕಟ್ಟಿಕೊಳ್ಳುವ ಸಾಮರ್ಥ್ಯವನ್ನು ಹೊಂದುವ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವಂತಹ ಶಿಕ್ಷಣ ಇಂದಿನ ಮಕ್ಕಳಿಗೆ ಅವಶ್ಯಕವಾಗಿದೆ ಎಂದರು . ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ದಿವಗಂತ ಸುಬ್ಬಣ್ಣನವರ ಸ್ಮರಣಾರ್ಥವಾಗಿ ರಾಜು ಗುಂಡಾಪುರ ಅವರಿಗೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಾ, ನನ್ನ ಗುರುಗಳಾದ ಸುಬ್ಬಣ್ಣನವರ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ನನ್ನನ್ನು ಭಾಜನನಾಗಿಮಾಡಿರುವುದು ನಿಜಕ್ಕೂ ನನಗೆ ಸಂತೋಷ ತಂದಿದೆ. ಎಂದ ಅವರು ನನ್ನ ವಿದ್ಯಾರ್ಥಿಯಾಗಿದ್ದ ಚಿತ್ರ ನಟ ಯಶ್ ಹಾಗೂ ಬಿಗ್ ಬಾಸ್ ಸ್ಪರ್ಧೆ ವಿಜೇತ ಗಿಲ್ಲಿ ನಟ ಎಂದು ತಿಳಿಸಿದರು. ಬಸವೇಗೌಡರ ಸ್ಮರಣಾರ್ಥಕವಾಗಿಯತ್ತಂಬಾಡಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಲತಾ ರವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ವಿಶೇಷವಾಗಿ ಆಹ್ವಾನಿತರಾಗಿದ್ದಬಿಗ್ ಬಾಸ್ 12ರ ವಿಜೇತ ಗಿಲ್ಲಿ ನಟನನ್ನು ವೇದಿಕೆಯಲ್ಲಿ ಶಾಲಾವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಅವರು ಮಕ್ಕಳೊಂದಿಗೆ ಬೆರೆತು ಹಾಡು ಹೇಳಿ ನೃತ್ಯ ಮಾಡಿ ರಂಜಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನರಂಜಿಸಿತು. ಕಾರ್ಯಕ್ರಮದಲ್ಲಿ ದಳವಾಯಿ ಕೋಡಿಹಳ್ಳಿ ಗ್ರಾಮದ ತಮ್ಮಣ್ಣೇಗೌಡ ,ರವಿ ಕಂಸಾಗರ, ಹೆಚ್.ಎನ್. ಶಿವಕುಮಾರ್ ಜೀವನ್ ಕುಮಾರ್, ಶಾಲೆಯ ಆಡಳಿತ ಮಂಡಳಿಯ ಹೆಚ್.ವಿ. ಶ್ವೇತ ಪರಮೇಶ್, ಅಕ್ಷತಾ ಅಶ್ವಿನ್ ಸೇರಿದಂತೆ ಶಿಕ್ಷಕ ವೃಂದ ಇದ್ದರು.