У нас вы можете посмотреть бесплатно ವಿಜಯಪುರದಲ್ಲಿ ಆರ್ಥಿಕ ಸಾಕ್ಷರತಾ ಅಭಿಯಾನ ; ನಾಗರಿಕರಲ್ಲಿ ಬ್ಯಾಂಕಿಂಗ್ ಸೇವೆಗಳ ಜಾಗೃತಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಬ್ಯಾಂಕ್ ಗಳ ವತಿಯಿಂದ ನಾಗರಿಕರಲ್ಲಿ ಆರ್ಥಿಕ ಸಾಕ್ಷರತಾ ಜಾಗೃತಿ ಮೂಡಿಸಲಾಯಿತು. ಹಣದ ಮಹತ್ವ, ಉಳಿತಾಯದ ಅವಶ್ಯಕತೆ, ಬ್ಯಾಂಕಿಂಗ್ ಸೇವೆಗಳು, ಡಿಜಿಟಲ್ ವ್ಯವಹಾರಗಳು, ATM ಬಳಕೆ, UPI ವಹಿವಾಟು ಹಾಗೂ ಮತ್ತಿತರ ವಿಚಾರಗಳ ಕುರಿತು ವಿವರಣೆ ನೀಡಲಾಯಿತು. ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಹಾಗೂ ಸುರಕ್ಷಾ ಯೋಜನೆಯ 5 ಮಂದಿ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಾದ ವಿಕಾಸ್ ಭಗೋತ್ರ, ವಿಜಯಪುರ ಜಿಲ್ಲೆಯ ಲೀಡ್ ಬ್ಯಾಂಕ್ ಮ್ಯಾನೇಜರ್ ಸಿದ್ದಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಬ್ಯಾಂಕಿನ ಆರ್ಥಿಕ ಸಾಕ್ಷರತಾ ಸಲಹೆಗಾರ ವೀರೇಶ ಡೆಂಗಿ, ಯಾವುದೇ ಬ್ಯಾಂಕ್ ಮೊಬೈಲ್ ಅಪ್ಲಿಕೇಷನ್ ಗಳನ್ನು ಕಳುಹಿಸುವುದಿಲ್ಲ. ಆ ರೀತಿಯ ಲಿಂಕ್ ಗಳನ್ನು ಬಳಸಬೇಡಿ ಎಂದು ಸಲಹೆ ನೀಡಿದರು. ಪ್ರಧಾನಮಂತ್ರಿ ಜೀವನಜ್ಯೋತಿ ಬೀಮಾ ಯೋಜನೆಗೆ ವರ್ಷಕ್ಕೆ ಒಮ್ಮೆ 20 ರೂಪಾಯಿಗಳನ್ನು ಪಾವತಿಸಿದರೆ ಅಕಾಲಿಕ ಮರಣದ ಸಂದರ್ಭದಲ್ಲಿ ಕುಟುಂಬದ ಅವಲಂಬಿತರಿಗೆ 2 ಲಕ್ಷ ರೂಪಾಯಿಗಳ ಕ್ಲೇಮ್ ಸಿಗಲಿದೆ. ಎಲ್ಲರೂ ಈ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ದೂರದರ್ಶನದೊಂದಿಗೆ ಲೀಡ್ ಬ್ಯಾಂಕ್ ನ ಸಿದ್ದಯ್ಯ, ಇಂದು 5 ಮಂದಿ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಜೀವನ್ ಬಿಮಾ ಯೋಜನೆಯ ಚೆಕ್ ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು. ಫಲಾನುಭವಿ ಅಂಜಲಿ ಬಿರಾದಾರ್, ತಮ್ಮ ತಾಯಿ ವಾರ್ಷಿಕ 20 ರೂಪಾಯಿಗಳನ್ನು ಪಾವತಿಸಿ ವಿಮೆಯ ಸೌಲಭ್ಯ ಪಡೆದಿದ್ದರಿಂದಾಗಿ ಇಂದು 2 ಲಕ್ಷ ರೂಪಾಯಿಗಳ ಕ್ಲೇಮ್ ಸಿಕ್ಕಿದೆ. ಕುಟುಂಬಕ್ಕೆ ಅನುಕೂಲವಾಗಿದೆ ಎಂದರು. ಮತ್ತೋರ್ವ ಫಲಾನುಭವಿ ಸವಿತಾ, ತಮ್ಮ ಪತಿ ಅಪಘಾತದಲ್ಲಿ ಮೃತಪಟ್ಟಿದ್ದರು. ಕೇಂದ್ರ ಸರ್ಕಾರದ ಯೋಜನೆಯಿಂದ 2 ಲಕ್ಷ ರೂಪಾಯಿ ದೊರೆತಿರುವುದು ಸಾಕಷ್ಟು ನೆರವಾಗಿದೆ ಎಂದು ಹೇಳಿದರು. #LiveDDChandanaNews #DDChandanaNews #DDChandana #DDKannada